Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಊರ್ವಶಿ ಬಾಳಿನಲ್ಲಿ ಮತ್ತೆ ಶ್ರಾವಣ ಬಂತು
ತಮ್ಮ ಪತಿ ಮನೋಜ್ ಕುಮಾರ್ಗೆ ಸೋಡಾಚೀಟಿ ನೀಡಿದ ಮೇಲೆ ಕೆಲದಿನಗಳ ಕಾಲ ಊರ್ವಶಿ ಸುಳಿವಿರಲಿಲ್ಲ. ಈಗ ಮತ್ತೆ ಊರ್ವಶಿ ಬಾಳಿನಲ್ಲಿ ಶ್ರಾವಣ ಬಂದಿದೆ. ಅರ್ಥಾತ್ 'ಶ್ರಾವಣ ಬಂತು', 'ರಾಮಾ ಶಾಮಾ ಭಾಮ', 'ನಾನು ನನ್ನ ಹೆಂಡ್ತಿ' ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿರುವ ತಮಿಳು ಹಾಗೂ ಮಲೆಯಾಳಂನಲ್ಲೂ ಜನಪ್ರಿಯತೆ ಗಳಿಸಿರುವ ಊರ್ವಶಿ ಮತೆ ಫಾಮ್ಗೆ ಮರಳಿದ್ದಾರೆ.
ಚಿತ್ರರಂಗದಲ್ಲಿ ಮತ್ತೆ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಲು ಊರ್ವಶಿ ತೀರ್ಮಾನಿಸಿದ್ದಾರೆ. ಈಗ ಆಕೆಯ ಕುಟುಂಬ ಸಮಸ್ಯೆಗಳೆಲ್ಲಾ ಅಷ್ಟಾಗಿ ಇಲ್ಲವಂತೆ. ಹಾಗಾಗಿ ಮತ್ತೆ ತಮ್ಮ ನಟನಾ ಪ್ರತಿಭೆಯನ್ನು ಓರೆಗೆ ಹಚ್ಚಲು ಊರ್ವಶಿ ನಿರ್ಧರಿಸಿದ್ದಾರೆ. ಅವರು ಎಂಟ್ರಿ ಕೊಡುತ್ತಿರುವುದು ಮಲಯಾಳಂ ಚಿತ್ರರಂಗಕ್ಕೆ.
'ಲಕ್ಷ್ಮಿ ವಿಲಾಸಂ ಮಕನ್ ರಘುರಾಂ' ಎಂಬ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಊರ್ವಶಿ ಕಾಣಿಸಲಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಂತೆ. ಊರ್ವಶಿ ಮತ್ತೆ ಚಿತ್ರರಂಗಕ್ಕೆ ಮರಳಿರುವುದು ಆಕೆಯ ಅಭಿಮಾನಿಗಳ ಪಾಲಿಗೆ ಸಂತಸದ ವಿಚಾರ. ಆದಷ್ಟು ಬೇಗ ಕನ್ನಡಕ್ಕೂ ಊರ್ವಶಿ ಮತ್ತೆ ಎಂಟ್ರಿ ಕೊಡಲಿ ಎಂದು ಆಶಿಸೋಣ. (ಏಜೆನ್ಸೀಸ್)