ನಟಿ ಹೇಮಶ್ರೀ ಬಿಟ್ಟು ಹೋದ ಪ್ರಶ್ನೆಗಳ ಸರಮಾಲೆ

ಆತನಿಗೆ ಈಗಾಗಲೆ ಮದುವೆಯಾಗಿದೆ ಎಂದೂ ಹೇಮಶ್ರೀ ಹೇಳಿಕೊಂಡಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೂ ಏರಿದ್ದರಂತೆ. ಇಷ್ಟೆಲ್ಲಾ ಆದರೂ ಯಾಕೆ ಆಕೆಯ ಸಮಸ್ಯೆಗೆ ಪರಿಹಾರ ಸಿಗಲಿಲ್ಲ?
ಹೇಮಶ್ರೀ ಪೋಷಕರದು ತಪ್ಪೇ ಇಲ್ಲವೇ? ಅವರ್ಯಾಕೆ ಈ ರೀತಿಯ ನಿರ್ಧಾರ ತೆಗೆದುಕೊಂಡರು. ಕೇವಲ ಹಣವೊಂದೇ ಕಾರಣವೇ? ಯಾವ ತಂದೆತಾಯಿಯಾದರೂ ಮಕ್ಕಳ ಸುಖವನ್ನಷ್ಟೇ ಬಯಸುತ್ತಾರೆ ತಾನೆ? ಹೇಮಶ್ರೀ ವಿಚಾರದಲ್ಲಿ ಹೀಗೇಕಾಯಿತು?
ಆತನೊಂದಿಗೆ ಬಾಳಲು ಇಷ್ಟವಿಲ್ಲ ಎಂದ ಮೇಲೆ ವಿಚ್ಛೇದನ ಪಡೆಯಬಹುದಿತ್ತಲ್ಲವೇ? ಅದು ಏಕೆ ಸಾಧ್ಯವಾಗಲಿಲ್ಲ? ತನಗೆ ತನ್ನ ಪತಿ ಹಾಗೂ ತಾಯಿಯಿಂದಲೇ ಜೀವ ಬೆದರಿಕೆ ಇದೆ ಎಂದು ದೂರು ಕೊಟ್ಟಿದ್ದರಂತೆ ಹೌದೆ?
ಆಕೆಯ ಅಂತ್ಯಕ್ರಿಯೆ ಸಹ ತರಾತುರಿಯಲ್ಲಿ ನಡೆದಿದ್ದೇಕೆ? ಹೀಗೆ ಪ್ರಶ್ನೆಗಳ ಸರಮಾಲೆಯೇ ಇದೆ ಹೊರತು ಉತ್ತರಗಳು ಮಾತ್ರ ಸ್ಪಷ್ಟವಾಗಿಲ್ಲ. ಈ ಎಲ್ಲಾ ಪ್ರಶ್ನೆಗಳು ಹೇಮಶ್ರೀ ಅವರ ಅಭಿಮಾನಿಗಳು ಹಾಗೂ ಆಕೆಯನ್ನು ಹತ್ತಿರದಿಂದ ಬಲ್ಲವರ ತಲೆ ಕೊರೆಯುತ್ತಿವೆ. ಉತ್ತರ ಆ ದೇವರಿಗೇ ಗೊತ್ತು.
More from Filmibeat
English summary
Many questions are rises on Kannada actress H.N.Hemashree mysterious death. Her father Nagaraj filed a complaint with police, accusing her husband, R Surendra Babu, 48, of murdering her.


Click it and Unblock the Notifications











