Don't Miss!
- News ಬೆಂಗಳೂರಿನಲ್ಲಿ 647 ಎಕರೆಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಕೆಐಎಡಿಬಿ ಯೋಜನೆ
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುಂಡು ಪಾರ್ಟಿ ನಿಷೇಧ ಚಿತ್ರಾನ್ನ! ಚಿತ್ರಾನ್ನ?
*ಜಯಂತಿ
ಮೊದಲನೆಯದಾಗಿ ಶುಕ್ರವಾರ ಸಂಜೆ ಗ್ರೀನ್ಹೌಸ್ನಲ್ಲಿ ಏಳು ಗಂಟೆಗೆ ಸರಿಯಾಗಿ 'ಪೊರ್ಕಿ' ಚಿತ್ರದ ಪ್ರೆಸ್ಮೀಟ್ ಆಯೋಜಿಸಲಾಗಿತ್ತು. ಇದರ ನಿರ್ಮಾಪಕ ಯಾರು ಅನ್ನೋದು ಗುಟ್ಟು. ಅರ್ಪಿಸಿದ್ದು ಪತ್ರಕರ್ತ ಗಣೇಶ್ ಕಾಸರಗೋಡು. ದರ್ಶನ್ ನಾಯಕ. ರಾತ್ರಿ ಗುಂಡು ಪಾರ್ಟಿಯೂ ಇತ್ತು ಅನ್ನೊದು ಕೆ.ಸಿ.ಎನ್.ಚಂದ್ರು ಗಮನಕ್ಕೆ.
ಶನಿವಾರ, ಅಂದರೆ 24ನೇ ತಾರೀಖು ಸಾಯಂಕಾಲ 7ಕ್ಕೆ ಛಾನ್ಸರಿ ಹೋಟೆಲಿನಲ್ಲಿ ಇನ್ನೊಂದು ಪ್ರೆಸ್ಮೀಟ್. 'ಜೊತೆಗಾರ' ಚಿತ್ರದ ನಿರ್ಮಾಪಕ ಅಶ್ವಿನಿ ರಾಮ್ಪ್ರಸಾದ್ ಇದನ್ನು ಆಯೋಜಿಸಿದ್ದಾರೆ. ಯಾರು ಏನೇ ಹೇಳಿಕೊಳ್ಳಲಿ, ನನಗೆ ಪ್ರಚಾರ ಬೇಕು. ಪತ್ರಕರ್ತರು ಬೇಕು ಅಂತ ರಾಮ್ಪ್ರಸಾದ್ ಎದೆ ಮುಟ್ಟಿಕೊಂಡು ಹೇಳುತ್ತಿದ್ದಾರೆ.
ಇನ್ನು ಭಾನುವಾರದ ಮಾತು. ಆ ದಿನ ಸಿನಿಮಾ ಸುದ್ದಿಮಿತ್ರರೆಲ್ಲಾ ಸೇರಿ ಮೀಟ್ ದಿ ಪ್ರೆಸ್ ಆಯೋಜಿಸಿದ್ದಾರೆ. ಕೆ.ಮಂಜು ಗ್ರೀನ್ಹೌಸ್ನಲ್ಲಿ ಸಂಜೆ 7ಕ್ಕೆ ಮುಕ್ತವಾಗಿ ಮಾತಾಡಲಿದ್ದಾರೆ. ಅವರೂ ನಿರ್ಮಾಪಕರ ಸಂಘದ ಫರ್ಮಾನನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ದುಡ್ಡು ನಮ್ಮದು. ನಾವು ಏನಾದ್ರೂ ಮಾಡ್ಕೋತೀವಿ ಅನ್ನೋ ಧಾಟಿಯಲ್ಲಿ ಅವರು ಮಾತಾಡಿದ್ದಾರೆ.
ಈ ಎಲ್ಲಾ ವಿದ್ಯಮಾನಗಳ ಸಾರ- ನಿಯಮ ಇರೋದು ಮುರಿಯಲಿಕ್ಕೆ!
ಅಂದಹಾಗೆ, ಕೆಸಿಎನ್ ಚಂದ್ರು ಕೈಲಿ ದರ್ಶನ್ ಕಾಲ್ಷೀಟ್ ಇದೆ. ಒಂದು ವೇಳೆ ಅವರು ಪೊರ್ಕಿ ಪ್ರೆಸ್ಮೀಟ್ಗೆ ಕ್ಯಾತೆ ತೆಗೆದರೆ? ಹಾಗೇನೂ ಆಗೋಲ್ಲ ಬಿಡಿ. ಎಷ್ಟೇ ಆದರೂ ಇವರೆಲ್ಲಾ ಸಿನಿಮಾದೋರೇ ಅಲ್ಲವೇ?
ಪೂರಕ
ಓದಿಗೆ
ಘಾ
ನಿರ್ಮಾಪಕರಿಗೆ
ಗುಂಡು
ಪಾರ್ಟಿ
ನಿಷೇಧ!