ದಾವಣಗೆರೆಯಲ್ಲಿ ನಾಳೆ ಸಾರಥಿ ದರ್ಶನ್ ರೋಡ್ ಶೋ

Darshan
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಬೆಂಗಳೂರಿನ 'ನರ್ತಕಿ' ಚಿತ್ರಮಂದಿರದಿಂದ 'ಸಾರಥಿ ರೋಡ್ ಶೋ' ಗೆ ಚಾಲನೆ ನೀಡಿದ್ದಾರೆ. ನಿರೀಕ್ಷೆಗೂ ಮೀರಿ ನೆರೆದಿದ್ದ ಅಸಂಖ್ಯಾತ ಜನರನ್ನು ನೋಡಿ ದರ್ಶನ್ ಹೃದಯ ತುಂಬಿ ಬಂದಿದೆ ಎಂದು ತಿಳಿದುಬಂದಿದೆ. ಸಾಕಷ್ಟು ಅಭಿಮಾನಿಗಳ ಜೊತೆ ದರ್ಶನ್ ಮಾತನಾಡಿದ್ದಾರೆ. ಸಾರಥಿಯ ಈ ರೋಡ್ ಶೋ ಸಾಕಷ್ಟು ಯಶಸ್ವಿಯಾಗುವ ಲಕ್ಷಣ ಬೆಂಗಳೂರಿನಲ್ಲೇ ಗೋಚರಿಸಿದೆ.

ಇಂದು ಬೆಂಗಳೂರಿನಿಂದ ಹೊರಟ ಸಾರಥಿ ರೋಡ್ ಶೋ ತಲುಪಿದ್ದು ಸೀದಾ ತುಮಕೂರಿಗೆ. ಅಲ್ಲಿ ತಮ್ಮಮೆಚ್ಚಿನ ನಟ ದರ್ಶನ್ ರನ್ನು ಖುದ್ದು ನೋಡಲು ನೆರೆದಿದ್ದರು ಅಸಂಖ್ಯಾತ ಅಭಿಮಾನಿಗಳು. ತುಮಕೂರಿನಲ್ಲಿ ಕೂಡ 'ಸಾರಥಿ' ಚಿತ್ರ ಯಶಸ್ವಿಯಾಗಿ ಓಡುತ್ತಿದ್ದು ಮುಂದೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಮೂಡಿಸಿದೆ. ಅಲ್ಲಿ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ.

ನಾಳೆ ಸಾರಥಿ ರೋಡ್ ಶೋ ನಡೆಯಲಿರುವ ಸ್ಥಳ ದಾವಣಗೆರೆ ಜಿಲ್ಲೆ. ಅಲ್ಲಿ ಬಹಳಷ್ಟು ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ. ದಾವಣಗೆರೆಯಲ್ಲಿ ಕೂಡ ಸಾರಥಿ ಈಗಾಗಲೇ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನಾಳೆ ಬೆಳಿಗ್ಗೆ ದರ್ಶನ್ ಭೇಟಿಗಾಗಿ ದಾವಣೆಗೆರೆ ನಗರ ಈಗಾಗಲೇ ಸಿದ್ಧಗೊಳ್ಳುತ್ತಿದ್ದು ಜಿಲ್ಲೆಯ ಹಳ್ಳಿಗಳಿಂದಲೂ ಜನ ತಂಡೋಪತಂಡವಾಗಿ ಬರುವ ನಿರೀಕ್ಷೆ ಮೂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

More from Filmibeat

English summary
Challenging Star Darshan started Sarathi road show from Bangalore. Today he went to tumkur and he goes to davanagere district tomorrow.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X