Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Breaking: ಕೋಲ್ಕತ್ತಾದಲ್ಲಿ ಲೈವ್ ಶೋನಲ್ಲೇ ಗಾಯಕ ಕೆಕೆ ದುರಂತ ಸಾವು
ಕೆಕೆ ಎಂದೇ ಜನಪ್ರಿಯವಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ ಗಾಯನ ಜೀವನ ಅಂತ್ಯಗೊಂಡಿದೆ. ಇಂದು ಕೋಲ್ಕತ್ತಾದ ನಜ್ರುಲ್ ಮಂಚ್ನಲ್ಲಿ ಕಾರ್ಯಕ್ರಮ ನೀಡುತ್ತಿದ್ದ ಗಾಯಕ ಕೆಕೆ, ಸ್ಟೇಜ್ ಮೇಲೆ ಅಸುನೀಗಿರುವ ದುರಂತ ಘಟನೆ ನಡೆದಿದೆ. ಕೆಕೆ ನಿಧನಕ್ಕೆ ಸಂಗೀತ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಗಾಯನ ವೇದಿಕೆಯಲ್ಲೇ ಉಸಿರು ನಿಲ್ಲಿಸಿದ್ದನ್ನು ಅಭಿಮಾನಿಗಳು ಸ್ಮರಿಸಿ ಆಘಾತ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತಾದ ವಿವೇಕಾನಂದ ಕಾಲೇಜಿನ ಕಾರ್ಯಕ್ರಮದ ಭಾಗವಾಗಿ ನಜ್ರುಲ್ ಮಂಚ್ನಲ್ಲಿ ಲೈವ್ ಸಂಗೀತ ಸಂಜೆಯಲ್ಲಿ ಕೆಕೆ ಪಾಲ್ಗೊಂಡಿದ್ದರು. ಗಾಯನದ ನಡುವೆ ಅಸ್ವಸ್ಥರಾಗಿ ಕುಸಿದ ಗಾಯಕ ಕೆಕೆರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.
ಕೋಲ್ಕತ್ತಾದ ನಜ್ರುಲ್ ಮಂಚದಲ್ಲಿ ಲೈವ್ ಶೋ ನಡೆಯುತ್ತಿತ್ತು. ಅಲ್ಲಿಯೇ ಅಪಘಾತ ಸಂಭವಿಸಿದೆ. ಹಾಡಿನ ಕಾರ್ಯಕ್ರಮದ ವೇಳೆ ಖ್ಯಾತ ಗಾಯಕ ಕೃಷ್ಣಕುಮಾರ್ ಕುಂಞತ್ ಅಲಿಯಾಸ್ ಕೆಕೆ ನಿಧನರಾಗಿದ್ದಾರೆ. ಇದು ಠಾಕೂರ್ಪುಕೂರ್ ವಿವೇಕಾನಂದ ಕಾಲೇಜು ಆಯೋಜಿಸಿದ್ದ ಉತ್ಸವವಾಗಿತ್ತು.
Saddened by the untimely demise of noted singer Krishnakumar Kunnath popularly known as KK. His songs reflected a wide range of emotions as struck a chord with people of all age groups. We will always remember him through his songs. Condolences to his family and fans. Om Shanti.
— Narendra Modi (@narendramodi) May 31, 2022
ಠಾಕೂರ್ಪುಕೂರ್
ವಿವೇಕಾನಂದ
ಕಾಲೇಜು
ಆಯೋಜಿಸಿದ್ದ
ಉತ್ಸವದಲ್ಲಿ
ಕೆಕೆ
ಎಂದೇ
ಖ್ಯಾತರಾಗಿದ್ದ
ಗಾಯಕ
ಕೃಷ್ಣಕುಮಾರ್
ಕುನ್ನತ್
ನಿಧನರಾಗಿರುವ
ಸುದ್ದಿ
ವಿವಿಧ
ಕ್ಷೇತ್ರಗಳ
ಗಣ್ಯರು
ಕಂಬನಿ
ಮಿಡಿದಿದ್ದಾರೆ.
ಉಲ್ಟಾ
ದಂಗಾ
ಗುರುದಾಸ್
ಮಹಾವಿದ್ಯಾಲಯದ
ಸಂಗೀತ
ಕಾರ್ಯಕ್ರಮದ
ಸಮಯದಲ್ಲಿ
ಕೆಕೆ
ಅಸ್ವಸ್ಥರಾದರು
ನಂತರ
ಡೈಮಂಡ್
ಹಾರ್ಬರ್
ರಸ್ತೆ
ಬಳಿಯ
ಖಾಸಗಿ
ಆಸ್ಪತ್ರೆಗೆ
ಕರೆದೊಯ್ಯಲಾಯಿತು,
ಮತ್ತು
ಶೀಘ್ರದಲ್ಲೇ
ಅವರು
ಸಾವನ್ನಪ್ಪಿದ್ದಾರೆ
ಎಂದು
ಘೋಷಿಸಲಾಯಿತು.
ಪಿಟಿಐ ವರದಿಗಳ ಪ್ರಕಾರ, ಕೆಕೆ ಅವರು ಕಾರ್ಯಕ್ರಮಕ್ಕೆ ಆಗಮಿಸುವುದಕ್ಕೂ ಮುಂಚಿತವಾಗಿ ತಮ್ಮ ಹೋಟೆಲ್ ತಲುಪಿದ ನಂತರವೇ ಅಸ್ವಸ್ಥರಾಗಿದ್ದರು, ಆದರೆ, ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಲೈವ್ ಶೋ ನಡೆಸಿಕೊಡಲು ತೆರಳಿದರು. ಸುಮಾರು ಒಂದು ಗಂಟೆಗಳ ಕಾಲ ಹಾಡಿ, ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು ಎಂದು ಆಯೋಜಕರು ತಿಳಿಸಿದ್ದಾರೆ. ಇನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಮಾತನಾಡಿ, ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದಿರುವುದು ದುರದೃಷ್ಟಕರ, ಅವರನ್ನು ಬದುಕಿಸುವ ಪ್ರಯತ್ನ ವಿಫಲವಾಯಿತು, ಪರಿಸ್ಥಿತಿ ಕೈ ಮೀರಿತ್ತು ಎಂದಿದ್ದಾರೆ.
ಕನ್ನಡ ಸೇರಿದಂತೆ ಬೆಂಗಾಳಿ, ಹಿಂದಿ, ತಮಿಳು, ಮಲಯಾಳಂ, ಮರಾಠಿ, ಅಸ್ಸಾಮಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಕೆಕೆ ಹಾಡಿರುವ ಹಾಡುಗಳು ಜನಪ್ರಿಯತೆ ಗಳಿಸಿವೆ. ಕೆಕೆ ನಿಧನಕ್ಕೆ ಪ್ರಧಾನಿ ಮೋದಿ, ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್, ನಟ ಅಕ್ಷಯ್ ಕುಮಾರ್, ಗಾಯಕರಾದ ಅರ್ಮಾನ್ ಮಲೀಕ್, ಪಾಪೋನ್ ಸೇರಿದಂತೆ ಹಲವಾರು ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.
Tragic to hear about the passing away of KK after falling ill while performing in Kolkata. Another reminder of how fragile life is. Condolences to his family and friends. Om Shanti. pic.twitter.com/43B3dzykP3
— Virender Sehwag (@virendersehwag) May 31, 2022
"ಕೆಕೆ ಎಂದೇ ಹೆಸರಾಗಿದ್ದ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ನಿಧನದಿಂದ ದುಃಖವಾಗಿದೆ. ಅವರ ಹಾಡುಗಳು ಎಲ್ಲಾ ವಯೋಮಾನದ ಜನರ ಮನಸೂರೆಗೊಂಡಿದ್ದವು. ಅವರ ಹಾಡುಗಳ ಮೂಲಕ ನಾವು ಅವರನ್ನು ಯಾವಾಗಲೂ ನೆನಪಿಟ್ಟುಕೊಳ್ಳುತ್ತೇವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಖಃ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.