Don't Miss!
- News ನಾಲ್ಕು ಗೋಡೆಗಳ ಮಧ್ಯೆ ಆಗಿರುವ ಚರ್ಚೆ ಬಹಿರಂಗವಾಗಿ ಹೇಳೋದಕ್ಕೆ ಆಗಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಿದ್ಯಾಕೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿತ್ಯಾನಂದ ಲೀಲಾ ವಿನೋದಗಳಲ್ಲಿ ರಮೇಶ್ ಅರವಿಂದ
ಸ್ವಾಮಿ ನಿತ್ಯಾನಂದ ಲೀಲಾ ವಿನೋದಗಳು ಗಾಂಧಿನಗರಕ್ಕೆ ಸ್ವಲ್ಪ ಉತ್ಸಾಹ ತಂದಂತಿದೆ. ಜಡತ್ವದಿಂದ ಮೈಕೊಡವಿಕೊಂಡಿರುವ ಗಾಂಧಿನಗರ ಇದೀಗ ನಿತ್ಯಾನಂದನ ಮತ್ತೊಂದು ಲೀಲೆಯನ್ನು ತೆರೆಗೆ ತರುವ ಸಿದ್ಧತೆಯಲ್ಲಿದೆ. ಸ್ವಾಮಿ ನಿತ್ಯಾನಂದನ ರಾಸಲೀಲೆ ಗಾಂಧಿನಗರದಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿದೆ.
ಈಗಾಗಲೆ ಸಾಧುಕೋಕಿಲ 'ಸ್ವಾಮೀಜಿ' ಎಂಬ ಸಿನಿಮಾ ಮಾಡುತ್ತಿದ್ದಾರೆ. ಮಿಮಿಕ್ರಿ ದಯಾನಂದ್ ಸಹ 'ಕಾಮಿ ಸ್ವಾಮಿ' ಎಂಬ ವಿಡಿಯೋ ಸಿಡಿಯನ್ನು ಹೊರತಂದಿದ್ದಾರೆ. ಇದೀಗ ರಮೇಶ್ ಅರವಿಂದ್ ಸಹ ನಿತ್ಯಾನಂದನ ಪ್ರಭಾವಕ್ಕೆ ಒಳಗಾಗಿ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ.
ಗಜೇಂದ್ರಚಾರ್ ಎಂಬುವವರು ಚಿತ್ರದ ನಿರ್ದೇಶಕರು. 'ಸಮಾಗಮ' ಚಿತ್ರವನ್ನು ನಿರ್ಮಿಸಿದ್ದ ಅಂದಾನಿ ಗೌಡ ನಿರ್ಮಾಪಕರು.ಚಿತ್ರದಲ್ಲಿ ರಮೇಶ್ ಅವರ ಪಾತ್ರಕ್ಕೆ ಕೊಂಚ ನೆಗಟೀವ್ ಶೇಡ್ಸ್ ಕೊಡಲಾಗಿದೆಯಂತೆ. 'ಅಮೃತವರ್ಷಿಣಿ' ಬಳಿಕ ರಮೇಶ್ ಅಭಿನಯಿಸುತ್ತಿರುವ ನೆಗಟೀವ್ ಪಾತ್ರ ಇದಾಗಲಿದೆ.
ಚಿತ್ರ ಜುಲೈ ತಿಂಗಳ ಮೊದಲವಾರದಲ್ಲಿ ಸೆಟ್ಟೇರಲಿದೆ. ಈ ಚಿತ್ರ ಕೇವಲ ನಿತ್ಯಾನಂದನ ಸುತ್ತ ಸುತ್ತದೆ ಸ್ವಾಮೀಜಿಗಳ ಶಕ್ತಿ ಸಾಮರ್ಥ್ಯಗಳ ಹಾಗೂ ಮಹಿಳೆಯರ ಬಗೆಗಿನ ಪ್ರೀತಿಯ ಬಗ್ಗೆ ಹೆಣೆಯಲಾಗಿದೆಯಂತೆ. ಸ್ವಾಮೀಜಿಯನ್ನು ಪ್ರೀತಿಸುವ ಅವರ ಸುತ್ತಲು ಇರುವ ಮಹಿಳೆಯರ ಬಗ್ಗೆ ಚಿತ್ರಕತೆ ಇರುತ್ತದೆ. ಒಂದು ರೀತಿ ಕಾಮಿಡಿ ಸ್ವಾಮೀಜಿ ಇದ್ದಂತೆ ಎನ್ನುತ್ತಾರೆ ರಮೇಶ್.
ಚಿತ್ರಕ್ಕಾಗಿ ಸೂಕ್ತ ಶೀರ್ಷಿಕೆಯ ಹುಡುಕಾಟ ನಡೆದಿದೆ. ಚಿತ್ರದ ತಾರಾಗಣ ಹಾಗೂ ತಾಂತ್ರಿಕ ಬಳಗದ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ. ಚಿತ್ರದ ನಾಯಕಿಗಾಗಿ ಹುಡುಕಾಟ ನಡೆದಿದೆ. ಆದರೆ ರಂಜಿತಾ ಮಾತ್ರ ಅಲ್ಲ ಎನ್ನುತ್ತಾರೆ ಗೀತ ಸಾಹಿತಿ ಹೃದಯಶಿವ. ಒಟ್ಟಿನಲ್ಲಿ ನಿತ್ಯಾನಂದನ ಮತ್ತೊಂದು ಮುಖ ತೆರೆಯ ಮೇಲೆ ಅನಾವರಣಗೊಳ್ಳಲಿದೆ.