Don't Miss!
- News
ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲಿನ ಸಮಯದಲ್ಲಿ ಬದಲಾವಣೆ: ನಿಲುಗಡೆ, ಸಮಯದ ಮಾಹಿತಿ ಇಲ್ಲಿ ಪಡೆಯಿರಿ
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟ ಪುನೀತ್ ರಾಜ್ ಕುಮಾರ್ ಗೆ 'ಜನನಿ ಜನ್ಮ ಭೂಮಿ' ಅರ್ಪಣೆ ಮಾಡಿದ BAAFTA
ಬೆಂಗಳೂರು, ಮಾ. 21: ಬೆಂಗಳೂರು ಅಕಾಡೆಮಿ ಆಫ್ ಆಕ್ಟಿಂಗ್, ಫಿಲ್ಮ್ ಮೇಕಿಂಗ್ ಥಿಯೇಟರ್ ಅಂಡ್ ಆಂಕರಿಂಗ್ ಸಂಸ್ಥೆ ತನ್ನ ಮೊಲದ ವರ್ಷದ ವಾರ್ಷಿಕೋತ್ಸವ ಅಂಗವಾಗಿ ದಿವಂಗತ ನಟ ಪುನೀತ್ ರಾಜ್ ಕುಮಾರ್ಗೆ ಜನನಿ ಜನ್ಮ ಭೂಮಿ ಹಾಡನ್ನು ಅರ್ಪಿಸಿದೆ.
ಬೆಂಗಳೂರಿನ ಸೆಂಚುರಿ ಕ್ಲಬ್ನಲ್ಲಿ ಆಯೋಜಿಸಿದ್ದ ಬೆಂಗಳೂರು ಅಕಾಡೆಮಿ ಆಫ್ ಆಕ್ಟಿಂಗ್ ಫಿಲ್ಮ್ ಮೇಕಿಂಗ್ ಥೀಯೇಟರ್ ಅಂಡ್ ಆಂಕರಿಂಗ್ ಸಂಸ್ಥೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಪಾಲ್ಗೊಂಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಜನನಿ ಜನ್ಮ ಭೂಮಿ ಹಾಡು ಬಿಡುಗಡೆ ಮಾಡಿ ಅರ್ಪಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಡಾ. ಕೆ. ಸುಧಾಕರ್, ನಟ ಪುನೀತ್ ಸಮಾಜಕ್ಕೆ ಅಮೂಲ್ಯ ಸೇವೆ ಕೊಟ್ಟಿದ್ದಾರೆ. ನಟನೆ ಮೂಲಕ ಜನ ಮನ ಗೆದ್ದಿದ್ದಾರೆ. ಅವರು ನಮ್ಮನ್ನು ಅಗಲಿಲ್ಲ. ನಮ್ಮೊಂದಿಗೆ ಇದ್ದಾರೆ. ಪುನೀತ್ ಅವರಿಗೆ ಜನನಿ ಹಾಡು ಅರ್ಪಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಸ್ಮರಿಸಿದರು.
ಇದೇ ವೇಳೆ ಬಾಫ್ತಾ ಸಂಸ್ಥೆಯ ಸಾಧನೆಯನ್ನು ಸಚಿವರು ಪ್ರಶಂಸೆ ಮಾಡಿದರು. ಬಾಫ್ತಾ ಸಂಸ್ಥೆಯಲ್ಲಿ ಕಲಿತು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಇದೇ ವೇಳೆ ಪ್ರಶಂಶನಾ ಪತ್ರಗಳನ್ನು ನಟ ಶ್ರೀಮುರಳಿ ವಿತರಣೆ ಮಾಡಿದರು.

ವರ್ಲ್ ಮ್ಯೂಸಿಕ್ ಕನ್ಸರ್ವೇಟರಿ ಅಂಗ ಸಂಸ್ಥೆಯಾಗಿರುವ ಬಾಫ್ತಾ ಸಂಸ್ಥೆಯನ್ನು ಕೆ.ಎಂ. ಗೋಪಿನಾಥ್ ಮತ್ತು ಸಂಗೀತ ಕಿಶನ್ ಹುಟ್ಟುಹಾಕಿದ್ದಾರೆ. ಕೆ. ಎಂ. ಗೋಪಿನಾಥ್ ಅಂತಾರಾಷ್ಟ್ರೀಯ ಖ್ಯಾತಿ ಡ್ರಮ್ಮರ್, ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಲು ಹದಿನೆಂಟು ವರ್ಷಗಳ ಹಿಂದೆ ಬಾಫ್ತಾ ಸಂಸ್ಥೆ ಹುಟ್ಟು ಹಾಕಿದ್ದರು. ಈ ಮೂಲಕ ಹೊಸ ಕಲಾವಿದರನ್ನು ಹುಟ್ಟುಹಾಕುವ ಕಾರ್ಯದಲ್ಲಿ ನಿರತವಾಗಿದೆ.