Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆ ಒಂದು ಕೋಟಿ ರೂಪಾಯಿ ಎಲ್ಲಿ ಹೋಯ್ತು.?
ವಿವಾದಗಳಿಂದಲೇ ಗಾಂಧಿನಗರದಲ್ಲಿ ಜನಪ್ರಿಯತೆ ಪಡೆದಿರುವ ನಟಿ ಪೂಜಾ ಗಾಂಧಿ. ಹಾಗ್ನೋಡಿದ್ರೆ, 'ಮುಂಗಾರು ಮಳೆ' ಚಿತ್ರದ ನಂತ್ರ ಪೂಜಾ ಮೇಡಂ ಬೇರೆ ಕಾರಣಗಳಿಗೆ ಸುದ್ದಿ ಆಗಿದ್ದು ಹೆಚ್ಚು.
ಈಗ ಪೂಜಾ ಗಾಂಧಿ ವಿರುದ್ಧ ಒಂದು ಕೋಟಿ ರೂಪಾಯಿ ವಾಪಸ್ ನೀಡದ ಆರೋಪ ಕೇಳಿ ಬಂದಿದೆ. 'ಅಭಿನೇತ್ರಿ' ಚಿತ್ರದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಿದ ಪೂಜಾ ಗಾಂಧಿ, ಡಾ.ಸುರೇಶ್ ಶರ್ಮಾ ಎಂಬುವವರಿಂದ ಒಂದು ಕೋಟಿ ರೂಪಾಯಿ ಸಾಲ ಪಡೆದಿದ್ದರು.
ಸಾಲ ಪಡೆದು ಒಂದು ವರ್ಷವಾದರೂ, ಈವರೆಗೂ ಅದನ್ನ ಹಿಂದಿರುಗಿಸಿಲ್ಲ ಅಂತ ಡಾ.ಸುರೇಶ್ ಶರ್ಮಾ, ಪೂಜಾ ಗಾಂಧಿ ಕಡೆ ಬೆಟ್ಟು ಮಾಡಿ ತೋರಿಸುತ್ತಾರೆ. [ಕೋಟಿ ರೂಪಾಯಿ ಪಂಗನಾಮ ಹಾಕಿದ ಪೂಜಾಗಾಂಧಿ!?]
ಆದ್ರೆ, ಪೂಜಾ ಗಾಂಧಿ ಹೇಳುವ ಕಥೆಯೇ ಬೇರೆ. ಹಣದ ವಿಷಯ ಬಿಟ್ಟು, ಈಗ ಎಲ್ಲರ ಗಮನವನ್ನ ಬೇರೆ ಕಡೆ ಶಿಫ್ಟ್ ಮಾಡಿರುವ ಪೂಜಾ ಗಾಂಧಿ ನಿಜ ಹೇಳುತ್ತಿದ್ದಾರಾ? ಆ ಒಂದು ಕೋಟಿ ರೂಪಾಯಿ ಕಥೆ ಏನಾಯ್ತು? ಮುಂದೆ ಓದಿ....
ಒಂದು ಕೋಟಿ ರೂಪಾಯಿ ಅಂದ್ರೆ ಸುಮ್ನೆನಾ?
ಸಿನಿಮಾದವರಿಗೆ 'ಕೋಟಿ' ಲೆಕ್ಕಕ್ಕೆ ಇಲ್ಲದಿರಬಹುದು. ಆದ್ರೆ, ಸಾಮಾನ್ಯ ಜನರು ಒಂದು ಕೋಟಿ ಅಂದ ತಕ್ಷಣ ಕಣ್ಣು ಬಾಯಿ ಬಿಡುತ್ತಾರೆ. ಒಂದು ಕೋಟಿ ಸಂಪಾದಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗಿರುವಾಗ ನೀವೇ ಹೇಳಿ, ಒಂದು ಕೋಟಿ ಸಾಲ ಕೊಡೋದು ಅಥವಾ ಪಡೆಯೋದು ಸುಲಭನಾ?
ಸಾಲ ತೆಗೆದುಕೊಂಡಿದ್ದು ನಿಜಾನಾ?
ಮೂಲಗಳ ಪ್ರಕಾರ, ನಟಿ ಪೂಜಾ ಗಾಂಧಿ ಸಾಲ ಪಡೆದಿರುವುದು ನಿಜ. 'ಅಭಿನೇತ್ರಿ' ಚಿತ್ರದ ಸಂದರ್ಭದಲ್ಲಿ ಪೂಜಾ ಗಾಂಧಿ ಆರ್ಥಿಕ ಸಂಕಷ್ಟದಲ್ಲಿದ್ದರು. ಹಲವು ವಿವಾದಗಳಿಂದ ಕೋರ್ಟ್ ಗೆ ಅಲೆದಾಡುತ್ತಿದ್ದರು. ಇದರಿಂದಾಗಿ ಸಾಲದ ಅನಿವಾರ್ಯತೆ ಇತ್ತು ಅಂತಾರೆ ಪೂಜಾ ಗಾಂಧಿ ಬಲ್ಲವರು. ಅದೆಲ್ಲಾ ಸುಳ್ಳು ಅಂತ ಪೂಜಾ ಗಾಂಧಿ ಹೇಳ್ತಾರೆ. ಆದ್ರೆ, 'ಒಂದು ಕೋಟಿ' ಅಂತ ಅಷ್ಟು ಸುಲಭವಾಗಿ ಸುಳ್ಳು ಹೇಳಿ ಆರೋಪ ಮಾಡಬಹುದಾ? ಬರೋಬ್ಬರಿ ಒಂದು ಕೋಟಿ ರೂಪಾಯಿಗೆ ಬೆಲೆ ಇಲ್ವಾ?
ಯಾವ ನಂಬಿಕೆ ಮೇಲೆ ಸಾಲ ಕೊಟ್ಟರು?
'ತಿಪ್ಪಜ್ಜಿ ಸರ್ಕಲ್' ಚಿತ್ರದ ಮೂಲಕ ಡಾ.ಸುರೇಶ್ ಶರ್ಮಾಗೆ ಪೂಜಾ ಗಾಂಧಿ ಪರಿಚಯವಾಗಿದ್ದು. ಒಂದೇ ಸಿನಿಮಾದಲ್ಲಿ ಒಂದು ಕೋಟಿ ಸಾಲ ಕೊಡುವಷ್ಟು ಅನ್ಯೋನ್ಯತೆ ಇಬ್ಬರ ನಡುವೆ ಬೆಳೆದಿತ್ತಾ ಅನ್ನೋದು ಬೇರೆ ಮಾತು. ಆದ್ರೆ, ಯಾವುದೇ ದಾಖಲೆಗಳಿಲ್ಲದೇ ಕೇವಲ 100 ರೂಪಾಯಿ ಬಾಂಡ್ ಇಟ್ಟುಕೊಂಡು ಸುರೇಶ್ ಶರ್ಮಾ ಒಂದು ಕೋಟಿ ಸಾಲ ಕೊಟ್ಟೆ ಅಂತ ಹೇಳ್ತಾರೆ.
ಪೂಜಾ ಗಾಂಧಿ ತಿರುಗುಬಾಣ
ಸುರೇಶ್ ಶರ್ಮಾ ಅವರ ಬಳಿ ಯಾವುದೇ ದಾಖಲೆಗಳಿಲ್ಲ ಅಂತ ಒಂದು ಕೋಟಿ ರೂಪಾಯಿ ಪಂಗನಾಮ ಹಾಕೋಕೆ ಪೂಜಾ ಗಾಂಧಿ ಪ್ಲಾನ್ ಮಾಡಿದ್ದಾರೆ ಅನ್ನೋದು ಈಗ ಗಾಂಧಿನಗರದ ಖಾಸ್ ಬಾತ್. [ನಟಿ ಪೂಜಾ ಗಾಂಧಿ ನಸೀಬು ನೆಟ್ಟಗಿಲ್ಲ ಕಣ್ರೀ..]
ದಾಖಲೆಗಳಿಲ್ಲದೇ ವ್ಯವಹಾರ?
ಗಾಂಧಿನಗರದ ಎಷ್ಟೋ ವ್ಯವಹಾರಗಳು ನಡೆಯುವುದೇ ಹಾಗೆ. ಇಲ್ಲಿನ ಬಹುತೇಕ ಎಲ್ಲಾ ವ್ಯವಹಾರವೂ ಬಾಯಿ ಮಾತಿನ ಮೇಲೆ ನಿಂತಿರುತ್ತೆ. ನಿರ್ದೇಶಕರು, ನಟರು ಮತ್ತು ನಿರ್ಮಾಪಕರ ಮಧ್ಯೆ ನಂಬಿಕೆಯೇ ಮೂಲ ಆಧಾರ. ಎಷ್ಟೋ ಕಲಾವಿದರು ಮಾತು ಕೊಟ್ಟಿರುವ ಕಾರಣ, ನಿರ್ಮಾಪಕರಿಗೆ ಕಾಲ್ ಶೀಟ್ ನೀಡುತ್ತಾರೆ. ಇನ್ನೂ ಕೆಲವರು ಅದಕ್ಕೆ ಸಂಭಾವನೆ ಕೂಡ ಪಡೆಯೋಲ್ಲ.
ಇದನ್ನೇ ಅಸ್ತ್ರವಾಗಿ ಬಳಸಿಕೊಂಡ್ರಾ ಪೂಜಾ?
ಗಾಂಧಿನಗರದ ಕೆಲ ಹಿರಿಯರು ಹೇಳುವ ಪ್ರಕಾರ, ಪೂಜಾ ಗಾಂಧಿ ಅಡ್ವಾಂಟೇಜ್ ತೆಗೆದುಕೊಂಡಿದ್ದಾರಂತೆ. ಸನ್ನಿವೇಶವನ್ನ ಉಪಯೋಗಿಸಿಕೊಳ್ಳುತ್ತಿದ್ದಾರಂತೆ.
ಇಬ್ಬರ ಮಧ್ಯೆ ಇತ್ತಂತೆ 'ಕಮಿಟ್ಮೆಂಟ್'.!
ಪೂಜಾ ಗಾಂಧಿ ಮತ್ತು ಸುರೇಶ್ ಶರ್ಮಾ ನಡುವೆ ಒಂದು ಕಮಿಟ್ಮೆಂಟ್ ಇದ್ದ ಕಾರಣ ಹಣದ ವ್ಯವಹಾರ ನಡೆದಿದೆ ಅನ್ನೋದು ಮತ್ತೊಂದು ಮೂಲದ ಮಾಹಿತಿ. ಆ 'ಕಮಿಟ್ಮೆಂಟ್'ಗೂ, ಪೂಜಾ ಗಾಂಧಿ ಕ್ಯಾಮರಾ ಮುಂದೆ ಬಹಿರಂಗ ಪಡಿಸದ ವಿಷಯಕ್ಕೂ ಸಂಬಂಧ ಇದ್ಯಾ? [ಪೂಜಾ ಗಾಂಧಿ ಮುಚ್ಚಿಡುತ್ತಿರುವ 'ಆ' ವಿಷಯವೇನು?]
ಹೇಳೋರು ಕೇಳೋರು ಯಾರೂ ಇಲ್ವಾ?
ಗಾಂಧಿನಗರದಲ್ಲಿ ಸದ್ಯಕ್ಕೆ ಹೇಳೋರು-ಕೇಳೋರು ಅಂತ ಯಾರೂ ಇಲ್ಲ. ಏನೇ ಸಮಸ್ಯೆ ಆದರೂ, ಬಗೆಹರಿಸುವುದಕ್ಕೆ ಅಂತ ಫಿಲ್ಮ್ ಚೇಂಬರ್ ಇದ್ದರೂ, ಅದು 'ಉಳ್ಳವರ ಶಿವಾಲಯ' ಆಗಿದೆ. ಒಂದು ಕೋಟಿ ರೂಪಾಯಿ ಸಾಲ ವಾಪಸ್ ಕೊಡಿಸಿ ಅಂತ ಫೆಬ್ರವರಿಯಲ್ಲಿ ವಾಣಿಜ್ಯ ಮಂಡಳಿಯಲ್ಲಿ ದೂರು ಕೊಟ್ಟಿದ್ದರೂ, ಈ ತನಕ ಪ್ರಯೋಜನ ಆಗಿಲ್ಲ.
ಸ್ಟೇಷನ್ ಗೆ ಹೋಗಲ್ಲ.! ಕೋರ್ಟ್ ಗೆ ಬರಲ್ಲ.!
ಫಿಲ್ಮ್ ಚೇಂಬರ್ ಗೆ ಮಾತ್ರ ದೂರು ನೀಡಿರುವ ಸುರೇಶ್ ಶರ್ಮಾ, 'ಇಬ್ಬರಿಗೂ ತೊಂದರೆಯಾಗದಂತೆ ವಿವಾದವನ್ನ ಬಗೆಹರಿಸಿ' ಅಂತ ಪತ್ರ ಬರೆದಿದ್ದಾರೆ. ಅಲ್ಲದೇ, ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಟ್ಟಿಲ್ಲ. ಇನ್ನೂ ಕೋರ್ಟ್ ಗೆ ಹೋದರೆ, ಪೂಜಾ ಗಾಂಧಿಗೆ ಪ್ರಾಬ್ಲಂ ಅಂತಾರೆ. ಇದರ ಅರ್ಥ ಏನು? [ನಟಿ ಪೂಜಾ ವಿರುದ್ಧ ಸುರೇಶ್ ಶರ್ಮಾ ನೀಡಿರುವ ದೂರಿನಲ್ಲೇನಿದೆ?]
ಒಂದು ಕೋಟಿ ರೂಪಾಯಿ ಎಲ್ಲಿ?
ಸುರೇಶ್ ಶರ್ಮಾ ಹಣಕಾಸಿನ ವಿಷಯ ಮಾತನಾಡಿದರೆ, ಪೂಜಾ ಗಾಂಧಿ 'ಡರ್ಟಿ ಅಂಡ್ ಚೀಪ್' ವಿಷಯ ಪ್ರಸ್ತಾಪ ಮಾಡಿ ಹೊಸ ದಿಕ್ಕಿಗೆ ವಿವಾದವನ್ನ ಕೊಂಡೊಯ್ದಿದ್ದಾರೆ. ಹಾಗಾದ್ರೆ, ಒಂದು ಕೋಟಿ ರೂಪಾಯಿ ಮಾತೆಲ್ಲಿ? ಯಾರ ವಾದ ಸತ್ಯ? 'ಕೊಟ್ಟೋನು ಕೋಡಂಗಿ ಈಸ್ಕೊಂಡೋನು ಈರಭದ್ರ' ಅನ್ನೋ ಗಾದೆ ಮಾತು ಈ ವಿವಾದಕ್ಕೆ ಹೇಳಿಮಾಡಿಸಿದಂತಿದೆಯಾ? ಅಳೆದು ತೂಗಿ ನೀವೇ ನಿರ್ಧರಿಸಿ.