Don't Miss!
- News ಹಾಸನದಲ್ಲಿ ಬಿಜೆಪಿಯ ಸಹಕಾರವಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ: ಮತ್ತೆ ಸಂಕಷ್ಟದಲ್ಲಿ ದಳಪತಿ
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹಂಸಲೇಖ'ನಿಯಲ್ಲಿ ಮೂಡಿದ ಒಂದು ಪ್ರೇಮಗೀತೆ
ಮನಮುಟ್ಟುವ ಸಂಗೀತ, ರಸವತ್ತಾದ ಸಾಹಿತ್ಯದ ಮೂಲಕ ಪ್ರೇಮಿಗಳ ಪಾಲಿಗೆ ಲವ್ ಗುರು ಆಗಿರುವ ಹಂಸಲೇಖ ಅವರ ಸಂಗೀತಕ್ಕೆ ಪರವಶರಾಗದವರಿಲ್ಲ. ಮೈಸೂರಿನವರಾದ ಹಂಸಲೇಖ ಅವರ ಮೂಲ ಹೆಸರು ಗೋವಿಂದರಾಜು ಗಂಗರಾಜು. 'ತ್ರಿವೇಣಿ'(1973) ಚಿತ್ರದ ಮೂಲಕ ಗೀತ ಸಾಹಿತಿಯಾಗಿ 'ರಾಮಚಂದ್ರ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಹಂಸಲೇಖ ಕನ್ನಡ ಚಿತ್ರರಂಗೆಕ್ಕೆ ಪದಾರ್ಪಣೆ ಮಾಡಿದರು.
ಕನ್ನಡ
ಚಿತ್ರರಂಗದಲ್ಲಿ
ಹೊಸ
ಯುಗವನ್ನು
ಪ್ರಾರಂಭಿಸಿದ
ಮಹೋನ್ನತ
ಸಂಗೀತ
ನಿರ್ದೇಶಕರಲ್ಲಿ
ಹಂಸಲೇಖ
ಒಬ್ಬರು.
ಪ್ರೇಮಲೋಕ
ಚಿತ್ರದ
ಮೂಲಕ
ಹೊಸ
ಅಲೆಯ
ಸಂಗೀತವನ್ನು
ಕೊಟ್ಟ
ಖ್ಯಾತಿ
ಹಂಸಲೇಖ
ಅವರಿಗೆ
ಸಲ್ಲುತ್ತದೆ.
ಪ್ರೀತಿ,
ಪ್ರೇಮ
ಪ್ರಣಯ
ಉಕ್ಕಿಸುವ
ಸಾಹಿತ್ಯ
ಸಂಗೀತದಿಂದ
ಪ್ರೇಮಿಗಳ
ಪಾಲಿನ
ಲವ್
ಗುರು
ಎನ್ನಿಸಿಕೊಂಡವರು.
[ಹಂಸಲೇಖರ
ಕಣ್ಣಲ್ಲಿ
ನೀರು
ತರಿಸಿದ
ರವಿಚಂದ್ರನ್]
ಒಂದು ದಶಕಕ್ಕೂ ಹೆಚ್ಚು ಕಾಲ 'ಪ್ರೇಮಲೋಕ' ಚಿತ್ರದ ಹಾಡುಗಳು ಪ್ರೇಮಿಗಳ ಪಾಲಿನ ಸುಪ್ರಭಾತವಾಗಿದ್ದವು. ಹಿಂದೂಸ್ತಾನಿ, ಕರ್ನಾಟಿಕ್ ಮತ್ತು ಪಾಶ್ಚಾತ್ಯ ಸಂಗೀತದ ಸಂಗಮನನ್ನು ಉಣಬಡಿಸಿ ಕನ್ನಡ ಚಿತ್ರರಸಿಕರ ಮನ ತಣಿಸಿದ ಮಹಾನ್ ಸಂಗೀತ ನಿರ್ದೇಶಕ ಹಂಸಲೇಖ. ಆಕಾಶದಾಗೆ ಯಾರೊ ಮಾಯಗಾರ ಚಿತ್ತಾರ ಮಾಡಿದಂತೆ ಹಂಸಲೇಖ ಹೀಗೆ ನೂರ್ಕಾಲ ಬರೆಯುತ್ತಿರಲಿ. ಹ್ಯಾಪಿ ಬರ್ತ್ ಡೇ ಹಂಸಲೇಖ.
ನಾದಬ್ರಹ್ಮ ಹಂಸಲೇಖ ಅವರಿಗೆ ಇಂದು (ಜೂ.23) ಹುಟ್ಟುಹಬ್ಬ ಸಂಭ್ರಮ. ಅರುವತ್ತಮೂರನೇ ವರ್ಷಕ್ಕೆ ಅಡಿಯಿಟ್ಟಿರುವ ಅವರ ಎಲ್ಲಾ ಗೀತೆಗಳು ಜನಮನವನ್ನು ರಂಜಿಸುತ್ತಿವೆ. ಅಂತಹ ಹಾಡುಗಳಲ್ಲಿ 'ನೀನು ನಕ್ಕರೆ ಹಾಲು ಸಕ್ಕರೆ' (1991) ಚಿತ್ರದ ಈ ಹಾಡು ನಿಮಗಾಗಿ.