Don't Miss!
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆಂಚುರಿ ಹೀರೋ ಆದ ಹ್ಯಾಟ್ರಿಕ್ ಹೀರೋ!
ಶಿವರಾಜ್ ಕುಮಾರ್ ಅವರಿಗೆ ಹೊಸ ಸ್ಟಾರ್ ಗಿರಿ ಸಿಕ್ಕಿದೆ! ಇನ್ನು ಮುಂದೆ ಅವರು 'ಹ್ಯಾಟ್ರಿಕ್ ಹೀರೋ' ಅಲ್ಲ 'ಸೆಂಚುರಿ ಹೀರೋ'. ಈ ಬಿರುದನ್ನು ಶಿವಣ್ಣನಿಗೆ ದಯಪಾಲಿಸಿದವರು ಇನ್ಯಾರು ಅಲ್ಲಾ ಚಾಲೆಂಜಿಂಗ್ ಸ್ಟಾರ್ ದರ್ಶನ್. ಸಂದರ್ಭ 'ಚೆಲುವೆಯೇ ನಿನ್ನೇ ನೋಡಲು' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ.
ಧ್ವನಿಸುರುಳಿ ಬಿಡುಗಡೆಗೆ ದರ್ಶನ್ ಜೊತೆ ಸುದೀಪ್ ಸಹ ಆಗಮಿಸಿದ್ದದ್ದು ವಿಶೇಷವಾಗಿತ್ತು. ದರ್ಶನ್ ಮಾತನಾಡುತ್ತಾ, ಇನ್ನು ಶಿವಣ್ಣ ಅವರನ್ನು ಹ್ಯಾಟ್ರಿಕ್ ಹೀರೋ ಎಂದು ಕರೆದದ್ದು ಸಾಕು. ಅವರ ನಟನೆಯ ಚಿತ್ರಗಳು ನೂರರ ಗಡಿ ಸಮೀಪಿಸುತ್ತಿವೆ. ಹಾಗಾಗಿ ಇನ್ನು ಮುಂದೆ ಅವರನ್ನು 'ಸೆಂಚುರಿ ಹೀರೋ' ಎಂದು ಕರೆಯೋಣ ಎಂದರು. ಈ ಮಾತಿಗೆ ಕೇವಲ ಶಿವಣ್ಣನ ಅಭಿಮಾನಿಗಳಷ್ಟೇ ಅಲ್ಲ ದರ್ಶನ್ ಅಭಿಮಾನಿಗಳಿಂದಲೂ ಕರತಾಡನ ಮುಗಿಲು ಮುಟ್ಟಿತು.
ಕಿಚ್ಚ ಸುದೀಪ್ ಮಾತನಾಡುತ್ತಾ, ತಾವು ಶಿವಣ್ಣನ ಅಭಿಮಾನಿ ಎಂದರು. 'ಓಂ' ಚಿತ್ರವನ್ನು ನೋಡಲು ಹೋಗಿ ಒದೆ ತಿಂದದ್ದನ್ನು ನೆನಪಿಸಿಕೊಂಡರು. ಇನ್ನೊಂದು 'ಓಂ' ತರಹದ ಚಿತ್ರ ಬರಲಿ ಎಂದು ಆಶಿಸಿದರು. ಶಿವಣ್ಣ ಅವರು ರೇಷ್ಮೆ ಬಟ್ಟೆಗಳನ್ನು ಹಾಕುವುದನ್ನು ಕಡಿಮೆ ಮಾಡಿ ಇನ್ನೂ ವಿಭಿನ್ನ ಪಾತ್ರಗಳಲ್ಲಿ ನಟಿಸುವಂತಾಗಲಿ ಎಂದರು. ಸೆಂಟಿಮೆಂಟ್ ಚಿತ್ರಗಳಿಂದ ಶಿವಣ್ಣ ಹೊರಬರಲಿ ಎಂಬ ಭಾವ ಸುದೀಪ್ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.
(ದಟ್ಸ್ ಕನ್ನಡ ಚಿತ್ರವಾರ್ತೆ)