Don't Miss!
- News Smartphone: ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್ಸಂಗ್ M35 5G
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರರಂಗಕ್ಕೆ ಮರಳಿದ ಆರತಿ ಛಾಬ್ರಿಯಾ
''ದಕ್ಷಿಣ ಭಾರತ ಚಿತ್ರರಂಗದೊಂದಿಗೆ ನಾನು ಸಂಬಂಧ ಕಳೆದುಕೊಂಡಿಲ್ಲ. ದಕ್ಷಿಣದ ಒಂದು ಅಥವಾ ಎರಡು ಚಿತ್ರಗಳಲ್ಲಿ ನಟಿಸುತ್ತಲೇ ಇದ್ದೇನೆ.ಈ ಸಲ ಕನ್ನಡ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಅದರಲ್ಲೂ ಮುಖ್ಯವಾಗಿ ನನ್ನ ನೆಚ್ಚಿನ ಸ್ಟಾರ್ ಶಿವರಾಜ್ ಕುಮಾರ್ ಜತೆ ನಟಿಸುತ್ತಿರುವುದು ಖುಷಿ ಕೊಟ್ಟಿದೆ. ಸಂತ ಚಿತ್ರ ಬಾಕ್ಸಾಫೀಸಲ್ಲಿ ಗೆದ್ದ ನಂತರ ತೆಲುಗು ಚಿತ್ರರಂಗದಲ್ಲಿ ಹಲವಾರು ಅವಕಾಶ ಹುಡುಕಿಕೊಂಡುಬಂದವು. ಆದರೆ ಯಾವುದನ್ನೂ ಒಪ್ಪಲಿಲ್ಲ. ಅಷ್ಟೇ ಅಲ್ಲ ಈ ಒಂದು ವರ್ಷದಲ್ಲಿ ಯಾವುದೇ ಬಾಲಿವುಡ್ ಚಿತ್ರಕ್ಕೂ ಸಹಿ ಹಾಕಿಲ್ಲ. ನನಗೆ ಒಪ್ಪುವ ಪಾತ್ರಗಳು ಸಿಗದೇ ಇದ್ದದ್ದೇ ಇದಕ್ಕೆ ಕಾರಣ. ಪ್ರಸ್ತುತ ರಾಜ್ ಕುಮಾರ್ ಸಂತೋಷಿ ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ನಟಿಸಲು ಇನ್ನೂ 'ಎಸ್' ಎಂದು ಹೇಳಿಲ್ಲ'' ಎಂದು ಆರತಿ ತಿಳಿಸಿದರು.
'ಹೊಡಿಮಗ' ಚಿತ್ರದ ಚಿತ್ರೀಕರಣ ಮುಗಿದ ಬಳಿಕ ಆರತಿ ಛಾಬ್ರಿಯಾರೊಂದಿಗಿನ ಶಿವರಾಜ್ ಕುಮಾರ್ ಅವರ ಹೊಸ ಚಿತ್ರ ಸೆಟ್ಟೇರಲಿದೆ. ಚೆನ್ನೈ, ಹೈದರಾಬಾದ್ ಮೆಟ್ರೋನಗರಗಳು ಸೇರಿದಂತೆ ತಿರುವನಂತಪುರಂನಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಸಂತ ಚಿತ್ರದಲ್ಲಿನ ಆರತಿ ಮತ್ತು ಶಿವರಾಜ್ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಮುಂದಿನ ಚಿತ್ರದಲ್ಲಿ ಮತ್ತೆ ಅದೇ ರೀತಿಯ ಪಾತ್ರಗಳಲ್ಲಿ ಇವರನ್ನೂ ನೋಡಬಹುದು ಎನ್ನುತ್ತಾರೆ ಚಿತ್ರ ನಿರ್ದೇಶಕ ಪಿ.ಎನ್.ಸತ್ಯ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಆರತಿ ಛಾಬ್ರಿಯಾ ಮನಮೋಹಕ ಗ್ಯಾಲರಿ