Don't Miss!
- News ಬಂಡೀಪುರ: ಹುಲಿ ದಾಳಿಯಿಂದ ಮರಿಯಾನೆ ಸಾವು, ನಡುರಸ್ತೆಯಲ್ಲೇ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ, ವಿಡಿಯೋ ವೈರಲ್
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಯವಿಟ್ಟು ಪುಟ್ಟಣ್ಣ ಕಣಗಾಲ್ ಥೇಟರ್ ರೀ ಓಪನ್ ಮಾಡಿ
ಪುಟ್ಟಣ್ಣ ಥಿಯೇಟರ್ ಇರುವ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಅತ್ಯಂತ ಜನನಿಬಿಡ ಪ್ರದೇಶ. ಪ್ರಮುಖ ವಾಣಿಜ್ಯ ಕೇಂದ್ರ. ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ತಾಣ. ಅಷ್ಟು ಮಾತ್ರವಲ್ಲದೆ ಹಳೇ ಬೆಂಗಳೂರಿಗರ ಭಾವನಾತ್ಮಕ ಸಂಬಂಧದ ಕೊಂಡಿಯೂ ಹೌದು. ಇಂಥ ಆಯಕಟ್ಟಿನ ಜಾಗದಲ್ಲಿರುವ ಪುಟ್ಟಣ್ಣ ಥಿಯೇಟರ್ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದ್ದು ಯಾರಿಗಾದರೂ ಬೇಸರ ತರಿಸುವ ಸಂಗತಿ.
ಬೆಳೆಯುತ್ತಿರುವ ಬೆಂಗಳೂರಿನಲ್ಲಿ ವಾಣಿಜ್ಯ ವ್ಯವಹಾರಗಳಂತೆ ಸಿನಿಮಾ ಮಂದಿರಗಳ ಸ್ವರೂಪಗಳೂ ಬದಲಾಗುತ್ತಿವೆ. 30-40 ರೂ.ಗಳಲ್ಲಿ ಸಿನಿಮಾ ನೋಡಬಹುದಾಗಿದ್ದ ಥಿಯೇಟರ್ಗಳ ಜಾಗದಲ್ಲಿ ನೂರಾರು ರೂಪಾಯಿ ಕೊಟ್ಟು ನೋಡಬೇಕಾದ ಮಲ್ಟಿಪ್ಲೆಕ್ಸ್ಗಳು ತಲೆಯೆತ್ತಿ ನಿಂತಿವೆ. ಪುಟ್ಟಣ್ಣ ಥಿಯೇಟರ್ ಕೂಡ ಈ ಸಾಲಿಗೆ ಸೇರಬಹುದೇನೋ?
ಕನ್ನಡ ಚಿತ್ರ ನೋಡುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬೊಬ್ಬಿಡುತ್ತಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಕಡಿಮೆ ದರದಲ್ಲಿ ಗುಣಮಟ್ಟದ ಸಿನಿಮಾ ನೋಡಬಹುದಾದ ಪುಟ್ಟಣ್ಣ ಥಿಯೇಟರ್ ಪುನರಾರಂಭಿಸಲು ಆಸಕ್ತಿ ತೋರದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳುವ ಥಿಯೇಟರ್ಗಳು ಒಂದೊಂದಾಗಿ ಮುಚ್ಚುತ್ತಾ ಹೋದರೆ ಕನ್ನಡ ಸಿನಿಮಾ ನೋಡುವುದಾದರೂ ಹೇಗೆ?
ಪುಟ್ಟಣ್ಣ ಕಣಗಾಲ್ ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಿ ಅವರನ್ನು ಹೊಗಳುವ ಸರ್ಕಾರ ಅವರ ಹೆಸರಿನಲ್ಲಿರುವ ಥಿಯೇಟರ್ ಕಣ್ಣೆದುರೇ ಅವಸಾನಗೊಳ್ಳುತ್ತಿದ್ದರೂ ನಿರ್ಲಕ್ಷ್ಯ ತೋರುವುದು ಖಂಡನಾರ್ಹ.
ನಾಗರಿಕರ ಆಶಯದಂತೆ ಪುಟ್ಟಣ್ಣ ಥಿಯೇಟರನ್ನು ನವೀಕರಿಸಿ ತಕ್ಷಣವೇ ಪ್ರದರ್ಶನಕ್ಕೆ ಸಿದ್ಧಪಡಿಸಲು ಬಿಬಿಎಂಪಿ ಮತ್ತು ಸರ್ಕಾರ ಮುಂದಾಗಬೇಕು. ಇಲ್ಲದಿದ್ದಲ್ಲಿ ಅದು ಪುಟ್ಟಣ್ಣನವರಿಗೆ ಮಾಡುವ ಅವಮಾನ. ಈ ಹಿನ್ನೆಲೆಯಲ್ಲಿ ಪುಟ್ಟಣ್ಣ ಥಿಯೇಟರ್ನ್ನು ನವೀಕರಿಸಬೇಕೆಂದು ಆಗ್ರಹಿಸಿ ನಾಗರೀಕರಿಂದ ಸಹಿ ಸಂಗ್ರಹ ಚಳವಳಿ ಮಾಡಲಾಗುತ್ತದೆ.ಇತ್ತೀಚೆಗೆ ವೆಂಕಟಪ್ಪ ಕಲಾ ಮಂದಿರದಲ್ಲಿ ಪುಟ್ಟಣ್ಣ ಅವರ ಜೀವನ ಚಿತ್ರ ಪ್ರದರ್ಶನ ಜನಮೆಚ್ಚುಗೆ ಗಳಿಸಿದೆ. ಅಲ್ಲಿಗೆ ಭೇಟಿ ನೀಡಿದ ಹಲವರು ಪುಟ್ಟಣ್ಣ ಅವರ ಬಗ್ಗೆ ಸರ್ಕಾರ ತೋರುತ್ತಿರುವ ಉದಾಸೀನತೆಗೆ ಬೇಸರ ವ್ಯಕ್ತಪಡಿಸಿದ್ದಾರೆ.