Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮದುವೆಗೆ ಮತ್ತೆ ರೆಡಿಯಾಗ್ತಿದ್ದಾರಾ ಪೂಜಾಗಾಂಧಿ?
ನಟಿ ಪೂಜಾಗಾಂಧಿ ಅವರು ಮತ್ತೆ ಮದುವೆಯಾಗಲು ರೆಡಿಯಾಗುತ್ತಿದ್ದಾರಾ? ಈ ಹಿಂದೆ ಅವರು ಬಿಜಿನೆಸ್ ಮ್ಯಾನ್, ರಿಯಲ್ ಎಸ್ಟೇಟ್ ಉದ್ಯಮಿ ಆನಂದ್ ಗೌಡ ಅವರ ಕೈಹಿಡಿಯಲು ಹೊರಟಿದ್ದು ಬಳಿಕ ಅವರಿಬ್ಬರ ಮದುವೆ ಮುರಿದುಬಿದ್ದದ್ದು ಗೊತ್ತೇ ಇದೆ.
ಇದೀಗ ಪೂಜಾಗಾಂಧಿ ಅವರು ಮದುವೆಯಾಗಲು ಹೊರಟಿರುವುದು ನಿರ್ದೇಶಕ ಸತೀಶ್ ಪ್ರಧಾನ್ ಅವರನ್ನು ಎನ್ನುತ್ತವೆ ಮೂಲಗಳು. 'ಅಭಿನೇತ್ರಿ' ಚಿತ್ರದ ನಿರ್ದೇಶಕರ ಕೈಹಿಡಿಯಲಿದ್ದಾರೆ ಪೂಜಾಗಾಂಧಿ ಎಂಬ ಸುದ್ದಿ ಇದೆ. 'ಅಭಿನೇತ್ರಿ' ಚಿತ್ರ ಬಿಡುಗಡೆಗೆಯಾದ ಮೇಲೆ ಇಬ್ಬರ ಮದುವೆ ಎಂಬ ಸುದ್ದಿ ಹರಿದಾಡುತ್ತಿದೆ. [ನಿಶ್ಚಿತಾರ್ಥಕ್ಕೆ ನಿಂತುಹೋದ ಪೂಜಾಗಾಂಧಿ ಮದುವೆ]
"ನಾನು ಚಿತ್ರದ ನಿರ್ಮಾಪಕಿ ಎಂಬುದಕ್ಕಿಂತ ಮುಖ್ಯವಾಗಿ 'ಅಭಿನೇತ್ರಿ' ಚಿತ್ರ ಕೋರ್ಟ್ ಮೆಟ್ಟಿಲೇರಿದಾಗ ನಿರ್ದೇಶಕರು ನನ್ನ ಜೊತೆಗಿರಬೇಕಾಗುತ್ತಿತ್ತು. ಇದನ್ನೇ ಕೆಲವರು ಡೇಟಿಂಗ್ ಎಂದು ತಪ್ಪಾಗಿ ಅರ್ಥೈಸಿದ್ದಾರೆ. ನಮ್ಮಿಬ್ಬರ ನಡುವೆ ಉತ್ತಮ ಸ್ನೇಹಸಂಬಂಧವಿದೆ. ಮದುವೆ ಬಗ್ಗೆ ನಾವು ಯಾ ಹೊತ್ತೂ ಚರ್ಚಿಸಿಲ್ಲ" ಎಂದಿದ್ದಾರೆ ಪೂಜಾಗಾಂಧಿ.
"ಇದಿಷ್ಟೇ ಅಲ್ಲ ನಮ್ಮಿಬ್ಬರ ನಡುವೆ ವಯಸ್ಸಿನ ಅಂತರವಿದೆ. ಸತೀಶ್ ಪ್ರಧಾನ್ (27) ಒಳ್ಳೆಯ ಮನುಷ್ಯ. ನಮ್ಮಿಬ್ಬರ ನಡುವೆ ಲವ್, ಮದುವೆ ವಿಚಾರ ಬರುವ ಸಾಧ್ಯತೆಯೂ ಇಲ್ಲ. ಈ ರೀತಿಯ ವದಂತಿಗಳಿಂದ ನಮ್ಮ ಸ್ನೇಹ ಸಂಬಂಧಕ್ಕೇನು ಧಕ್ಕೆಯಾಗಿಲ್ಲ ಬಿಡಿ" ಎನ್ನುತ್ತಾರೆ ಇತ್ತೀಚೆಗಷ್ಟೇ 31ಕ್ಕೆ ಅಡಿಯಿಟ್ಟ ಪೂಜಾಗಾಂಧಿ.
ಇನ್ನು ಅಭಿನೇತ್ರಿ ಚಿತ್ರದ ನಿರ್ದೇಶಕರಾದ ಸತೀಶ್ ಪ್ರಧಾನ್ ಸಹ ಇದೇ ಮಾತುಗಳನ್ನು ಹೇಳುತ್ತಾರೆ. ಚಿತ್ರವನ್ನು ಗೆಲ್ಲಿಸುವುದು ಹೇಗೆ ಎಂಬುದು ನನಗೆ ಮುಖ್ಯವೇ ಹೊರತು ಪೂಜಾಗಾಂಧಿ ಅವರ ಹೃದಯವನ್ನು ಗೆಲ್ಲುವುದು ಹೇಗೆ ಎಂಬುದಲ್ಲ ಎನ್ನುತ್ತಾರೆ ಸತೀಶ್.