'ಲಹರಿ'ಯಿಂದ ವಿಭಿನ್ನ ಪ್ರಯತ್ನ ಅನ್ನದಾತಂ ಶರಣಂ
ರೈತರ ಬಗ್ಗೆ ಕಾಳಜಿ ಹೊಂದಿರುವ ಯುವಕ ಅವಿರಾಂ ಕಂಠೀರವ ಅವರು ನಮಗಾಗಿ ಪ್ರಾಣತೆತ್ತು ಹುತಾತ್ಮರಾದ ಹಾಗೂ ಈಗಲೂ ನಮ್ಮಗೆಲ್ಲ ಅನ್ನ ನೀಡುತ್ತಿರುವ ರೈತಾಪಿ ವರ್ಗಕ್ಕೆ ಗೌರವ ಸಲ್ಲಿಸಲೆಂದು 'ಅನ್ನದಾತಂ ಶರಣಂ' ಎಂಬ ದೃಶ್ಯಗೀತೆಯೊಂದನ್ನು ಮಾಡಿದ್ದಾರೆ.
ಈ ಸೀಡಿಯ ಬಿಡುಗಡೆ ಸಮಾರಂಭ ರೇಣುಕಾಂಬ ಥಿಯೇಟರ್ ನಲ್ಲಿ ನೆರವೇರಿತು. ರಾಜೇಶ್ ಕೃಷ್ಣನ್, ಶಶಿಧರ್ ಕೋಟೆ, ರಮೇಶ್ ಚಂದ್ರ, ಅಜೇಯ್ ವಾರಿಯರ್, ಸಂಗೀತಾಕಟ್ಟಿ, ಸುರೇಖ, ದಿವ್ಯಾರಾಘವನ್ ಹಾಗೂ ಅನುರಾಧಾ ಭಟ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಸೀಡಿಯನ್ನು ಹೆಸರಾಂತ ಲಹರಿ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಈ ಸೀಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಸಂತೋಷ್ ಹೆಗ್ಡೆ ಅವರು, "ನಮ್ಮ ರೈತರ ಬಗ್ಗೆ ಯಾರು ಕಾಳಜಿ ಇಟ್ಟುಕೊಳ್ಳಬೇಕಾದವರು ಇಟ್ಟುಕೊಂಡಿಲ್ಲ. ಇಂಥ ಕೆಲಸಗಳ ಮೂಲಕ ನಾವು ರೈತ ಕುಟುಂಬಗಳಿಗೆ ಸಾಂತ್ವನ ಹೇಳಬಹುದು" ಎಂದರು. ಹೃದಯ ತಜ್ಞೆ ಡಾ:ವಿಜಯಲಕ್ಷ್ಮೀ ಬಾಳೆಕುಂದ್ರಿ, ರಮೇಶ್ ಚಂದ್ರ, ಲಹರಿ ಸಂಸ್ಥೆಯ ವೇಲು ಮೊದಲಾದ ಗಣ್ಯರು ಈ ಸೀಡಿಯ ಬಗ್ಗೆ ಮಾತನಾಡಿ ಅವಿರಾಂ ಕಂಠೀರವ ಅವರಲ್ಲಿರುವ ರೈತರ ಪರ ಕಾಳಜಿಯನ್ನು ಶ್ಲಾಘಿಸಿದರು. (ಒನ್ಇಂಡಿಯಾ ಕನ್ನಡ)


Click it and Unblock the Notifications











