Just In
- 1 hr ago
ಹಿಂದೂ ಭಾವನೆಗಳಿಗೆ ಧಕ್ಕೆ; ಸೈಫ್ ನಟನೆಯ 'ತಾಂಡವ್' ವೆಬ್ ಸರಣಿ ವಿರುದ್ಧ ಬಿಜೆಪಿ ನಾಯಕರ ದೂರು
- 2 hrs ago
ಕಪಾಳಮೋಕ್ಷ ಆರೋಪ; ನಟ ಮಹೇಶ್ ಮಂಜ್ರೇಕರ್ ವಿರುದ್ಧ ದೂರು ದಾಖಲು
- 3 hrs ago
ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ
- 16 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
Don't Miss!
- News
ನೆದರ್ಲೆಂಡ್ಸ್ ಅಂಗಸಂಸ್ಥೆ ಮೂಲಕ ಭಾರತದಲ್ಲಿ ಹೂಡಿಕೆ ಮಾಡಲಿದೆ ಟೆಸ್ಲಾ
- Automobiles
ಸೆಗ್ಮೆಂಟ್ ಇನ್ ಫಸ್ಟ್ ಫೀಚರ್ಸ್ ಪಡೆದುಕೊಳ್ಳಲಿದೆ ಟಾಟಾ ಹೊಸ ಸಫಾರಿ ಎಸ್ಯುವಿ
- Finance
ದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದ ಪೆಟ್ರೋಲ್: ನಿಮ್ಮ ನಗರದಲ್ಲೆಷ್ಟು?
- Sports
ಐಎಸ್ಎಲ್: ಸಮಬಲದ ಪ್ರದರ್ಶನ ನೀಡಿ ಡ್ರಾ ಮಾಡಿಕೊಂಡ ಎಟಿಕೆಎಂಬಿ, ಗೋವಾ
- Lifestyle
ಅಂಡಾಣು ಶೈತ್ಯೀಕರಣ: ಮಗುವನ್ನು ಪಡೆಯಲು ಈ ವಿಧಾನ ಸುರಕ್ಷಿತವೇ?
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗಣೇಶನ ಮುಂದೆ ಭಟ್ಟರ ಡ್ರಾಮಾ ಧ್ವನಿಸುರಳಿ
ಸೆ.21ರಂದು ಅಧಿಕೃತವಾಗಿ ಡ್ರಾಮಾದ ಧ್ವನಿಸುರಳಿ ಹೊರಬರುತ್ತಿದೆ. ಅದರೆ, ಇದಕ್ಕೂ ಮುನ್ನ ಬಸವನಗುಡಿ ಗಣೇಶೋತ್ಸವದಲ್ಲಿ ಚಿತ್ರದ ಹಾಡುಗಳ ಝಲಕ್ ನೀಡುವ ಭರವಸೆಯನ್ನು ಸಂಗೀತ ನಿರ್ದೇಶಕ ವಿ ಹರಿಕೃಷ್ಣ ನೀಡಿದ್ದಾರೆ.
ನಗರದ ಎಪಿಎಸ್ ಕಾಲೇಜು ಮೈದಾನದಲ್ಲಿ ನಡೆದಿರುವ 50ನೇ ವರ್ಷದ ಗಣೇಶೋತ್ಸವದಲ್ಲಿ ಗುರುವಾರ ವಿ ಹರಿಕೃಷ್ಣ ಸಂಗೀತ ಸಂಜೆಯಲ್ಲಿ ಯಶ್, ರಾಧಿಕಾ ಪಂಡಿತ್ ಅಭಿನಯದ ಡ್ರಾಮಾ ಸಂಗೀತ ಸುರಳಿ ಲೋಕಾರ್ಪಣೆ ಮಾಡಲಾಗುತ್ತದೆ.
ಕೆಲ ಕಾಲ ಇದೇ ಏರಿಯಾದಲ್ಲೇ ಇದ್ದ ಭಟ್ಟರು, ಹರಿಕೃಷ್ಣ ಪ್ಲ್ಯಾನ್ ಗೆ ಓಕೆ ಎಂದಿದ್ದಾರೆ. ಗಣೇಶೋತ್ಸವದಲ್ಲಿ ಯೋಗರಾಜ್ ಭಟ್ ಸೇರಿದಂತೆ ಹಲವಾರು ಸಿನಿ ತಾರೆಗಳು ಗಣೇಶನಿಗೆ ತಲೆಬಾಗಿ ಅಭಿಮಾನಿಗಳಿಗೆ ಆಡಿಯೋ ಮುದ್ರಿಕೆ ನೀಡುವ ಸಾಧ್ಯತೆಯಿದೆ.
ಸೆ.21 ರಂದು ಮತ್ತೊಮ್ಮೆ ಆಡಿಯೋ ರಿಲೀಸ್ ಮಾಡುತ್ತಾರೋ ಅಥವಾ ಬರೀ ಪತ್ರಿಕಾಗೋಷ್ಠಿ, ಗೆಟ್ ಟು ಗೆದರ್ ಪಾರ್ಟಿ ಮಾಡುತ್ತಾರೋ ಇನ್ನೂ ತಿಳಿದು ಬಂದಿಲ್ಲ.
ಭಟ್ಟರು ತಮ್ಮ ಎಂದಿನ ಶೈಲಿಗೆ ತಿಲಾಂಜಲಿ ನೀಡಿ ಹೊಸ ಬಗೆಯಲ್ಲಿ ಜನರ ಮುಂದೆ ಫ್ರೆಶ್ ಕತೆ ನೀಡುವ ಭರವಸೆ ನೀಡಿದ್ದಾರೆ. ಇನ್ನೂ ಹಾಡಿನ ವಿಷಯಕ್ಕೆ ಬಂದರೆ, ಹರಿಕೃಷ್ಣ ಎಂದಿನಂತೆ ಫಾರ್ಮುಲಕ್ಕೆ ತಕ್ಕಂತೆ ಸಾಂಗ್ಸ್ ನೀಡಿದ್ದಾರೆ.
ಆಡಿಯೋ ರಿಲೀಸ್ ಗೂ ಮುನ್ನ ಯುಟ್ಯೂಬ್ ನಲ್ಲಿ ಅಂಬರೀಷಣ್ಣ ಇರೋ ತತ್ವಪದ ಸದ್ದು ಮಾಡಿದ್ದಂತೂ ದಿಟ. ಗಣೇಶ ಕೃಪೆ ಭಟ್ಟರ ಡ್ರಾಮಾ ಕಂಪನಿಗೂ ಇರಲಿ.. ಹರಿಕೃಷ್ಣ ಸಂಗೀತ ಮತ್ತೊಮ್ಮೆ ಜನಮೆಚ್ಚುವಂತಾಗಲಿ ಎಂಬುದು ನಮ್ಮ ಹಾರೈಕೆ.
ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಡ್ರಾಮಾ ಚಿತ್ರದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಯಲ್ಲದೇ ನೀನಾಸಂ ಸತೀಶ್ ಹಾಗೂ ಸಿಂಧು ಲೋಕನಾಥ್ ಕೂಡ ಇದ್ದಾರೆ.
ರಾಧಿಕಾ ಪಂಡಿತ್ ಹಾಗೂ ಯಶ್ ಇದೇ ಮೊದಲ ಬಾರಿಗೆ ಹಾಡೊಂದಕ್ಕೆ (ಬಿಟ್ಸ್ ಸಾಂಗ್) ಧ್ವನಿ ಕೊಟ್ಟಿರುವುದು ವಿಶೇಷ. ಮಂಡ್ಯ ಭಾಷೆಯನ್ನು ತಮ್ಮ ಡ್ರಾಮಾ ಚಿತ್ರದಲ್ಲಿ ಹೆಚ್ಚಾಗಿ ಬಳಸಿರುವ ಭಟ್ಟರು ಮೈಸೂರು ಭಾಷೆಗೂ ಅಲ್ಲಲ್ಲಿ ಜಾಗ ನೀಡಿದ್ದಾರಂತೆ.