ಬೆಳ್ಳಿ ಪರದೆಗೆ ಮಾಜಿ ಡಾನ್ ಮುತ್ತಪ್ಪ ರೈ ಕುಡಿ
ಈಗಾಗಲೆ ಬೆಳ್ಳಿತೆರೆ ಮೇಲೆ ಗುರುತಿಸಿಕೊಳ್ಳುತ್ತಿರುವ ಮಾಜಿ ಭೂಗತ ದೊರೆ ಮುತ್ತಪ್ಪ ರೈ ತಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಲು ಹೊರಟಿದ್ದಾರೆ. ಮುತ್ತಪ್ಪ ರೈ ತಮ್ಮದೇ ಜೀವನ ಚರಿತ್ರೆಯನ್ನು ಬೆಳ್ಳಿ ಪರದೆಗೆ ತರುವ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ತಮ್ಮ ಪುತ್ರನನ್ನೇ ಫೀಲ್ಡ್ಗೆ ಇಳಿಸುತ್ತಿದ್ದಾರೆ.
ಈ ಚಿತ್ರದ ನಿರ್ಮಾಣ ಕೆಲಸಗಳನ್ನು ನೋಡಿಕೊಳ್ಳಲಿರುವ ಅವರು ನಾಯಕನ ಪಾತ್ರಕ್ಕೆ ತಮ್ಮ ಮಗನೇ ಸರಿಯಾದ ಆಯ್ಕೆ ಎಂದು ತೀರ್ಮಾನಿಸಿದಂತಿದೆ. ತಮ್ಮದೇ ಕತೆಗೆ ಜೀವ ತುಂಬಲು ಮಗನಿಗೆ ಚಾನ್ಸ್ ಕೊಡುತ್ತಿದ್ದಾರೆ ಎನ್ನುತ್ತವೆ ಮೂಲಗಳು.
ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ನಾಯಕ ನಟನ ಪರಿಚಯವಾಗಲಿದೆ. ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಯಾರಿಗೆ ವಹಿಸಲಿದ್ದಾರೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ. 'ಕಠಾರಿ ವೀರ ಸುರ ಸುಂದರಾಂಗಿ' ಚಿತ್ರದಲ್ಲಿ ಮುತ್ತಪ್ಪ ಅಭಿನಯಿಸುತ್ತಿರುವು ಗೊತ್ತೇ ಇದೆ. (ಏಜೆನ್ಸೀಸ್)
English summary
The founder of Jai Karnataka Kannada Association Muttappa Rai is all set to introduce his son to Kannada films. He has doing his real life story in reel. More details about the movie is awaited.


Click it and Unblock the Notifications