Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರು.250 ಕೋಟಿ ಆಸ್ತಿಗೆ 'ವಾರಸ್ದಾರ' ರವಿ ಬೆಳಗೆರೆ
24x7 ಪತ್ರಕರ್ತ ಹಾಗೂ ಪಾರ್ಟ್ ಟೈಂ ಕಲಾವಿದರಾಗಿ ಗುರುತಿಸಿಕೊಂಡಿರುವ ರವಿ ಬೆಳಗೆರೆ ಅವರು ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ಮಹಾನದಿ ಕ್ರಿಯೇಷನ್ಸ್ ಲಾಂಛನದಲ್ಲಿ ರವಿ ಬೆಳಗೆರೆ ಅರ್ಪಿಸುತ್ತಿರುವ 'ಬಾಲ್ ಪೆನ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ತಮ್ಮ ಆರಂಭದ ದಿನಗಳನ್ನು ನೆನೆಸಿಕೊಂಡ ಅವರು, ತಾನು ಬಳ್ಳಾರಿಯಿಂದ ತುಮಕೂರಿಗೆ ಬಂದಿಳಿದಾಗ ನನ್ನ ಬಳಿ ಇದ್ದದ್ದು ಕೇವಲ 380 ರುಪಾಯಿ. ಈಗ ತಮ್ಮ ಶಿಕ್ಷಣ ಸಂಸ್ಥೆ ಪ್ರಾರ್ಥನಾ ಸೇರಿದಂತೆ ತಮ್ಮ ಸಮಗ್ರ ಆಸ್ತಿ ಬೆಲೆ 250 ಕೋಟಿ ರುಪಾಯಿಗಳು ಎಂದು ತಿಳಿಸಿದರು. ತಮ್ಮ ಪ್ರಾರ್ಥನಾ ಶಾಲೆಯಲ್ಲಿ 6,700 ಮಕ್ಕಳು ಶಿಕ್ಷಣ ಪಡೆಯುತ್ತಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡರು.
ಒಬ್ಬ ಶಿಕ್ಷಕಿಯ ಮಗ, ಹಾಗೆಯೇ ಶಿಕ್ಷಕಿಯಾದ ಮಡದಿಗೆ ಪತಿಯಾಗಿ ಮೂರು ಮಕ್ಕಳ ತಂದೆಯಾಗಿ ತಮ್ಮದು ಸುಖಿ ಕುಟುಂಬ ಎಂದ ಅವರು, ತಮ್ಮ ಇಬ್ಬರು ಪುತ್ರಿಯರು ಅಂತರ್ಜಾತೀಯ ವಿವಾಹವಾಗಿರುವುದು ತಮಗೆ ಖುಷಿ ಕೊಟ್ಟಿದೆ ಎಂದರು. ತಮ್ಮ ಪುತ್ರನೂ ಶೀಘ್ರದಲ್ಲೇ ಮದುವೆಯಾಗುವುದಾಗಿ ತಿಳಿಸಿದರು.
'ಬಾಲ್ ಪೆನ್' ಚಿತ್ರವನ್ನು ಭಾವನಾ ಬೆಳೆಗೆರೆ ಹಾಗೂ ಶ್ರೀನಗರ ಕಿಟ್ಟಿ ನಿರ್ಮಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತವಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಶಶಿಕಾಂತ್. ಛಾಯಾಗ್ರಹಣ ಸಿಜೆ ರಾಜ್ಕುಮಾರ್, ಸಂಕಲನ ಶ್ರೀ, ಕತೆ ಕೆಸಿ ಮಂಜುನಾಥ್ ಹಾಗೂ ಸಾಹಿತ್ಯ ರಾಘವ ದ್ವಾರ್ಕಿ. ಪಾತ್ರವರ್ಗದಲ್ಲಿ ಸುಚೇಂದ್ರ ಪ್ರಸಾದ್, ಶ್ರೀನಗರ ಕಿಟ್ಟಿ, ಮಿಲಿಂದ್ ಶರ್ಮ ಮುಂತಾದವರಿದ್ದಾರೆ.
ಈ ಚಿತ್ರದ ಮೂಲಕ ಅನಿವಾಸಿ ಭಾರತೀಯ ಆದಿತ್ಯ ರಾವ್ ಗಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿರುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನ 'ಬಾಲ್ ಪೆನ್' ಚಿತ್ರ ಅಕ್ಟೋಬರ್ 26ರಂದು ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ಆದಿತ್ಯ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. (ಒನ್ಇಂಡಿಯಾ ಕನ್ನಡ)