Don't Miss!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿಗೆ ಬಿಜೆಪಿಯ ಹೊಸ ಸಂಗಾತಿಯನ್ನ ಕೇಳಿ ಎಂದು ಟಾಂಗ್ ಕೊಟ್ಟ ಸಿದ್ದರಾಮಯ್ಯ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಲೋಕಸಭಾ ಚುನಾವಣೆ 2024: ಟಾಪ್ 10 ಶ್ರೀಮಂತ ಅಭ್ಯರ್ಥಿಗಳು ಇವರು
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಮ್ಯಾ ಇಲ್ಲದೇ ಚಿತ್ರಮುಗಿಸ್ತೇನೆ ಎಂದ ಸುದೀಪ್
ರಮ್ಯಾ ಇಲ್ಲದೆಯೇ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರವನ್ನು ಮುಗಿಸುತ್ತೇನೆ. ಎಲ್ಲಕ್ಕಿಂತ ಗೌರವ ಮುಖ್ಯ. ಯಾವುದೇ ತಪ್ಪಿಲ್ಲದೆ ಅವ್ಯಾಚ್ಯ ಶಬ್ದಗಳಿಂದ ನಾವೇಕೆ ಬೈಸಿಕೊಳ್ಳಬೇಕು. ಯಾರಿಗೆ ಬೇಕು ನಿಮ್ಮ ಚಿತ್ರ ಎಂದು ಮುಖಕ್ಕೆ ಉಗಿದರೆ ಇಂತಹವರ ಜತೆ ಚಿತ್ರ ಮಾಡುವುದಾದರೂ ಹೇಗೆ ಎಂದು ಸುದೀಪ್ ಹೇಳಿದ್ದಾರೆ.
'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ನಟಿ ರಮ್ಯಾ ನಿರ್ದೇಶಕರ ಜತೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಚಿತ್ರದನಟ ಮತ್ತು ನಿರ್ದೇಶಕ ಸುದೀಪ್ ಇಂದು ಪ್ರತಿಕ್ರಿಯೆ ನೀಡಿದರು. ಮಾಧ್ಯಮಗಳಿ ಪ್ರತಿಕ್ರಿಯಿಸಿರುವ ಸುದೀಪ್, ರಮ್ಯಾ ಅವರು ಪತ್ರಿಕೆಗಳಿಗೆ ನೀಡಿರುವ ಹೇಳಿಕೆಗಳು ನಿರಾಧಾರ ಎಂದು ಸ್ಪಷ್ಟಪಡಿಸಿದ್ದಾರೆ.
ಇದಿಷ್ಟೇ ಅಲ್ಲದೆ ರಮ್ಯಾ ಅವರು ಚಿತ್ರೀಕ್ರಣಕ್ಕೆ ತಡವಾಗಿ ಬರುತ್ತಿದರು. ಚಿತ್ರ ನಿರ್ದೇಶಕರಿಗೆ ಮೂರು ಕಾಸಿನ ಬೆಲೆ ಕೊಡುತ್ತಿರಲಿಲ್ಲ, ಇಂತಹ ನಟಿಯೊಂದಿಗೆ ತಮಗೆ ಚಿತ್ರ ಮುಂದುವರಿಸಲು ಇಷ್ಟವಿಲ್ಲ. ಶಿವರಾಜ್ ಕುಮಾರ್, ವಿಷ್ಣುವರ್ಧನ್ ಅವರಂತಹ ಹಿರಿಯ ಕಲಾವಿದರೇ ನಿರ್ದೇಶಕ, ಸಹ ಕಲಾವಿದರನ್ನು ಗೌರವದಿಂದ ಕಾಣುತ್ತಾರೆ.
ನಾನು ಇದುವರೆಗೂ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಎಲ್ಲೂ ಇಷ್ಟೊಂದು ಅವಮಾನವಾಗಿಲ್ಲ ಎಂದರು. ಸಮಾಧಾನ ಪಡಿಸಲು ಹೋದರೆ ''ನೀನ್ಯಾರು ಕೇಳೋದಕ್ಕೆ, F*** your film''ಎಂದು ಮುಖಕ್ಕೆ ಹೊಡೆದಂತೆ ಹೇಳಿದರು.
ಚಿತ್ರದ ಪ್ರಚಾರಕ್ಕಾಗಿ ನಡೆದ ಘಟನೆ ಇದಲ್ಲ ಎಂದು ಸ್ಪಷ್ಟಪಡಿಸಿರುವ ಸುದೀಪ್, ಚಿತ್ರದಲ್ಲಿ ಬದಲಾವಣೆ ಮಾಡುತ್ತೇನೆ ಎಂದಿದ್ದಾರೆ. ರಮ್ಯಾರೊಂದಿಗೆ ಚಿತ್ರವನ್ನು ಮುಂದುವರಿಸಲು ಇಷ್ಟವಿಲ್ಲ. ಚಿತ್ರವನ್ನು ಖಂಡಿತ ಪೂರ್ಣಗೊಳಿಸುತ್ತೇನೆ. ನನ್ನಿಂದ ನಿರ್ಮಾಪಕರಿಗೆ ತೊಂದರೆ ಆಗಬಾರದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ಚಿತ್ರೀಕರಣ ವೇಳೆ ದೃಶ್ಯವೊಂದನ್ನು ರೀಟೇಕ್ ಮಾಡಬೇಕು ಎಂದು ರಮ್ಯಾ ಹೇಳಿದ್ದರು. ಆದರೆ ನೃತ್ಯ ನಿರ್ದೇಶಕ ಹರ್ಷ ಅದರ ಅವಶ್ಯಕತೆ ಇಲ್ಲ ಎಂದಿದ್ದಾರೆ. 'ಮೊದಲು ನೃತ್ಯ ಕಲಿತು ನನಗೆ ಹೇಳಿಕೊಡಲು ಬರಬೇಕು. ಐ ಡೇಂಟ್ ಕೇರ್ ಎಬೌಟ್ ಯುವರ್ ಡಾನ್ಸ್' ಎಂದು ರಮ್ಯಾ ಹೇಳಿದ್ದಾರೆ. ಮಾತಿನ ಚಕಮಕಿ ನಡೆದು ಜಗಳ ತಾರಕಕ್ಕೇರಿದೆ. ಕೊನೇ ಹಂತದಲ್ಲಿರುವ ಜಸ್ಟ್ ಮಾತಲ್ಲಿ ಚಿತ್ರಕ್ಕೆ ರಮ್ಯಾ ಕೈಕೊಟ್ಟಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)