Don't Miss!
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- News ಮಗಳ ಹತ್ಯೆ ಬಗ್ಗೆ ತಂದೆ ನಿರಂಜನ್ ಹಿರೇಮಠ ಪ್ರತಿಕ್ರಿಯೆ: ಒಂದು ಟ್ವೀಟ್ಗೆ ಸಿಎಂ ಜವಾಬ್ದಾರಿ ಮುಗಿಯಿತೇ?: ಮಾಜಿ ಸಿಎಂ
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Technology iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂವಾದ ತಂಡದಿಂದ 'ವಿಮುಕ್ತಿ' ವಿಮರ್ಶಾ ಸ್ಪರ್ಧೆ
ಪಿ ಶೇಷಾದ್ರಿಯವರ 'ವಿಮುಕ್ತಿ'ಗೆ ರಜತ ಕಮಲ ಸಿಕ್ಕಿದೆ. ಕಾಸರವಳ್ಳಿಯ ನಂತರ ಕನ್ನಡದಲ್ಲಿ ಬಹು ಮುಖ್ಯ ದಿಗ್ದರ್ಶಕರೆನಿಸಿಕೊಂಡಿರುವವರು ಶೇಷಾದ್ರಿ. ಈ ಕಾರಣವನ್ನೇ ನೆವವಾಗಿಟ್ಟುಕೊಂಡು "ವಿಮುಕ್ತಿ" ಚಿತ್ರದ ಕುರಿತು ವಿಮರ್ಶಾ ಸ್ಪರ್ಧೆ ನಡೆಸಲು ಸಂವಾದ ನಿರ್ಧರಿಸಿದೆ.
ಹಣದ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿರುವ ಜನಪ್ರಿಯ ಚಿತ್ರಗಳ ನಡುವೆ ಇಂತಹ ಚಿತ್ರಗಳನ್ನು ಪ್ರೋತ್ಸಾಹಿಸುವುದು ಸಹೃದಯ ನೋಡುಗನ ಜವಾಬ್ದಾರಿಯೂ ಹೌದಲ್ಲವೆ? ಮೊದಲನೇ ಅತ್ಯುತ್ತಮ ವಿಮರ್ಶೆಗೆ 2000 ರೂಪಾಯಿಗಳು, ಎರಡನೇ ಅತ್ಯುತ್ತಮ ವಿಮರ್ಶೆಗೆ 1000 ರೂಪಾಯಿಗಳು ಬಹುಮಾನವಾಗಿ ನೀಡಲಾಗುತ್ತದೆ.
ವಿದ್ಯಾರ್ಥಿ ವಿಭಾಗದ ಅತ್ಯುತ್ತಮ ವಿಮರ್ಶಾ ಲೇಖನಕ್ಕೆ 2000 ರೂಪಾಯಿಗಳು. ಬರಹವು ವಿಮರ್ಶಾತ್ಮಕವಾಗಿರಲಿ. ಪದಗಳ ಮಿತಿಯಿಲ್ಲ, ಬರಹ ಸ್ವಂತದ್ದಾಗಿರಲಿ ಎಂಬ ಷರತ್ತುಗಳು ನಿಮ್ಮ ಗಮನಕ್ಕೆ. ಮಾರ್ಚ್ 10 ರೊಳಗೆ ವಿಮರ್ಶೆಯನ್ನು [email protected] ಗೆ ಈ ಮೇಲ್ ಮಾಡಿ ಅಥವಾ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಬಹುದು.
ವಿಳಾಸ:
ನಂ
103,
ಮೊದಲನೇ
ಮಹಡಿ
ಜನಪ್ರಿಯ
ಲೇಕ್
ವ್ಯೂ
ಅಪಾರ್ಟಮೆಂಟ್
ಕೋಡಿಚಿಕ್ಕನಹಳ್ಳಿ,
ಬೆಂಗಳೂರು-560076
ದೂರವಾಣಿ:
080-2648
4617