Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಳ್ಳಿತೆರೆಗೆ ಶ್ರುತಿ, ಮಹೇಂದರ್ ತೆರೆಮರೆಯ ಕತೆ!
'ನಾಯಕಿ'ಎಂಬ ಹೊಸ ಶೀರ್ಷಿಕೆಯನ್ನು ನಿರ್ಮಾಪಕ ರಮೇಶ್ ಯಾದವ್ ನೋಂದಾಯಿಸಿಕೊಂಡಿದ್ದಾರೆ. ಈ ಶೀರ್ಷಿಕೆಗೆ 'ತೆರೆಮರೆಯಲ್ಲಿ'ಎಂಬ ಅಡಿ ಬರಹವನ್ನು ಕೊಟ್ಟು ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಮತ್ತೊಂದು ಮುಖ್ಯವಾದ ಅಂಶವೆಂದರೆ ಈ ಚಿತ್ರ ನಟಿ ಶ್ರುತಿ ಮತ್ತು ಎಸ್ ಮಹೇಂದರ್ ಅವರ 'ಕತೆ'ಯನ್ನು ಒಳಗೊಂಡಿದೆಯಂತೆ!
ಮಹೇಂದರ್ ಅವರಿಂದ ವಿವಾಹ ವಿಚ್ಛೇದನ ಕೋರಿ ಶ್ರುತಿ ಇತ್ತೀಚೆಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಗೊತ್ತೇ ಇದೆ. ಇವರಿಬ್ಬರ ವಿವಾಹ ವಿಚ್ಚೇದನ ಪ್ರಕರಣ ಪ್ರಮುಖ ಪತ್ರಿಕೆಗಳ ಮುಖಪುಟವನ್ನು ಅಲಂಕರಿಸಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಶ್ರುತಿ ಮತ್ತೊಬ್ಬ ಯುವ ನಿರ್ದೇಶಕ, ಪತ್ರಕರ್ತ ಚಕ್ರವರ್ತಿ ಅವರನ್ನು ಮದುವೆಯಾಗುತ್ತಿರುವುದಾಗಿ ಈಗಾಗಲೇ ಘೋಷಿಸಿಕೊಂಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಚಿತ್ರಕತೆಯಾಗಿಸುವ ತವಕದಲ್ಲಿ ಯಾದವ್ ಇದ್ದಾರೆ. ಈ ಹಿಂದೆ ಯಾದವ್ ಅವರು ಶ್ರುತಿ ಅವರೊಂದಿಗೆ 'ಅಕ್ಕ ತಂಗಿ' ಚಿತ್ರವನ್ನು ನಿರ್ಮಿಸಿದ್ದರು. ಶ್ರುತಿ ಮತ್ತು ಮಹೇಂದರ್ ಜೋಡಿಯ ಕೊನೆಯ ಚಿತ್ರ ಅದಾಗಿತ್ತು.
ಈ ಬಗ್ಗೆ ಯಾದವ್ ಪ್ರತಿಕ್ರಿಯಿಸುತ್ತಾ, ಚಿತ್ರದ ಶೀರ್ಷಿಕೆಯನ್ನು 'ನಾಯಕಿ, ತೆರೆಮರೆಯಲ್ಲಿ' ಎಂಬ ಶೀರ್ಷಿಕೆಯನ್ನು ನೋಂದಾಯಿಸಿಕೊಂಡಿದ್ದೇನೆ. ಆದರೆ ಚಿತ್ರಕತೆ ಇನ್ನೂ ಅಂತಿಮವಾಗಿಲ್ಲ. ಹಿಂದಿಯ 'ಫ್ಯಾಷನ್'ಚಿತ್ರವೇ ತಮಗೆ ಸ್ಫೂರ್ತಿ. ನಟಿಯೊಬ್ಬಳ ಜೀವನದಲ್ಲಿ ತೆರೆಯ ಹಿಂದೆ ನಡೆದಂತಹ ಘಟನೆಗಳನ್ನು ಚಿತ್ರ ಮಾಡಲು ಹೊರಟಿದ್ದೇನೆ ಎಂದರು.
(ದಟ್ಸ್ ಕನ್ನಡ ಚಿತ್ರವಾರ್ತೆ)
ಎರಡನೇ
ಮದುವೆಗೆ
ಸಜ್ಜಾದ
ನಟಿ
ಶ್ರುತಿ
ವಿವಾಹ
ವಿಚ್ಛೇದನಕ್ಕಾಗಿ
ಅರ್ಜಿ
ಸಲ್ಲಿಸಿದ
ನಟಿ
ಶ್ರುತಿ
ಟಿವಿ
9
:
ಚಕ್ರವ್ಯೂಹದಲ್ಲಿ
ಸಿಲುಕಿದ
ಶ್ರುತಿ