Don't Miss!
- News
ಬಿಬಿಎಂಪಿ ತಾಜ್ಯ ನಿರ್ವಹಣೆಗಾಗಿ ಒಂದೇ ಬಾರಿಗೆ ಎಲ್ಲ 243ವಾರ್ಡ್ನಲ್ಲಿ ಟೆಂಡರ್ ಬಿಡುಗಡೆ: BSWML
- Sports
ಸೂರ್ಯಕುಮಾರ್ ಯಾದವ್ ಸಾಮರ್ಥ್ಯ, ಭವಿಷ್ಯದ ಬಗ್ಗೆ ಆಶಿಶ್ ನೆಹ್ರಾ ನೀಡಿದ ಸಲಹೆ ಏನು?
- Finance
ಉದ್ಯೋಗವಿಲ್ಲದ ಯುವಕರಿಗೆ ಈ ರಾಜ್ಯದಲ್ಲಿ ನಿರುದ್ಯೋಗ ಭತ್ಯೆ
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡಕ್ಕೆ ತಮಿಳಿನ ಸೂಪರ್ ಹಿಟ್ ಚಿತ್ರ ರೇಣಿಗುಂಟ
'ಒಲವೇ ಮಂದಾರ' ಖ್ಯಾತಿಯ ಶ್ರೀಕಾಂತ್ ಚಿತ್ರದ ನಾಯಕ ನಟ. ನಾಯಕಿಯ ಹುಡುಕಾಟ ನಡೆಯುತ್ತಿದೆ. ಹೊಸಬರಾದಂತಹ ಕೀರ್ತನ್ ಜೋಸೆಫ್ (ಡ್ರಮ್ಮರ್ ದೇವ ಪುತ್ರ) ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ಪ್ರೇಕ್ಷಕರ ಮನೋಭಾವಕ್ಕೆ ತಕ್ಕಂತೆ ಮೂಲ ಚಿತ್ರವನ್ನು ಯಥಾವತ್ತಾಗಿ ಭಟ್ಟಿ ಇಳಿಸದೆ, ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಚಿತ್ರವನ್ನು ತೆರೆಗೆ ತರುತ್ತಿರುವುದಾಗಿ ಜೋಸೆಫ್ ತಿಳಿಸಿದ್ದಾರೆ.
ಒಟ್ಟು 60 ದಿನಗಳ ಕಾಲ ಮಂಡ್ಯ, ಕೋಲಾರ, ಹುಬ್ಬಳ್ಳಿ ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆಯಲಿದೆ. ಮೇ 3ರಂದು ಚಿತ್ರದ ಮುಹೂರ್ತ. ಚಿತ್ರದಲ್ಲಿ ನಾಯಕನಿಗೆ ಸಾಥ್ ನೀಡುವ ಜೈಲುವಾಸಿ ಗೆಳೆಯ ತೀಪೆಟ್ಟಿ ಗಣೇಶ್ ಇಲ್ಲಿ 'ಕಡ್ಡಿಪೆಟ್ಟಿಗೆ ಗಣೇಶ್' ಆಗಿ ಕನ್ನಡದಲ್ಲೂ ಅಭಿನಯಿಸುತ್ತಿದ್ದಾರೆ.
ಈ ಚಿತ್ರದಲ್ಲಿ ನಾಯಕಿಗೆ ಮಾತೇ ಬರುವುದಿಲ್ಲ. ಆಕೆಯದು ಮುಗ್ಧ ಮೂಕಿಯ ಪಾತ್ರ. ಆಕೆಯ ಸಹೋದರನೇ ವೇಶ್ಯಾವಾಟಿಕೆಗೆ ತಳ್ಳುವ ಕರುಣಾಜನಕ ಕಥೆಯನ್ನು ಒಳಗೊಂಡಿದೆ. ಮಂಜುನಾಥ್ ಗೌಡ ಹಾಗೂ ವೆಂಕಟೇಶ್ ಗೌಡ ಚಿತ್ರದ ನಿರ್ಮಾಪಕರು. ಸೈಕೋ ಖ್ಯಾತಿಯ ಸಭಾ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಚರಣ್ ಮತ್ತು ಜಾಬ್ ಎಂಬಿಬ್ಬರು ಸಂಗೀತಧಾರೆ ಎರೆಯುತ್ತಿದ್ದಾರೆ. (ಏಜೆನ್ಸೀಸ್)