ಸೈಕಲ್ ಮೇಲೆ ಅಂಬಾರಿ ಹೊತ್ತ ಯೋಗೀಶ್!

ಶುಕ್ರವಾರ ಜಂಗ್ಲಿ ಹಾಗೂ ಬಿರುಗಾಳಿ ತೆರೆಕಂಡವು. ಎರಡೂ ನಿರೀಕ್ಷಿತ ಚಿತ್ರಗಳು. ಜೊತೆಗೆ ಬಜೆಟ್ ವಿಷಯದಲ್ಲೂ ಎರಡೂ ದೊಡ್ಡವೇ. ಅವನ್ನು ಮೀರಿ ತನ್ನ ಚಿತ್ರಕ್ಕೆ ಜನ ಬರಲಿ ಅನ್ನೋದು ಯೋಗೀಶ್ ಉದ್ದೇಶ. ಅದಕ್ಕೇ ಅವರು ಈ ರೀತಿ ಪ್ರಚಾರಕ್ಕೆ ಇಳಿದದ್ದು. ಕಾಕತಾಳಿಯವೆಂಬಂತೆ ಸದ್ಯಕ್ಕೆ ಕಲೆಕ್ಷನ್ ಸುಮಾರಾಗಿರುವುದು ಅವರ ಚಿತ್ರವೇ. ಕೈಲಿ ಸಾಕಷ್ಟು ನಟನೆಯ ಅವಕಾಶಗಳಿರುವ ಯೋಗೀಶ್ ಗಾಂಧಿನಗರದ ಡಾರ್ಲಿಂಗ್ ಅನ್ನಿಸಿಕೊಳ್ಳುತ್ತಿರುವುದು ಅವರ ಇಂಥ ಧೋರಣೆಯಿಂದಲೇ. ಸಿನಿಮಾ ತೆರೆಕಾಣುವ ದಿನವೇ ನಾಪತ್ತೆಯಾಗುವ ಕೆಲವು ನಾಯಕರ ನಡುವೆ ಯೋಗೀಶ್ ನಡುರಸ್ತೆಯಲ್ಲಿ ಸೈಕಲ್ ತುಳಿಯುವುದು ಸಣ್ಣ ವಿಷಯವೇನೂ ಅಲ್ಲ.
More from Filmibeat
ಗಾಂಧಿನಗರ ಜಯಂತಿ jayanthi ಯೋಗೀಶ್ ಅಂಬಾರಿ ambari ಸುಪ್ರೀತಾ ಪ್ರಚಾರ ತಂತ್ರ ಸೈಕಲ್ supreetha arjun film publicity actor yogish


Click it and Unblock the Notifications











