Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಿರೀಶ್ ಕಾಸರವಳ್ಳಿ 'ಕ್ರೌರ್ಯ' ಚಿತ್ರ ಪ್ರದರ್ಶನ
ಪ್ರತಿಭಾನ್ವಿತ ನಿರ್ದೇಶಕರೆಂದೇ ಖ್ಯಾತರಾಗಿರುವ ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳನ್ನು ನೋಡುವ ಚಾನ್ಸ್ ಸಾಮಾನ್ಯವಾಗಿ ಎಲ್ಲರಿಗೂ ಸಿಗೋದಿಲ್ಲ. ಅವರ ಚಿತ್ರಗಳು ಚಿತ್ರಮಂದಿರಗಳಿಗೆ ಬರೋದೇ ಅಪರೂಪ. ಫೋಟೋ ಶೂಟು, ಮುಹೂರ್ತ, ಬಿಡುಗಡೆ, ಕುಂಬಳಕಾಯಿ ಹೊಡೆಯುವುದು...ಗಾಂಧಿನಗರ ಭಾಷೆಯ ಚಿತ್ರ ಅಲ್ಲವೇ ಅಲ್ಲ. ಆದರೆ ಪ್ರಶಸ್ತಿ ಮಾತ್ರ ಮಿಸ್ ಆಗಲ್ಲ.
ಗಿರೀಶ್ ಕಾಸರವಳ್ಳಿ ಅವರ ಅಪರೂಪದ ಚಿತ್ರಗಳಲ್ಲಿ ಒಂದಾದ 'ಕ್ರೌರ್ಯ' (1996) ಚಿತ್ರ ಪ್ರದರ್ಶನನ್ನು ಏರ್ಪಡಿಸಲಾಗಿದೆ. ಚಿತ್ರ ಸಮೂಹ ಹಾಗೂ ಕೆವಿ ಸುಬ್ಬಣ್ಣ ಆಪ್ತ ಸಮೂಹ ಜಂಟಿಯಾಗಿ ಈ ಕಾರ್ಯವನ್ನು ಹಮ್ಮಿಕೊಂಡಿವೆ. ಎಲ್ ವೈದ್ಯನಾಥನ್ ಅವರ ಸಂಗೀತವಿರುವ ಈ ಚಿತ್ರಕ್ಕೆ ಕತೆ ಟಿ ಎನ್ ಸೀತಾರಾಮ್ ಬರೆದಿದ್ದಾರೆ.
ಚಿತ್ರದ ಪಾತ್ರವರ್ಗದಲ್ಲಿ ಮಾಸ್ಟರ್ ವಿಶ್ವಾಸ್, ದತ್ತಾತ್ರೇಯ, ರೇಣುಕಮ್ಮ ಮುರುಗೋಡು, ವಿಜಯ ಎಕ್ಕುಂಡಿ, ಅಶೋಕ್ ಹೆಗಡೆ, ಸ್ವಾತಿ ಮುಂತಾದ ಕಲಾವಿದರಿದ್ದಾರೆ. ಚಿತ್ರದ ತಾಂತ್ರಿಕ ಹಾಗೂ ಕಲಾ ಬಳಗದ ಜೊತೆ ಸಂವಾದವೂ ಇರುತ್ತದೆ. ಇದೇ ಭಾನುವಾರ (ಮಾ.11) ಸಂಜೆ 5 ಗಂಟೆಗೆ ಕೆವಿ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ. ವಿಳಾಸ: ನಂ.151, 7ನೇ ಕ್ರಾಸ್, ಟೀಚರ್ಸ್ ಕಾಲೋನಿ, ಬೆಂಗಳೂರು-78. (ಒನ್ಇಂಡಿಯಾ ಕನ್ನಡ)