Don't Miss!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿದೇಶದಿಂದ ವಿದೇಶಕ್ಕೆ ಚಂಕಾಯ್ಸಿ ಚಿಂದಿ ಉಡಾಯ್ಸಿ'
ದತ್ತಾತ್ರೇಯ ಮೂವೀಸ್ ಲಾಂಛನದಲ್ಲಿ ಶ್ರೀಮತಿ ಅನಸೂಯ ಹಾಗೂ ಜೀವನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಲೇಶಿಯಾದಲ್ಲಿ 16 ದಿನಗಳ ಚಿತ್ರೀಕರಣ ನಡೆಸಲಾಗಿದೆ. ಈ ಭಾಗದ ಚಿತ್ರೀಕರಣದಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ರಚಿಸಿರುವ ಬೇಜನಾಗಿ ಪ್ರೀತಿಸು ಬೇಜಾರಿಲ್ಲದೆ ಪ್ರೀತಿಸು - ಪ್ರೀತಿಸಲು ಮರುಳಾದರೆ ಈ ದಿನ ಅದಕ್ಕೆ ನೀನೆ ಕಾರಣ' ಎಂಬ ಗೀತೆಯನ್ನು ಕೋಮಲ್ ಹಾಗೂ ನಿಧಿ ಸುಬ್ಬಯ್ಯ ಅಭಿನಯದಲ್ಲಿ ಲಂಕಾವಿ ಎಂಬ ಸ್ಥಳದಲ್ಲಿ, ತ್ರಿಭುವನ್ ನೃತ್ಯ ನಿರ್ದೇಶನದಲ್ಲಿ ಸೆರೆ ಹಿಡಿಯಲಾಯಿತು. ಲಂಕಾವಿ ಸುಂದರ ದ್ವೀಪ. ಈ ರಮಣೀಯ ಸ್ಥಳ ತಲುಪಲು ಮಲೇಶಿಯಾದಿಂದ 2ಗಂಟೆಗಳ ಕಾಲ ಜಲಮಾರ್ಗದಲ್ಲಿ ಸಂಚರಿಸಬೇಕು.
ಈ ಗೀತೆಯಷ್ಟೇ ಅಲ್ಲದೇ ಚಿತ್ರದ ಕ್ಲೈಮ್ಯಾಕ್ಸ್ ಭಾಗವಾದ ಬೋಟ್ ಚೇಸಿಂಗ್ ಹಾಗೂ ಡಿಫ಼ರೆಂಟ್ ಡ್ಯಾನಿ ಸಾಹಸ ಸಂಯೋಜನೆಯಲ್ಲಿ ಕೋಮಲ್, ನಿಧಿ ಸುಬ್ಬಯ್ಯ ಅಭಿನಯಿಸಿದ ಒಂದು ಕಾಮಿಡಿ ಫೈಟ್ ಮಲೇಶಿಯಾದಲ್ಲಿ ಚಿತ್ರೀಕರಣಗೊಂಡವು. ಅಲ್ಲಿಗೆ ಪ್ರಯಾಣ ಬೆಳಿಸಿದ 36 ಜನರ ತಂಡ ಈಗ ಸ್ವದೇಶಕ್ಕೆ ಮರಳಿದ್ದು ಈ ವಾರದಲ್ಲಿ ಹೆಚ್ಚಿನ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್ಗೆ ತೆರಳಲಿದೆ. ಚಿತ್ರದ 40% ಚಿತ್ರೀಕರಣ ಮಲೇಶಿಯಾದಲ್ಲೇ ನಡೆದಿದೆ ಎಂದು ನಿರ್ಮಾಪಕರು ತಿಳಿಸಿದರೆ, ಭಾರತ ಸೇರಿ ಮೂರು ದೇಶಗಳಲ್ಲಿ ಚಿತ್ರೀಕರಣಗೊಂಡ ಏಕೈಕ ಹಾಸ್ಯ ಚಿತ್ರ ಎಂಬ ಹೆಗ್ಗಳಿಕೆ ನಮ್ಮ ಚಿತ್ರಕ್ಕಿದೆ ಎಂದು ನಿರ್ದೇಶಕ ಎ.ಆರ್.ಬಾಬು ಹೇಳುತ್ತಾರೆ.
'ಮಸ್ತ್
ಮಜಾ
ಮಾಡಿ
ಚಿತ್ರಕ್ಕೆ
ಸಂಗೀತ
ನೀಡಿದ
ಬಾಲಾಜಿ
ಈ
ಚಿತ್ರದ
ಸಂಗೀತ
ನಿರ್ದೇಶಕರಾಗಿದ್ದಾರೆ.
ಅಶೋಕ್
ಕಶ್ಯಪ್
ಕ್ಯಾಮೆರಾ,
ಪ್ರಕಾಶ್
ಸಂಕಲನ,
ಡಿಫ಼ರೆಂಟ್
ಡ್ಯಾನಿ
ಸಾಹಸ,
ಶ್ರೀಧರ್
ಹಾಗೂ
ವಿದ್ಯಾ
ನೃತ್ಯ,
ಅನಿಲ್
ನಿರ್ಮಾಣ
ನಿರ್ವಹಣೆಯಿರುವ
ಈ
ನೂತನ
ಚಿತ್ರದ
ತಾರಾಬಳಗದಲ್ಲಿ
ಕೋಮಲ್
ಕುಮಾರ್,
ರಾಹುಲ್,
ಕಿರಣ್,
ಗಿರಿ
ದಿನೇಶ್,
ನೇತಾನಿಯಾ,
ನಿಧಿ
ಸುಬ್ಬಯ್ಯ,
ಮುಖ್ಯಮಂತ್ರಿ
ಚಂದ್ರು,
ಉಮಾಶ್ರೀ,
ಹೊನ್ನವಳ್ಳಿ
ಕೃಷ್ಣ,
ಪ್ರಮಿಳಾ
ಜೋಷಾಯಿ,
ಮಾರಿಮುತ್ತು,
ಶ್ರೀನಿವಾಸ
ಗೌಡ,
ನಂದ
ಮುಂತಾದವರಿದ್ದಾರೆ.
(ದಟ್ಸ್
ಕನ್ನಡ
ಸಿನಿ
ಸುದ್ದಿ)