ಉಪ್ಪಿ ಚಿತ್ರ 'ಬಸವಣ್ಣ' ಶೀರ್ಷಿಕೆ ಕೊನೆಗೂ ಬದಲು
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಬಸವಣ್ಣ' ಚಿತ್ರದ ಪೋಸ್ಟರ್ ಗಳು ಕರ್ನಾಟಕ ಅಸೆಂಬ್ಲಿಯಲ್ಲೂ ಸದ್ದು ಮಾಡಿ ಗದ್ದಲಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಕಳೆದ ಎರಡು ಮೂರು ದಿನಗಳ ಕಾಲ ತೀವ್ರ ಚರ್ಚೆ- ವಾದ- ವಿವಾದಗಳ ನಂತರ ಚಿತ್ರದ ನಿರ್ದೇಶಕ ಶ್ರೀನಿವಾಸ ರಾಜು ಅವರು ಚಿತ್ರದ ಶೀರ್ಷಿಕೆ ಬದಲಾಯಿಸಲು ಮನಸ್ಸು ಮಾಡಿದ್ದಾರೆ.
ಚಿತ್ರದ ಪೋಸ್ಟರ್ ಅಷ್ಟೇ ಅಲ್ಲ ಚಿತ್ರದ ಶೀರ್ಷಿಕೆ ಕೂಡಾ ಯಾವುದೇ ಸಮುದಾಯವನ್ನು ಉದ್ದೇಶಿಸಿ ರಚಿಸಿದ್ದಲ್ಲ. ನಮ್ಮ ಚಿತ್ರದ ಕಥೆಯಲ್ಲಿ ಯಾವ ಧರ್ಮವನ್ನು ಅಲ್ಲಗೆಳೆದಿದ್ದಿಲ್ಲ. ಸುಮ್ಮನೆ ವಿವಾದ ಬೆಳೆಸುವುದು ಇಷ್ಟವಿಲ್ಲ. ಹೀಗಾಗಿ ಚಿತ್ರದ ಟೈಟಲ್ ಬದಲಾಯಿಸಲು ಚಿತ್ರ ತಂಡ ತೀರ್ಮಾನಿಸಿದೆ ಎಂದು ಶ್ರೀನಿವಾಸ ರಾಜು ಅವರು ಖಾಸಗಿ ಸುದ್ದಿ ವಾಹಿನಿಯೊಡನೆ ಮಾತನಾಡುತ್ತಾ ಹೇಳಿದರು.

ಶುಕ್ರವಾರ ಬೆಳಗ್ಗೆ 12 ಗಂಟೆ ವೇಳೆಗೆ ಚಿತ್ರದ ಹೆಸರನ್ನು ಬಸವಣ್ಣ ಅಥವಾ ವೀರ ಬಸವಣ್ಣ ಎಂಬುದರ ಬದಲಿಗೆ 'ಬ್ರಾಹ್ಮಣ' ಎಂದು ಬದಲಾಯಿಸಲಾಗಿದೆ ಎಂದು ಶ್ರೀನಿವಾಸರಾಜು ಘೋಷಿಸಿದ್ದಾರೆ. ಇನ್ನಷ್ಟು ಮಾಹಿತಿ ನಿರೀಕ್ಷಿಸಿ...
More from Filmibeat
English summary
Director Srinivas Raju decided to change his film name from Veera Basavanna to Brahmana after facing opposition from Veerashaiva community leaders. Recently former CM BS Yeddyurappa also opposed in Assembly.
upendra basavanna yeddyurappa karnataka assembly controversy ಉಪೇಂದ್ರ ಬಸವಣ್ಣ ಯಡಿಯೂರಪ್ಪ ವಿಧಾನಸಭೆ ವಿವಾದ


Click it and Unblock the Notifications











