ಪಾರ್ವತಮ್ಮ ಅವರಿಗೆ 'ಕರ್ನಾಟಕ ಸ್ತ್ರೀರತ್ನ' ಪ್ರಶಸ್ತಿ

ಪೊಲೀಸ್ ಅಧಿಕಾರಿ ಜೀಜಾ ಹರಿಸಿಂಗ್ ಸಹ 'ಕರ್ನಾಟಕ ಸ್ತ್ರೀರತ್ನ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಮಾಜದ ವಿವಿಧ ಕ್ಷೆತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ರಾಜ್ಯ ಸ್ತ್ರೀಶಕ್ತಿ ಒಕ್ಕೂಟ ಈ ಪ್ರಶಸ್ತಿಯನ್ನು ನೀಡುತ್ತಿದೆ. ಜನವರಿ 11ರಂದು ಬೆಂಗಳೂರಿನ ಪುರಭವನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಒಕ್ಕೂಟದ ರಾಜ್ಯಾಧ್ಯಕ್ಷೆ ಸುಮತಿ ರಾಮಕೃಷ್ಣಗೌಡ ಮಾತನಾಡುತ್ತಾ, ಒಕ್ಕೂಟ ನೀಡಿವ ಶಿರೋಮಣಿ ಪ್ರಶಸ್ತಿಗೆ ಮೆಲ್ಲಹಳ್ಳಿ ಮಹದೇವಸ್ವಾಮಿ, ದಿಲೀಪ್ ಕುಮಾರ್, ಸಿ.ಚಂದ್ರಶೇಖರ್ ಆಯ್ಕೆಯಾಗಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಪಾರ್ವತಮ್ಮ ರಾಜ್ ಕುಮಾರ್ parvathamma rajkumar ಜೀಜಾ ಹರಿಸಿಂಗ್ jija harisingh ಮಹಿಳಾ ಪ್ರಶಸ್ತಿ ಶಿರೋಮಣಿ ಕರ್ನಾಟಕ ಸ್ತ್ರೀರತ್ನ karnataka shrirathna award sumati ramakrishna gowda


Click it and Unblock the Notifications