Don't Miss!
- News
5000 ಅಡಿ ಎತ್ತರದಲ್ಲಿ ಮೇಲೆ ವಿಮಾನದೊಳಗೆ ಹೊಗೆ, ಪ್ರಯಾಣಿಕರು ಹೈರಾಣ
- Education
Cochin Shipyard Limited Recruitment 2022 : 330 ವೆಲ್ಡರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಇಂಗ್ಲೆಂಡ್ ವಿರುದ್ಧ ರಿಷಭ್ ಅದ್ಭುತ ಶತಕ: ಕೋಚ್ ರಾಹುಲ್ ದ್ರಾವಿಡ್ ಸೆಲೆಬ್ರೆಷನ್ ವೈರಲ್
- Finance
ಸಿನಿಮಾವನ್ನು ತೆರಿಗೆ ಮುಕ್ತ ಎಂದು ಘೋಷಿಸುವುದು ಯಾವಾಗ, ಇತಿಹಾಸವೇನು?
- Automobiles
ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮಂಗಳೂರಿನಲ್ಲೂ ಹೊಸ ಶೋರೂಂ ತೆರೆದ ಎಥರ್ ಎನರ್ಜಿ
- Lifestyle
ನಿಮ್ಮ ಗೆಳತಿಯಲ್ಲಿ ಈ ಅಂಶಗಳನ್ನು ಗುರುತಿಸಿದರೆ ಅವರು ಖಂಡಿತ ನಿಮಗೆ ಮೋಸ ಮಾಡಲ್ಲ
- Technology
ಒನ್ಪ್ಲಸ್ ನಾರ್ಡ್ 2T V/S ಒನ್ಪ್ಲಸ್ ನಾರ್ಡ್ 2: ಖರೀದಿಗೆ ಯಾವುದು ಬೆಸ್ಟ್?
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಕಲಾ ತಪಸ್ವಿ ರಾಜೇಶ್ಗೆ ಕನ್ನಡ ವಿವಿ ಗೌರವ ಡಾಕ್ಟರೇಟ್
ಜನವರಿಯಲ್ಲೇ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ ಎಂದು ವಿವಿ ಮೂಲಗಳು ತಿಳಿಸಿವೆ. ಅರುವತ್ತು ಮತ್ತು ಎಪ್ಪತ್ತರ ದಶಕದಲ್ಲಿ ನಟ ರಾಜೇಶ್ ತಮ್ಮದೇ ಆದಂತಹ ವಿಲಕ್ಷಣ ಪಾತ್ರಗಳಿಗೆ ಹೆಸರಾಗಿದ್ದರು. ಇದುವರೆಗೂ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ರಾಜೇಶ್ ಪೋಷಿಸಿದ್ದಾರೆ.
ರಾಜೇಶ್ ತಮ್ಮ ಆತ್ಮಕತೆಗೆ 'ಕಲಾ ತಪಸ್ವಿ ರಾಜೇಶ್ ಆತ್ಮಕಥೆ' ಎಂದು ಹೆಸರಿಟ್ಟಿದ್ದಾರೆ. ಹುಣಸೂರು ಕೃಷ್ಣಮೂರ್ತಿ ಅವರು ರಾಜೇಶ್ ಅವರನ್ನು 'ವೀರ ಸಂಕಲ್ಪ' ಚಿತ್ರದ ಮೂಲಕ ಕನ್ನಡ ಬೆಳ್ಳಿಪರದೆಗೆ ಪರಿಚಯಿಸಿದರು. ಅಭಿನಯದ ಜೊತೆಗೆ ಸುಶ್ರಾವ್ಯವಾಗಿ ರಾಜೇಶ್ ಹಾಡಬಲ್ಲರು. ಉದಯ ಕುಮಾರ್, ರಾಜ್ಕುಮಾರ್ ಮತ್ತು ಕಲ್ಯಾಣ್ ಕುಮಾರ್ ತ್ರಯರಿಗೆ ರಾಜೇಶ್ ಚಿತ್ರಗಳು ಪ್ರಬಲ ಸ್ಪರ್ಧೆ ನೀಡಿತ್ತಿದ್ದದ್ದು ವಿಶೇಷ.
1968ರಲ್ಲಿ ಸಿ ವಿ ಶಿವಶಂಕರ್ ನಿರ್ದೇಶನದಲ್ಲಿ ಬಂದಂತಹ 'ನಮ್ಮ ಊರು' ಚಿತ್ರಕ್ಕೆ ಅಂದಿನ ಹಣಕಾಸು ಸಚಿವರಾಗಿದ್ದ ರಾಮಕೃಷ್ಣ ಹೆಗಡೆ ಅವರು ಶೇ.100ರಷ್ಟು ತೆರಿಗೆ ವಿನಾಯಿತಿ ನೀಡಿದ್ದರು. ಬೆಳುವಲದ ಮಡಿಲಲ್ಲಿ, ಕಲಿಯುಗ, ಪಿತಾಮಹ, ಸತ್ಯನಾರಾಯಣ ಪೂಜಾ ಫಲ, ಕರ್ಣ ಚಿತ್ರಗಳು ರಾಜೇಶ್ ಅವರಿಗೆ ಹೆಸರು ತಂದಂತಹ ಚಿತ್ರಗಳು. (ಒನ್ಇಂಡಿಯಾ ಕನ್ನಡ)