ಹೊಸ ನಿರ್ದೇಶಕರೆಲ್ಲಾ ಅಡ್ಡಕಸುಬಿಗಳು: ರಾಜೇಂದ್ರ ಸಿಂಗ್ ಬಾಬು

ಗಾಂಧಿನಗರದಲ್ಲಿ ಈಗ ಮೇಕರ್ಸ್ ಅಂತ ನಾಲ್ಕೇ ಜನ ಇದ್ವಿ. ಈಗ ನೀನು ಸೇರಿಕೊಂಡಿದೀಯ ರಂಗನಾಥ್. ಭಟ್ಟ (ಯೋಗರಾಜ್), ಸೂರಿ, ನಾನು, ಪ್ರೀತು (ಪ್ರೀತಮ್ ಗುಬ್ಬಿ), ನೀನು... ಈಗ ನಿರ್ದೇಶಕರು ಅಂತ ಇರೋದೇ ಇಷ್ಟು: ನಾಗಶೇಖರ (ಗುಲಾಮ ಚಿತ್ರ ಬಿಡುಗಡೆಯಾದ ನಂತರ ರಂಗನಾಥ್ ಜೊತೆ ನಡೆಸಿದ ಸಂಭಾಷಣೆ).
ಕನ್ನಡ ಸಿನಿಮಾ ದೊಡ್ಡ ಕ್ರೈಸಿಸ್ನಲ್ಲಿರುವ ಈ ಕಾಲಮಾನದಲ್ಲಿ ಭರವಸೆ ಇಡಬಹುದಾದ ನಿರ್ದೇಶಕರು ಆಡಿರುವ ಮಾತುಗಳಿವು. ರಾಜೇಂದ್ರ ಸಿಂಗ್ ಬಾಬು ಈಗ ಕನಸು ಕಟ್ಟಲು ಹೆಣಗಾಡುತ್ತಿರುವವರು. ಶಶಾಂಕ್ ನಿರ್ದೇಶಿಸಿರುವುದು ಎರಡೇ ಸಿನಿಮಾ. ಮೊಗ್ಗಿನ ಮನಸ್ಸು" ಲಾಸು ಅಂತ ನಿರ್ಮಾಪಕ ಇ.ಕೃಷ್ಣಪ್ಪ ಹೇಳಿಕೊಂಡು ಓಡಾಡುತ್ತಿದ್ದಾರೆ. ಇನ್ನು ನಾಗಶೇಖರ ಅರಮನೆ" ನಂತರ ಇನ್ನೊಂದು ಚಿತ್ರವನ್ನೇ ನಿರ್ದೇಶಿಸಿಲ್ಲ. ಅರಮನೆ" ಸದಭಿರುಚಿಯ ಸಿನಿಮಾ ಆದರೂ ಅದನ್ನು ನೂರು ದಿನ ತಳ್ಳಿ ನೂಕಿ ಓಡಿಸಿದ್ದು ಎಂಬುದು ಗುಟ್ಟೇನೂ ಅಲ್ಲ. ಗಣೇಶನ ಆಣತಿಯ ಮೇರೆಗೆ ನೂರು ದಿನದ ಸಮಾರಂಭ ಮಾಡಿ ನಿರ್ಮಾಪಕ ಕೆ.ಮಂಜು ಮುಖ ಕಿವುಚಿಕೊಂಡಿದ್ದು ಗೊತ್ತೇ ಇದೆ!

ಕನ್ನಡ ಚಿತ್ರರಂಗದಲ್ಲಿ ಈಗ ಕೊರತೆ ಇರುವುದು ಕುಸುರಿ ಕೆಲಸ ಗೊತ್ತಿರುವ ನಿರ್ದೇಶಕರದ್ದು. ನಾಯಕ, ನಾಯಕಿಯರಾಗುವ ಮುಖಗಳು ಅಸಂಖ್ಯ. ಸಂಗೀತ ನಿರ್ದೇಶಕರ ಫಸಲೂ ಚೆನ್ನಾಗೇ ಇದೆ. ಅಂಥಾದರಲ್ಲಿ ಹೊಸಬರೆಲ್ಲಾ ಅಡ್ಡಕಸುಬಿಗಳು ಅನ್ನುವ ಸಿಂಗ್ ಬಾಬು ಜನರಲೈಸ್ಡ್ ಮಾತು, ಐದೇ ಜನ ನಿರ್ದೇಶಕರು ಎನ್ನುವ ನಾಗಶೇಖರನ ಅಧಿಕ ಪ್ರಸಂಗಿತನ ಎರಡೂ ಹುಂಬತನದ ಪರಾಕಾಷ್ಠೆ.

ನಿರ್ದೇಶಕನ ಯೋಚನೆ ಕ್ರಿಯೇಟಿವಿಟಿ ಕುರಿತೇ ಇರಬೇಕು. ಆ ಕಾರಣಕ್ಕೆ ಸೂರಿ, ಯೋಗರಾಜ್ ಭಟ್ಟರ ನಡುವೆ ಜಗಳವಾದರೆ ಸಂತೋಷ. ಆದರೆ, ಹಣದ ಕಾರಣಕ್ಕೆ ಆಗುತ್ತದಲ್ಲ ಅದು ದುರಂತ. ತಾನೊಬ್ಬನೇ ಸ್ಟಾರ್ ಅನ್ನುವಂತೆ ನಗುತ್ತಿದ್ದ ಗಣೇಶ ಏನಾಗುತ್ತಿದ್ದಾನೆ, ನೋಡಿ. ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು ಅನ್ನೋ ಮಾತನ್ನು ಇವರಿಗೆ ಯಾರಾದರೂ ಮನದಟ್ಟು ಮಾಡಿಸಬೇಕಲ್ಲ.
ಪೂರಕ ಓದಿಗೆ


Click it and Unblock the Notifications











