Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸರ್ಕಸ್ 'ಚಿತ್ರ ತಕ್ಕ ಪಾಠ ಕಲಿಸಿದೆ: ದಯಾಳ್
''ಆ ಆಘಾತದಿಂದ ಚೇತರಿಸಿಕೊಂಡು 'ಕದ್ದು ಮುಚ್ಚಿ' ಚಿತ್ರವನ್ನು ಕೈಗೆತ್ತಿಕೊಂಡಿದ್ದೇನೆ. ಸರ್ಕಸ್ ಚಿತ್ರ ಒಳ್ಳೆ ಪಾಠ ಕಲಿಸಿದೆ. ಈ ಹಿಂದಿನ ತಪ್ಪುಗಳು ಈ ಚಿತ್ರದಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇನೆ ಎನ್ನುತ್ತಾರೆ ದಯಾಳ್. ಈ ಮಧ್ಯೆ ಸರ್ಕಸ್ ಚಿತ್ರವನ್ನು ದಯಾಳ್ ತನ್ನ ಸ್ನೇಹಿತರು ಹಾಗೂ ಸಂಬಂಧಿಗಳೊಂದಿಗೆ ಮತ್ತೊಮ್ಮೆ ವೀಕ್ಷಿಸಿದ್ದಾರಂತೆ. ಚಿತ್ರದಲ್ಲಿನ ದೋಷಗಳನ್ನು ತಿಳಿಯುವ ಪ್ರಯತ್ನ ತಮ್ಮದು ಎನ್ನುತ್ತಾರೆ ದಯಾಳ್.
ಚಿತ್ರದಲ್ಲಿನ ತಪ್ಪು ಒಪ್ಪುಗಳ ಬಗ್ಗೆ ನನ್ನ್ನ ಸ್ನೇಹಿತರು ಚರ್ಚಿಸಿದ್ದಾರೆ. ನನ್ನ ಮುಂದಿನ ಚಿತ್ರಗಳಲ್ಲಿ ಈ ರೀತಿಯ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ದಯಾಳ್ ತಿಳಿಸಿದ್ದಾರೆ. ಕದ್ದು ಮುಚ್ಚಿ ಚಿತ್ರದಲ್ಲಿ ದಿಗಂತ್ ಮತ್ತು ರಾಧಿಕಾ ಪಂಡಿತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ''ಕದ್ದು ಮುಚ್ಚಿ ಎಂಬ ಶೀರ್ಷಿಕೆಯನ್ನು ಈಗಾಗಲೇ ಮತ್ತೊಬ್ಬರು ನೋಂದಾಯಿಸಿಕೊಂಡಿದ್ದಾರೆ. ಆ ಶೀರ್ಷಿಕೆಯನ್ನು ತಮಗೆ ಕೊಡುವಂತೆ ಅವರ ಬಳಿ ವಿನಂತಿಸಿಕೊಳ್ಳುತ್ತೇನೆ'' ಎಂದು ದಯಾಳ್ ತಿಳಿಸಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)