Don't Miss!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Technology AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಳೂರಲ್ಲಿ ಪತ್ತೆಯಾದ ಕಿಚ್ಚ ಸುದೀಪ್ ಹಳೇ ಗೆಳೆಯ
ಬಂದೇ ಬಿಟ್ರು, ಇಲ್ಲೀವರೆಗೂ ಗೋವಾದಲ್ಲಿದ್ರೋ ಅಥವಾ ಇನ್ನೆಲ್ಲಿದ್ರೋ ಗೊತ್ತಿಲ್ಲ. 'ಕೆಂಪೇಗೌಡ' ಚಿತ್ರದ ನಿರ್ಮಾಪಕ ಶಂಕರೇಗೌಡರು ಕಾಣಿಸಿಕೊಂಡಿದ್ದಾರೆ, ಅದೂ ಕೂಡ ಅವ್ರ ಸಿನಿಮಾ ಗೋವಾ ರಿಲೀಸಾಗ್ತಿರೋ ಕಾರಣದಿಂದ.
2013
ಆಗಸ್ಟ್
ನಲ್ಲೇ
'ಗೋವಾ'
ಸಿನಿಮಾ
ರಿಲೀಸ್
ಮಾಡೇ
ಮಾಡ್ತೀನಿ
ಅಂತ
ಅವರಿವರ
ಮುಂದೆ
ತೊಡೆ
ತಟ್ಟಿದ್ದ
ಶಂಕರೇಗೌಡ
ತನ್ನ
'ಗೋವಾ'
ಸಿನಿಮಾದಲ್ಲಿ
ನಟ
ಶ್ರೀಕಿಗೆ
ಕೊಡಬೇಕಾದ
ಕಾಸನ್ನೋ
ಕೊಡದೇ
ಕಾಡಿಸಿದ್ರಂತೆ.
['ಕೆಂಪೇಗೌಡ'
ನಿರ್ಮಾಪಕ
ಶಂಕರ್
ಗೌಡ
ನಾಪತ್ತೆ!]
ಇದ್ರಿಂದಾಗಿ ಸಿಟ್ಟಿಗೆದ್ದ ಶ್ರೀಕಿ ಡಬ್ಬಿಂಗ್ ಮಾಡೋದಿಲ್ಲ ಅಂದಿದ್ರಂತೆ. ಈಗ ಡಬ್ಬಿಂಗೂ ಆಗಿದೆ ಸಿನಿಮಾ ರಿಲೀಸ್ ಗೂ ರೆಡಿಯಾಗಿದೆ. ಶಂಕರೇಗೌಡ ಕೂಡ ಬಂದಿದ್ದಾರೆ. ಆದ್ರೆ ಅರ್ಧ ಪತ್ರಿಕಾಗೋಷ್ಠಿ ಮುಗಿದ ಬಳಿಕ ಬಂದ ಶಂಕರೇಗೌಡ ಪತ್ರಕರ್ತರ ಮುಂದೆ ಕಾಣಿಸಿಕೊಳ್ಳಲಿಲ್ಲ.
ಇದಕ್ಕೆ ಕಾರಣವೂ ಇದೆ ಅಂತಿದೆ ಗಾಂಧಿನಗರದ ಪಡ್ಡೆ ಪಟಾಲಂ. ಯಾಕಂದ್ರೆ ಕಿಚ್ಚ ಸುದೀಪ್ ಜೊತೆ ಸಿಸಿಎಲ್, ಸಿನಿಮಾ ಸೇರಿದಂತೆ ಅಲ್ಲಿ ಇಲ್ಲಿ ಎಲ್ಲೆಲ್ಲೂ ಕುಚಿಕೂ ಗೆಳೆಯನಂತೆ ಪೋಸ್ ಕೊಡ್ತಿದ್ದ ಶಂಕರೇಗೌಡ ಇಷ್ಟು ದಿನ ಎಲ್ಲೂ ಸುದೀಪ್ ಜೊತೆ ಕಾಣಿಸಿಕೊಂಡಿರಲಿಲ್ಲ.
ಅದ್ಯಾಕೆ ಅಂತ ಹುಡುಕ್ತಾ ಹೋದಾಗ 'ವರದನಾಯಕ' ಸಿನಿಮಾ ನಿರ್ಮಾಣ ಮಾಡಿದ್ದ ಶಂಕರೇಗೌಡ ಗೆಳೆಯ ಕಿಚ್ಚ ಸುದೀಪುಗೆ ಆಪು ಇಟ್ಟಿದ್ರಂತೆ. ಒಂದು ಬಿಡಿಗಾಸನ್ನೂ ಪಡೆಯದೇ ಗೆಳೆಯ ಚಿರು ಮತ್ತು ಶಂಕರೇಗೌಡಗೆ ಅಂತಾನೇ ಸಿನಿಮಾ ಮಾಡಿದ ಕಿಚ್ಚನಿಗೆ ನಂಬಿಕೆ ದ್ರೋಹ ಮಾಡಿದ್ರಂತೆ ಅನ್ನೋ ಸುದ್ದಿ ಬಂದಿತ್ತು.
'ಜಸ್ಟ್ ಮಾತ್ ಮಾತಲ್ಲಿ' ಶುರುವಾದ ಕಿಚ್ಚ ಮತ್ತು ಶಂಕರೇಗೌಡ ಸ್ನೇಹ ಯಾಕ್ಹಿಂಗಾಯ್ತು. ಕಿಚ್ಚನಿಗೆ ಕಿಚ್ಚು ಹಚ್ಚುವಂತಹದ್ದೇನನ್ನ ಮಾಡಿದ್ರೂ ಶಂಕರೇಗೌಡ, ಈಗ್ಯಾಕೆ ಈ ಅಜ್ಞಾತವಾಸ? ಅವರೇ ಉತ್ತರ ಹೇಳ್ಬೇಕು.