ಭೀಮಾ ತೀರದಲ್ಲಿ ಬೆಂಬಲಿಸಿ ದಲಿತ ಸಂಘನೆಗಳ ರ್ಯಾಲಿ
'ಭೀಮಾ ತೀರದಲ್ಲಿ' ಚಿತ್ರದ ಮೇಲೆ ಬೇಕೆಂದೇ ವಿವಾದ ಸೃಷ್ಟಿಸಲಾಗುತ್ತಿದೆ. ಕೆಲವು ಬುದ್ಧಿಜೀವಿಗಳು, ಪತ್ರಕರ್ತರು ಈ ಚಿತ್ರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ ರಾಜ್ಯದಾದ್ಯಂತ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ದಲಿತ ಸಂಘಟನೆಗಳು ಮಂಗಳವಾರ (ಏ.10) ಎಚ್ಚರಿಸಿವೆ.
'ಭೀಮಾ ತೀರದಲ್ಲಿ' ಚಿತ್ರವನ್ನು ಬೆಂಬಲಿಸಿ ದಲಿತ ಸಂಘನೆಯೊಂದು ಬೃಹತ್ ಬೈಕ್ ಮತ್ತು ಆಟೋಗಳ ಮೂಲಕ ರ್ಯಾಲಿಯನ್ನೂ ಹಮ್ಮಿಕೊಂಡಿತ್ತು. ನೆಲಮಂಗಲದಿಂದ ಆರಂಭವಾದ ರ್ಯಾಲಿ ಬೆಂಗಳೂರು ಗಾಂಧಿನಗರದ ಕಪಾಲಿ ಚಿತ್ರಮಂದಿರದ ತನಕ ನಡೆಯಿತು.
ಈ ಸಂದರ್ಭದಲ್ಲಿ ದುನಿಯಾ ವಿಜಯ್ ಮಾತನಾಡುತ್ತಾ, ನಾನು ಶೋಷಿತ ವರ್ಗದಿಂದ ಬಂದವನು. ಭೀಮಾ ತೀರದಲ್ಲಿ ಚಿತ್ರ ಕದ್ದ ಕತೆಯಲ್ಲ. ಇದೊಂದು ನೈಜ ಘಟನೆಗಳನ್ನು ಆಧರಿಸಿದ ಚಿತ್ರ. ಭೀಮಾ ತೀರದ ಜನ ಬಂದೂಕು ಬಿಟ್ಟು ಪೆನ್ನು ಹಿಡಿಯಿರಿ ಎಂದು ಕರೆನೀಡಿದರು. (ಒನ್ಇಂಡಿಯಾ ಕನ್ನಡ)
More from Filmibeat
English summary
Dalit organisations took out a rally for supporting Kannada film Bheema Theeradalli on Tusday (10th April). The rally starts from Nelamangala to Kapali theater.
ಭೀಮಾ ತೀರದಲ್ಲಿ ದುನಿಯಾ ವಿಜಯ್ ಕೃತಿಚೌರ್ಯ ಕಪಾಲಿ ನೆಲಮಂಗಲ ವಿವಾದ bheema theeradalli duniya vijay plagiarism kapali nelamangala controversy


Click it and Unblock the Notifications











