'ಭಿಕ್ಷುಕ' ಆಗ್ತಾರಾ 'ಕೃಷ್ಣ' ಅಲಿಯಾಸ್ ಅಜೇಯ್ ರಾವ್.?
ಸ್ಯಾಂಡಲ್ ವುಡ್ ನ 'ಕೃಷ್ಣ' ಅಲಿಯಾಸ್ ಅಜೇಯ್ ರಾವ್ ಅವರು ಇದೀಗ ಮತ್ತೊಂದು ರೀಮೇಕ್ ಚಿತ್ರದಲ್ಲಿ ನಟಿಸಲಿದ್ದಾರೆ. 'ಕೃಷ್ಣ ರುಕ್ಕು' ಚಿತ್ರದ ಸಾಧಾರಣ ಯಶಸ್ಸಿನ ನಂತರ ಇದೀಗ 'ಜಾನ್ ಜಾನಿ ಜನಾರ್ದನ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿರುವಾಗಲೇ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಅಂದಹಾಗೆ ಈ ಬಾರಿ ಅಜೇಯ್ ರಾವ್ ಕಾಣಿಸಿಕೊಳ್ಳುತ್ತಿರುವುದು ಕಾಲಿವುಡ್ ನಟ ವಿಜಯ್ ಆಂಟನಿ ಅವರ 'ಪಿಚ್ಚಕಾರನ್' (ಭಿಕ್ಷುಕ) ಎಂಬ ತಮಿಳು ಚಿತ್ರದಲ್ಲಿ. ಮಾರ್ಚ್ ನಲ್ಲಿ ತೆರೆಕಂಡಿದ್ದ ಈ ತಮಿಳು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ, ಬಾಕ್ಸಾಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿತ್ತು.[ವಿಮರ್ಶೆ: ಉಡಾಫೆ ಕೃಷ್ಣ, ಬಜಾರಿ ರುಕ್ಕು ಕಥೆ ಚೆನ್ನಾಗಿದೆ]

ಇದೀಗ ಅದೇ ಸಿನಿಮಾದ ರೀಮೇಕ್ ಹಕ್ಕನ್ನು ಜಾಕ್ ಮಂಜುನಾಥ್ ಮತ್ತು ನಿರ್ಮಾಪಕ ಯೋಗಿ ದ್ವಾರಕೀಶ್ ಅವರು ಜಂಟಿಯಾಗಿ ಖರೀದಿ ಮಾಡಿದ್ದು, ಅಜೇಯ್ ರಾವ್ ಅವರ ಜೊತೆ ಮಾತು-ಕತೆ ನಡೆದಿದೆ.
ನಟ ಅಜೇಯ್ ರಾವ್ ಮತ್ತು ನಿರ್ಮಾಪಕ ಯೋಗೀಶ್ ದ್ವಾರಕೀಶ್ ಅವರು ಹೊಸ ಚಿತ್ರದ ಮೂಲಕ ಒಂದಾಗುತ್ತಿದ್ದಾರೆ ಎಂದು ನಾವು ನಿಮಗೆ ಈ ಮೊದಲು ಹೇಳಿದ್ವಿ. ಆದರೆ ಯಾವ ಸಿನಿಮಾ, ನಿರ್ದೇಶಕರು ಯಾರು ಅಂತ ಹೇಳಿರಲಿಲ್ಲ.[ದ್ವಾರಕೀಶ್ ಪ್ರೊಡಕ್ಷನ್ಸ್ ನಲ್ಲಿ ಅಜೇಯ್ ರಾವ್ ಹೊಸ ಚಿತ್ರ.?]

ಆದರೆ ಇದೀಗ ತಮಿಳು ಚಿತ್ರ 'ಪಿಚ್ಚಕಾರನ್' ರೀಮೇಕ್ ಹಕ್ಕು ಖರೀದಿಸಿರುವ ಯೋಗೀಶ್ ಅವರು ಅಜೇಯ್ ರಾವ್ ಜೊತೆ ಇದೇ ಸಿನಿಮಾ ಮಾಡುತ್ತಿರಬಹುದು ಎಂಬ ಅನುಮಾನ ಕಾಡುತ್ತದೆ.
ಜಾಕ್ ಮಂಜು ಅವರ 'ಮೈಸೂರು ಟಾಕೀಸ್' ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಇತ್ತೀಚೆಗೆ 'ಮೈಸೂರು ಟಾಕೀಸ್' ಬ್ಯಾನರ್ ಜೊತೆ ನಿರ್ಮಾಪಕ ಯೋಗೀಶ್ ಅವರು ಕೂಡ ಕೈ ಜೋಡಿಸಿದ್ದಾರೆ.
ಸದ್ಯಕ್ಕೆ ನಿರ್ಮಾಪಕ ಯೋಗೀಶ್ ಅವರ ಕಡೆಯಿಂದ ಹೊರಬಿದ್ದಿರುವ ಖಾಸ್ ಖಬರ್ ಇಷ್ಟು. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕ ತಕ್ಷಣ ನಾವೇ ನಿಮಗೆ ತಿಳಿಸುತ್ತೇವೆ.


Click it and Unblock the Notifications











