Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹರಿಕಥೆ ಹಸನಾಗಿಸಲು ಪತ್ರಕರ್ತರಿಗೆ ದಯಾಳ್ ಮೊರೆ
ತಮಿಳು ಶೈಲಿಯಲ್ಲಿ ಕನ್ನಡ ಮಾತಾಡುವ ನಿರ್ದೆಶಕ ದಯಾಳ್ ಪದ್ಮನಾಭನ್ಗೆ ಈ ಸಲ ತುಸು ಹೆಚ್ಚೇ ಉತ್ಸಾಹದಿಂದ ಮಾತನಾಡಿದರು. ತಮ್ಮ ನಿರ್ದೇಶನದ ಹೊಸ ಚಿತ್ರ "ಶ್ರೀ ಹರಿಕಥೆ" ಕುರಿತು ಅವರಿಗೆ ಅಪಾರ ಭರವಸೆ. ಅದಕ್ಕೇ ಬಿಡುಗಡೆಗೆ ಮುನ್ನವೇ ಚಿತ್ರವನ್ನು ಪಕ್ಕಾ ರೀತಿಯಲ್ಲಿ ಟ್ರಿಮ್ ಮಾಡುವ ಉದ್ದೇಶ ಅವರದ್ದು.
ಈಗಾಗಲೇ ತಮ್ಮ ಎಂಬತ್ತು ಗೆಳೆಯರಿಗೆ ಅವರು ಚಿತ್ರ ತೋರಿಸಿದ್ದಾರೆ. ಕೆಲವರು ಸಲಹೆ ಕೊಟ್ಟರೆಂಬ ಕಾರಣಕ್ಕೆ ನಾಲ್ಕು ನಿಮಿಷದಷ್ಟು ಟ್ರಿಮ್ ಮಾಡಿದ್ದಾರೆ. ಅವರು ಎರಡನೇ ಹಂತವಾಗಿ ಪತ್ರಕರ್ತರಿಗೆ ಬಿಡುಗಡೆಗೆ ಒಂದು ವಾರ ಮೊದಲೇ ಸಿನಿಮಾ ತೋರಿಸಲು ನಿರ್ಧರಿಸಿದ್ದಾರೆ. ಅವರ ಷರತ್ತೆಂದರೆ- ಮೊದಲಿಗೆ ಸಾದಾ ಪ್ರೇಕ್ಷಕನಂತೆ ಸಿನಿಮಾ ನೋಡಬೇಕು; ವಿಮರ್ಶೆ ಮಾಡುವ ದೃಷ್ಟಿಯಿಂದ ಅಲ್ಲ. ಏನಾದರೂ ಲೋಪ ಇದೆ ಎನ್ನಿಸಿದರೆ ಅದನ್ನು ಮುಕ್ತವಾಗಿ ಹೇಳಬೇಕು. ಹೆಚ್ಚು ಅಭಿಪ್ರಾಯಗಳನ್ನು ಆಧರಿಸಿ ಆಗ ಮತ್ತೆ ಚಿತ್ರವನ್ನು ಟ್ರಿಮ್ ಮಾಡಬಹುದೆಂಬುದು ಅವರ ಯೋಚನೆ.
ನನ್ನ ಆರು ಚಿತ್ರಗಳಲ್ಲಿ ಇದೇ ಬೆಸ್ಟ್ ಅಂತ ಕ್ಲೋಸ್ ಫ್ರೆಂಡ್ಸ್ ಹೇಳಿದಾರೆ. ನಂಗೂ "ಚೆನ್ನಾಗಿ ಬಂದಿದೆ ಅಂತ ಅನ್ನಿಸ್ತಿದೆ. ಒಂದು ಒಳ್ಳೆ ಸಿನಿಮಾ ಕೊಡೋಣ ಎಂಬ ಆಸೆ. ಅದಕ್ಕೇ ಇಷ್ಟೆಲ್ಲಾ ಒದ್ದಾಡ್ತಾ ಇದೀನಿ" ಎಂದರು ದಯಾಳ್. ಸರ್ಕಸ್ ಚಿತ್ರ ಮಕಾಡೆಯಾದ ಮೇಲೆ ಸಾಕಷ್ಟು ಹಣ ಕಳೆದುಕೊಂಡಿದ್ದ ದಯಾಳ್ ಅಲ್ಲಿ ಆದ ತಪ್ಪನ್ನು ಸರಿಪಡಿಸಿಕೊಳ್ಳಲು ಎಲ್ಲಾ ದಾರಿಗಳನ್ನೂ ಈಗ ಹುಡುಕುತ್ತಿರುವುದಂತೂ ಸ್ಪಷ್ಟ.
ಮೊದಲೇ ಚಿತ್ರ ನೋಡಿ ಸಲಹೆ ಕೊಡುವಿರಾ ಎಂಬ ಅವರ ಬೇಡಿಕೆಗೆ ಒಂದಿಬ್ಬರು ಪತ್ರಕರ್ತರು ಆಗಬಹುದು ಎಂದರು. ಅದು ಎಲ್ಲಾ ಪತ್ರಕರ್ತರ ಅಭಿಪ್ರಾಯ ಎಂದು ಭಾವಿಸಿ ದಯಾಳ್ ಹಾಗೂ ನಾಯಕ ಶ್ರೀಮುರಳಿ ಧನ್ಯವಾದ ಹೇಳಿದರು. ಈ ಘಟನೆ ನಡೆಯುವ ಮುನ್ನ ಚಿತ್ರದ ಹಾಡುಗಳನ್ನು ಪ್ರದರ್ಶಿಸಲಾಯಿತು. ಅಂದಹಾಗೆ, ಮಾರ್ಚ್ 5ರಂದು "ಶ್ರೀ ಹರಿಕಥೆ" ತೆರೆಕಾಣಲಿದೆ.