Don't Miss!
- Automobiles 5 ರೂ. ಚಿಲ್ಲರೆ ಕೊಟ್ಟಿಲ್ಲವೆಂದು ರೊಚ್ಚಿಗೆದ್ದ ಪ್ರಯಾಣಿಕ: ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದೇನು ಗೊತ್ತಾ?
- News India Weather: ಮುಂದಿನ ಮೂರು ದಿನ ದೇಶದ ಈ ಭಾಗದಲ್ಲಿ ಅಬ್ಬರದ ಮಳೆ ಮುನ್ಸೂಚನೆ, ಎಲ್ಲಿಲ್ಲಿ?-ಮಾಹಿತಿ
- Finance Shilpa Shetty: ಇಡಿಯಿಂದ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಅವರ 98 ಕೋಟಿ ಮೌಲ್ಯದ 2 ಫ್ಲಾಟ್, ಷೇರು ವಶ
- Technology Realme: ರಿಯಲ್ಮಿ C65 5G ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! 6.67″ 120Hz ಡಿಸ್ಪ್ಲೆ...
- Lifestyle ಮಾಲ್ನೊಳಗೆ ನುಗ್ಗಿದ 100ಕ್ಕೂ ಹೆಚ್ಚು ನಾಯಿಗಳು..! ಕೋಳಿ ಕಾಲು ತೋರಿಸಿ ಹಿಡಿದ ಜನ..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರತ್ನಜನ್ ರತ್ನನ್ ಪದಗಳ್ ಕೇಳುವಂತವರಾಗಿ
ನಾನು ಜೀವನದಲ್ಲಿ ಯಾರಿಗೆ ಮೋಸ ಮಾಡಿದ್ರೂ ಟೈಮಿಗೆ ಮೋಸ ಮಾಡಲ್ಲ. ನಂಗೆ ಸಮಯ ಅನ್ನೋದು ಜೀವನದ ಅಂಗ ಇದ್ದ ಹಾಗೆ. ಸರಿಯಾದ ಸಮಯಕ್ಕೆ ಬಾರದೇ ಪೋಸ್ ಕೊಡುವವರನ್ನು ಕಂಡರೆ ಕೆಂಡದಂಥ ಕೋಪ ಆತಾ ಹೈ! ನಿರ್ದೇಶಕ ರತ್ನಜ ಹಿಂದೊಮ್ಮೆ ಹೀಗೆ ಹೇಳಿದ್ದರು. ಹಾಗೆ ಹೇಳಲು ಕಾರಣವಿತ್ತು.
ವಿಷಯಕ್ಕೆ ಬರುವ ಮುನ್ನ ಈ ಫ್ಲ್ಯಾಷ್ಬ್ಯಾಕ್ ಓದಿ... ಇದೇ ರತ್ನಜ ನಿರ್ದೇಶನದ ನೆನಪಿರಲಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಸರಿಸುಮಾರು ಮೂರು ವರ್ಷದ ಹಿಂದೆ ನಡೆದಿತ್ತು. ನಟಿ ತಾರಾ ಮುಖ್ಯ ಅತಿಥಿಯಾಗಿದ್ದರು. ತಾರಾ ಅರ್ಧಗಂಟೆ ತಡವಾಗಿ ಬಂದರು. ಆಗ ರತ್ನಜ, ಅವರನ್ನು ವೇದಿಕೆಗೆ ಕರೆಯಲಿಲ್ಲ.
ಏಕೆಂದರೆ ಟೈಮಮ್ಮಾ ಟೈಮು. ಹತ್ತು ನಿಮಿಷ ತಡವಾಗಿ ಬಂದರೂ ನಾನು ಸಹಿಸೊಲ್ಲ... ಎಂದು ಅವಮಾನಿಸಿದ್ದರು. ಆ ತಡ ಸಕಾರಣವಾಗಿದ್ದರೂ ತಾರಾ ಕಣ್ಣೀರಿಟ್ಟಿದ್ದರು !ಆದರೆ ಅದೇ ರತ್ನಜ ಮೊನ್ನೆ ನಡೆದ ಪ್ರೇಮಿಸಂ ಚಿತ್ರದ ಆಡಿಯೊ ರಿಲೀಸ್ಗೆ ಒಂದೂವರೆ ಗಂಟೆ ತಡವಾಗಿ ಬಂದರು. ಚಿತ್ರದ ಸೂತ್ರಧಾರನೇ ಕಾಣದಿದ್ದಾಗ ಅಲ್ಲಿದ್ದ ಕೆಲ ಪತ್ರಕರ್ತರು ಗುರ್ರ್ ಎಂದರು.
ಇನ್ನೇನು ಎಲ್ಲಾ ಮುಗಿದು, ಮಂಗಳಹಾಡುವ ಹೊತ್ತಿಗೆ ರತ್ನಜ ಆಮೆ ವೇಗದಲ್ಲಿ ಬಂದು, ಲಬಕ್ ಅಂತ ವೇದಿಕೆಯಲ್ಲಿ ಸೆಟ್ಲಾದರು. ಮಾತಿಗೂ ಸಾರಿ ಕೇಳಲಿಲ್ಲ. ಹಿರಿಯಪತ್ರಕರ್ತ ಎ.ಎಸ್.ಮೂರ್ತಿ, ಯಾಕೋ ರಾಜಾ ಕ್ಷಮೆ ಕೇಳುವ ಜಾಯಮಾನ ಇಲ್ಲವಾ ಎಂದದ್ದೇ ರತ್ನಜ ಮೆತ್ತಗೆ ಮುಲು ಮುಲು ಎಂದರು. ಬಹುಶಃ ತಾರಾ ಅಂದು ಅಲ್ಲಿದ್ದರೆ ಏಟಿಗೆ ಎದಿರೇಟು ಸಿಗುತ್ತಿತ್ತೇನೊ.... ಬಾಯಿ ತುಂಬಾ ವೇದಾಂತ ಹೇಳಿ, ಅದೇ ಬಾಯಲ್ಲಿ ಬದನೇಕಾಯಿ ತಿಂದರೆ? ಸಮಯ ಪ್ರಜ್ಞೆಯ ಕುರಿತ ರತ್ನಜನ್ ರತ್ನನ್ ಪದಗಳ್ಗೆ ಈಗ ಹೊಸ ಅರ್ಥ ಬಂದಿದೆ!