Don't Miss!
- News Tamarind Fruit Juice: ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಪರಿಚಯಿಸಿದ ಆಯುಷ್ ಇಲಾಖೆ, ಮಾಡುವುದು ಹೇಗೆ?
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಲಾ ತಪಸ್ವಿ ರಾಜೇಶ್ಗೆ ಕನ್ನಡ ವಿವಿ ಗೌರವ ಡಾಕ್ಟರೇಟ್
ಜನವರಿಯಲ್ಲೇ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ ಎಂದು ವಿವಿ ಮೂಲಗಳು ತಿಳಿಸಿವೆ. ಅರುವತ್ತು ಮತ್ತು ಎಪ್ಪತ್ತರ ದಶಕದಲ್ಲಿ ನಟ ರಾಜೇಶ್ ತಮ್ಮದೇ ಆದಂತಹ ವಿಲಕ್ಷಣ ಪಾತ್ರಗಳಿಗೆ ಹೆಸರಾಗಿದ್ದರು. ಇದುವರೆಗೂ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ರಾಜೇಶ್ ಪೋಷಿಸಿದ್ದಾರೆ.
ರಾಜೇಶ್ ತಮ್ಮ ಆತ್ಮಕತೆಗೆ 'ಕಲಾ ತಪಸ್ವಿ ರಾಜೇಶ್ ಆತ್ಮಕಥೆ' ಎಂದು ಹೆಸರಿಟ್ಟಿದ್ದಾರೆ. ಹುಣಸೂರು ಕೃಷ್ಣಮೂರ್ತಿ ಅವರು ರಾಜೇಶ್ ಅವರನ್ನು 'ವೀರ ಸಂಕಲ್ಪ' ಚಿತ್ರದ ಮೂಲಕ ಕನ್ನಡ ಬೆಳ್ಳಿಪರದೆಗೆ ಪರಿಚಯಿಸಿದರು. ಅಭಿನಯದ ಜೊತೆಗೆ ಸುಶ್ರಾವ್ಯವಾಗಿ ರಾಜೇಶ್ ಹಾಡಬಲ್ಲರು. ಉದಯ ಕುಮಾರ್, ರಾಜ್ಕುಮಾರ್ ಮತ್ತು ಕಲ್ಯಾಣ್ ಕುಮಾರ್ ತ್ರಯರಿಗೆ ರಾಜೇಶ್ ಚಿತ್ರಗಳು ಪ್ರಬಲ ಸ್ಪರ್ಧೆ ನೀಡಿತ್ತಿದ್ದದ್ದು ವಿಶೇಷ.
1968ರಲ್ಲಿ ಸಿ ವಿ ಶಿವಶಂಕರ್ ನಿರ್ದೇಶನದಲ್ಲಿ ಬಂದಂತಹ 'ನಮ್ಮ ಊರು' ಚಿತ್ರಕ್ಕೆ ಅಂದಿನ ಹಣಕಾಸು ಸಚಿವರಾಗಿದ್ದ ರಾಮಕೃಷ್ಣ ಹೆಗಡೆ ಅವರು ಶೇ.100ರಷ್ಟು ತೆರಿಗೆ ವಿನಾಯಿತಿ ನೀಡಿದ್ದರು. ಬೆಳುವಲದ ಮಡಿಲಲ್ಲಿ, ಕಲಿಯುಗ, ಪಿತಾಮಹ, ಸತ್ಯನಾರಾಯಣ ಪೂಜಾ ಫಲ, ಕರ್ಣ ಚಿತ್ರಗಳು ರಾಜೇಶ್ ಅವರಿಗೆ ಹೆಸರು ತಂದಂತಹ ಚಿತ್ರಗಳು. (ಒನ್ಇಂಡಿಯಾ ಕನ್ನಡ)