Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಮುಸ್ಲೀಮರ ಮೇಲಿನ ದೌರ್ಜನ್ಯವನ್ನು ಸಂಭ್ರಮಿಸಲಾಗುತ್ತಿದೆ: ಸೂಪರ್ ಮಾಡೆಲ್ ಪದ್ಮಾ ಲಕ್ಷ್ಮಿ
ಭಾರತ ಮೂಲದ ಅಮೆರಿಕ ಸೂಪರ್ ಮಾಡೆಲ್ ಹಾಗೂ ಲೇಖಕಿ ಪದ್ಮಾ ಲಕ್ಷ್ಮಿ ಭಾರತದಲ್ಲಿ ಮುಸ್ಲೀಮರ ಮೇಲೆ ದೌರ್ಜನ್ಯವಾಗುತ್ತಿದೆ ಎಂದಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪದ್ಮಾ ಲಕ್ಷ್ಮಿ, ''ಹಿಂದು ಧರ್ಮಕ್ಕೆ ಭಾರತದಲ್ಲಾಗಲಿ, ವಿಶ್ವದ ಯಾವುದೇ ಮೂಲೆಯಲ್ಲಾಗಲಿ ಆತಂಕ ಇಲ್ಲ. ಯಾವುದೇ ಧರ್ಮದ, ನಂಬಿಕೆಯ ಜನರಾಗಲಿ ಶಾಂತಿಯುತವಾಗಿ ಭಾರತದ ಪುರಾತನ, ಪುಣ್ಯ ನೆಲದ ಮೇಲೆ ಬದುಕುವಂತಾಗಬೇಕು'' ಎಂದಿದ್ದಾರೆ.
ಆಭರಣ ಜಾಹೀರಾತಿನಲ್ಲಿ ಕರೀನಾ ಕಪೂರ್: ಬಿಂದಿ ಧರಿಸಿಲ್ಲವೆಂದು ಟ್ರೋಲ್
ದೇಶದಲ್ಲಿ ಮುಸ್ಲಿಂ ವಿರೋಧಿ ಮನೊಭಾವ ಹೆಚ್ಚು ಪಸರಿಸಿದೆ. ಹಿಂದುಗಳು ಈ ಭೀತಿಗೊಳಿಸುವ, ಭಯ ಹುಟ್ಟಿಹಾಕುವ ಪ್ರೊಪಾಗಾಂಡಾಕ್ಕೆ ಬಲಿ ಆಗಬಾರದು ಎಂದು ಸೂಪರ್ ಮಾಡೆಲ್ ಪದ್ಮಾ ಲಕ್ಷ್ಮಿ ಹೇಳಿದ್ದಾರೆ.
''ಮುಸ್ಲಿಂರ ವಿರುದ್ಧ ದೌರ್ಜನ್ಯ, ಹಿಂಸಾಚಾರವನ್ನು ಸಂಭ್ರಮಿಸುತ್ತಿರುವುದು ನೋಡಿದರೆ ಬಹಳ ಬೇಸರವಾಗುತ್ತಿದೆ. ಮುಸ್ಲಿಂ ವಿರೋಧಿ ಮಾತುಗಳು, ಹೇಳಿಕೆಗಳು ಹಿಂಸೆಗೆ ಇನ್ನಷ್ಟು ಪ್ರಚೋದನೆ ನೀಡುತ್ತಿವೆ. ಈ ರೀತಿಯ ಮುಸ್ಲಿಂ ದ್ವೇಷಿ ಪ್ರಚಾರ ಅಪಾಯಕಾರಿ ಮತ್ತು ಹಾನಿಕಾರಕ. ನಿಮಗಿಂತಲೂ ತುಚ್ಛ ಎಂದು ನೀವು ಯಾರನ್ನಾದರೂ ನಿರ್ಧರಿಸಿದರೆ ಅವರನ್ನು ತುಳಿಯುವ ಕ್ರಿಯೆಯಲ್ಲಿ ಸುಲಭವಾಗಿ ಭಾಗವಹಿಸುತ್ತೀರ'' ಎಂದು ಪದ್ಮಾ ಲಕ್ಷ್ಮಿ ಹೇಳಿದ್ದಾರೆ.
ತಮ್ಮ ಟ್ವೀಟ್ಗಳಿಗೆ ಸಾಕ್ಷಿಯಾಗಿ ಭಾರತದಲ್ಲಿ ಮುಸ್ಲೀಮರ ಪರಿಸ್ಥಿತಿಯನ್ನು ಬಿಂಬಿಸುವ ಕೆಲವು ಲೇಖನಗಳ ಲಿಂಕ್ಗಳನ್ನು ಪದ್ಮಾ ಲಕ್ಷ್ಮಿ ಹಂಚಿಕೊಂಡಿದ್ದಾರೆ. 'ದಿ ಗಾರ್ಡಿಯನ್', ಲಾಸ್ ಏಂಜಲ್ಸ್ ಟೈಮ್ಸ್' ಅವುಗಳು ಡೆಲ್ಲಿಯಲ್ಲಿ ನಡೆದ ಜಾಂಗಿರಿಪುರಿ ಗಲಭೆ, ಹನುಮಂತ ಜಯಂತಿ ಸಂದರ್ಭದಲ್ಲಿ ನಡೆದ ಗಲಭೆ, ಕೊರೆಂಗಾವ್ ಹಿಂಸಾಚಾರ ಮುಂತಾದವುಗಳ ಬಗ್ಗೆ ವಿವರ ವಿಶ್ಲೇಷಣೆ ಮಾಡಿರುವ ಆರ್ಟಿಕಲ್ಗಳನ್ನು ಪದ್ಮಾ ಲಕ್ಷ್ಮಿ ಹಂಚಿಕೊಂಡಿದ್ದಾರೆ. ಜೊತೆಗೆ 'ನಿಜವಾದ ಭಕ್ತಿ ಇರುವ ಜಾಗದಲ್ಲಿ ದ್ವೇಷಕ್ಕೆ ಸ್ಥಳವೇ ಇರುವುದಿಲ್ಲ'' ಎಂದಿದ್ದಾರೆ.
Lucky Ali on Halal Row: ಹಲಾಲ್ ಮಾಂಸ ಮುಸ್ಲಿಮೇತರರಿಗೆ ಅಲ್ಲ: ಗಾಯಕ ಲಕ್ಕಿ ಅಲಿ
ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರ ಮೆಸೀತ್ ಒಜಿಲ್ ಸಹ ಭಾರತೀಯ ಮುಸ್ಲೀಮರ ಪರವಾಗಿ ಟ್ವೀಟ್ ಮಾಡಿದ್ದು, ''ಭಾರತದಲ್ಲಿ ದೌರ್ಜನ್ಯ ಅನುಭವಿಸುತ್ತಿರುವ ನಮ್ಮ ಮುಸಲ್ಮಾನ ಸಹೋದರ-ಸಹೋದರಿಯರ ಯೋಗಕ್ಷೇಮಕ್ಕೆ ಪ್ರಾರ್ಥಿಸುತ್ತಾ ರಂಜಾನ್ನ ಲಲಿತ್ ಅಲ್ ಖದಾರ್ ಪುಣ್ಯ ರಾತ್ರಿಯಲ್ಲಿ ಫುಟ್ಬಾಲ್ ಆಡುತ್ತಿದ್ದೇನೆ. ಈ ನಾಚಿಕೆಗೇಡಿನ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸೋಣ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಯಲ್ಪಡುವ ಆ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ'' ಎಂದಿದ್ದಾರೆ.
ಹಿಂದುಪರ ಸಂಘಟನೆಗಳು ಪದ್ಮಾ ಲಕ್ಷ್ಮಿ ಹಾಗೂ ಮೆಸೀತ್ ಒಜಿಲ್ ಅವರ ಟ್ವೀಟ್ಗಳನ್ನು ಅಂತರಾಷ್ಟ್ರೀಯ ಟೂಲ್ಕಿಟ್ನ ಭಾಗ ಎಂದು ಖಂಡಿಸಿದ್ದಾರೆ.