Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಕಿಂಗ್'ಗೆ ಸೈಡ್ ಗೆ ಹೋಗೋ' ಎಂದ 'ಜೆಡಿ' ಚಿತ್ರದ ಬಜೆಟ್ ಎಷ್ಟು.?
ನಿರ್ದೇಶಕ ಕಲಾ ಸಾಮ್ರಾಟ್ ಎಸ್.ನಾರಾಯಣ್ ಮತ್ತು ಜಗದೀಶ್ ಅಲಿಯಾಸ್ ಜೆಡಿ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ 'ಜೆಡಿ' ಚಿತ್ರ ಜೂನ್ 23ರಂದು ರಾಮನಗರದಲ್ಲಿ ಗ್ರ್ಯಾಂಡ್ ಆಗಿ ಮುಹೂರ್ತ ನೆರವೇರಿಸಿಕೊಂಡಿದೆ.
ನಟನೆಯ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ಜಗದೀಶ್ ಅಲಿಯಾಸ್ ಜೆಡಿ ಅವರು ತಮ್ಮ ಚೊಚ್ಚಲ ಚಿತ್ರಕ್ಕೆ ನೀರಿನಂತೆ ದುಡ್ಡು ಸುರಿಯುತ್ತಿದ್ದಾರೆ. ಮಾತ್ರವಲ್ಲದೇ ಇದು ನಿರ್ದೇಶಕ ಎಸ್ ನಾರಾಯಣ್ ಅವರ 50ನೇ ಸಿನಿಮಾ ಆಗಿರುವುದರಿಂದ ಕೊಂಚ ನಿರೀಕ್ಷೆ ಜಾಸ್ತೀನೇ ಇದೆ.
'ಜೆಡಿ' ಚಿತ್ರಕ್ಕೆ ಬರೋಬ್ಬರಿ 25 ಕೋಟಿ ರೂಪಾಯಿ ಖರ್ಚು ಮಾಡಲು ನಿರ್ಮಾಪಕ ಕಮ್ ನಾಯಕ ಜಗದೀಶ್ ಅವರು ತಯಾರಾಗಿದ್ದಾರೆ. ಅಸಲಿಗೆ ಹೊಸಬ್ಬರ ಸಿನಿಮಾಗೆ ಇಷ್ಟೊಂದು ದುಡ್ಡು ಸುರಿದು ಸಿನಿಮಾ ಮಾಡಿದರೆ ಹಾಕಿದ ಹಣ ವಾಪಸ್ ಬರುತ್ತಾ ಅನ್ನೋದು ಸದ್ಯಕ್ಕಿರುವ ಪ್ರಶ್ನೆ.
ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಯಾವಾಗಲೂ ನಂ.1 ಆಗಿರಬೇಕೆಂದು ಬಯಸುವ ಜಗದೀಶ್ ಅವರು ತಮ್ಮ ಚೊಚ್ಚಲ ಚಿತ್ರವನ್ನು ಬಹಳ ದೊಡ್ಡ ಮಟ್ಟದಲ್ಲಿ ತರಲು ಯೋಜನೆ ಹಾಕಿಕೊಂಡಿದ್ದಾರೆ. ಹೇಳಿ ಕೇಳಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಟಾಂಗ್ ಕೊಟ್ಟು ಪೋಸ್ಟರ್ ಬೇರೆ ಡಿಸೈನ್ ಮಾಡಿರುವುದರಿಂದ ಆರಂಭದ ಹಂತದಲ್ಲೇ ಸಿನಿಮಾ ಸಖತ್ ಸುದ್ದಿ ಮಾಡುತ್ತಿದೆ.[ಸೈಡಿಗ್ ಹೋಗೋ ಯಶ್ ಅಂದ್ರಾ ಎಸ್ ನಾರಾಯಣ್?]
ಅಂದಹಾಗೆ 'ಜೆಡಿ' ಚಿತ್ರದಲ್ಲಿ ಒಟ್ಟು 32 ಪ್ರಮುಖ ಕಲಾವಿದರು ಪಾತ್ರ ವಹಿಸಲಿದ್ದು, ಕಲಾವಿದರಿಗಾಗಿಯೇ ಈಗಾಗಲೇ 25 ಕ್ಯಾರಾವಾನ್ ಗಳನ್ನು ತರಿಸುವ ಯೋಜನೆ ನಿರ್ಮಾಪಕ ಜಗದೀಶ್ ಅವರಿಗಿದೆ. ಆದರೆ 'ಆ' 32 ಮುಖ್ಯ ಕಲಾವಿದರು ಯಾರು ಅನ್ನೋದನ್ನು ನಿರ್ದೇಶಕ ಎಸ್ ನಾರಾಯಣ್ ಆಗಲಿ ನಿರ್ಮಾಪಕ ಜಗದೀಶ್ ಅವರಾಗಲಿ ಇನ್ನೂ ನಿರ್ಧರಿಸಿಲ್ಲ.
ಈಗಾಗಲೇ ಮುಹೂರ್ತ ನೆರವೇರಿದ್ದು, ಆಗಸ್ಟ್ ನಲ್ಲಿ 'ಜೆಡಿ' ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಚಿತ್ರಕ್ಕೆ ಸತ್ಯ ಹೆಗಡೆ ಅವರು ಕ್ಯಾಮರಾ ಕೈ ಚಳಕ ತೊರಲಿದ್ದು, ಮಣಿಕಾಂತ್ ಕದ್ರಿ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.