Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರು.250 ಕೋಟಿ ಆಸ್ತಿಗೆ 'ವಾರಸ್ದಾರ' ರವಿ ಬೆಳಗೆರೆ
24x7 ಪತ್ರಕರ್ತ ಹಾಗೂ ಪಾರ್ಟ್ ಟೈಂ ಕಲಾವಿದರಾಗಿ ಗುರುತಿಸಿಕೊಂಡಿರುವ ರವಿ ಬೆಳಗೆರೆ ಅವರು ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ಮಹಾನದಿ ಕ್ರಿಯೇಷನ್ಸ್ ಲಾಂಛನದಲ್ಲಿ ರವಿ ಬೆಳಗೆರೆ ಅರ್ಪಿಸುತ್ತಿರುವ 'ಬಾಲ್ ಪೆನ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ತಮ್ಮ ಆರಂಭದ ದಿನಗಳನ್ನು ನೆನೆಸಿಕೊಂಡ ಅವರು, ತಾನು ಬಳ್ಳಾರಿಯಿಂದ ತುಮಕೂರಿಗೆ ಬಂದಿಳಿದಾಗ ನನ್ನ ಬಳಿ ಇದ್ದದ್ದು ಕೇವಲ 380 ರುಪಾಯಿ. ಈಗ ತಮ್ಮ ಶಿಕ್ಷಣ ಸಂಸ್ಥೆ ಪ್ರಾರ್ಥನಾ ಸೇರಿದಂತೆ ತಮ್ಮ ಸಮಗ್ರ ಆಸ್ತಿ ಬೆಲೆ 250 ಕೋಟಿ ರುಪಾಯಿಗಳು ಎಂದು ತಿಳಿಸಿದರು. ತಮ್ಮ ಪ್ರಾರ್ಥನಾ ಶಾಲೆಯಲ್ಲಿ 6,700 ಮಕ್ಕಳು ಶಿಕ್ಷಣ ಪಡೆಯುತ್ತಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡರು.
ಒಬ್ಬ ಶಿಕ್ಷಕಿಯ ಮಗ, ಹಾಗೆಯೇ ಶಿಕ್ಷಕಿಯಾದ ಮಡದಿಗೆ ಪತಿಯಾಗಿ ಮೂರು ಮಕ್ಕಳ ತಂದೆಯಾಗಿ ತಮ್ಮದು ಸುಖಿ ಕುಟುಂಬ ಎಂದ ಅವರು, ತಮ್ಮ ಇಬ್ಬರು ಪುತ್ರಿಯರು ಅಂತರ್ಜಾತೀಯ ವಿವಾಹವಾಗಿರುವುದು ತಮಗೆ ಖುಷಿ ಕೊಟ್ಟಿದೆ ಎಂದರು. ತಮ್ಮ ಪುತ್ರನೂ ಶೀಘ್ರದಲ್ಲೇ ಮದುವೆಯಾಗುವುದಾಗಿ ತಿಳಿಸಿದರು.
'ಬಾಲ್ ಪೆನ್' ಚಿತ್ರವನ್ನು ಭಾವನಾ ಬೆಳೆಗೆರೆ ಹಾಗೂ ಶ್ರೀನಗರ ಕಿಟ್ಟಿ ನಿರ್ಮಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತವಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಶಶಿಕಾಂತ್. ಛಾಯಾಗ್ರಹಣ ಸಿಜೆ ರಾಜ್ಕುಮಾರ್, ಸಂಕಲನ ಶ್ರೀ, ಕತೆ ಕೆಸಿ ಮಂಜುನಾಥ್ ಹಾಗೂ ಸಾಹಿತ್ಯ ರಾಘವ ದ್ವಾರ್ಕಿ. ಪಾತ್ರವರ್ಗದಲ್ಲಿ ಸುಚೇಂದ್ರ ಪ್ರಸಾದ್, ಶ್ರೀನಗರ ಕಿಟ್ಟಿ, ಮಿಲಿಂದ್ ಶರ್ಮ ಮುಂತಾದವರಿದ್ದಾರೆ.
ಈ ಚಿತ್ರದ ಮೂಲಕ ಅನಿವಾಸಿ ಭಾರತೀಯ ಆದಿತ್ಯ ರಾವ್ ಗಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿರುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನ 'ಬಾಲ್ ಪೆನ್' ಚಿತ್ರ ಅಕ್ಟೋಬರ್ 26ರಂದು ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ಆದಿತ್ಯ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. (ಒನ್ಇಂಡಿಯಾ ಕನ್ನಡ)