Don't Miss!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- News ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೇಡ್ಗಾರ್ಡನ್ನಲ್ಲಿ ದುಶ್ಯಂತನ ಕಲ್ಯಾಣ
ಬೆಂಗಳೂರು ಹೊರವಲಯದ ಜೇಡ್ಗಾರ್ಡನ್ನಲ್ಲಿ ಅಂದು 'ಮದುವೆಮನೆ'ಯ ಸಡಗರ. ಎಲ್ಲಿ ನೋಡಿದರೂ ಜನಜಂಗುಳಿ. ಮಂಗಳವಾದ್ಯಗಳ ನಿನಾದ. ಇಷ್ಟು ಸಂಭ್ರಮದಲ್ಲಿ ದುಶ್ಯಂತ ಹಾಗೂ ಸುಮಳ ಕಲ್ಯಾಣ ಮಹೋತ್ಸವ ವೈಭವದಿಂದ ನಡೆದಿದೆ. ಇವರ ಸ್ನೇಹಿತ ಸೂರಜ್ 'ಮದುವೆಮನೆ'ಯ ಪ್ರಮುಖ ಆಕರ್ಷಣೆ.
ಸುಮಳನ್ನು ಹಸೆಮಣೆಗೆ ಕರೆದುಕೊಂಡು ಬರುವ ಉಸ್ತುವಾರಿಯು ಸೂರಜ್ನದೆ. ಈ ಸನ್ನಿವೇಶವನ್ನು 'ಮದುವೆಮನೆ' ಚಿತ್ರಕ್ಕಾಗಿ ನಿರ್ದೇಶಕ ಸುನೀಲ್ಕುಮಾರ್ ಸಿಂಗ್ ಜೇಡ್ಗಾರ್ಡನ್ನಲ್ಲಿ ಚಿತ್ರಿಸಿಕೊಂಡರು. ಈ ಮದುವೆ ಸನ್ನಿವೇಶಕ್ಕಾಗಿ ಕಲಾನಿರ್ದೇಶಕ ಮೋಹನ್ ಬಿ ಕೆರೆ ಚಿತ್ತಾಕರ್ಷಕ ಸೆಟ್ ನಿರ್ಮಿಸಿದ್ದರು. ದುಶ್ಯಂತ್ ಪಾತ್ರದಲ್ಲಿ ಅವಿನಾಶ್(ಜುಗಾರಿ), ಸುಮಳಾಗಿ ಶ್ರದ್ಧಾಆರ್ಯ, ಸೂರಜ್ ಪಾತ್ರದಲ್ಲಿ ಗಣೇಶ್ ಅಭಿನಯಸಿದ್ದರು. ಹನುಮಂತೇಗೌಡ, ಶರಣ್, ತಬಲನಾಣಿ, ಚಿತ್ಕಲಾ, ಧನಲಕ್ಷ್ಮೀ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿದ್ದರು.
ಜೆ.ಜೆ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ 'ಮದುವೆಮನೆ' ಚಿತ್ರಕ್ಕೆ ಸುನೀಲ್ಕುಮಾರ್ ಸಿಂಗ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತವಿರುವ ಈ ಚಿತ್ರಕ್ಕೆ ಶೇಖರ್ಚಂದ್ರು ಛಾಯಾಗ್ರಹಣವಿದೆ. ಸೌಂದರ್ ರಾಜ್ ಸಂಕಲನ, ರವಿವರ್ಮ ಸಾಹಸ ಈ ಚಿತ್ರಕ್ಕಿದೆ.