Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಗೇಂದ್ರ ಅರಸ್ ಅವರ ಯಾರೇ ನೀ ದೇವತೆ
ಶ್ರೀಮಾತಾ ಅನ್ನಪೂರ್ಣೇಶ್ವರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಟಿ.ಚಂದ್ರಕಲಾಬೆಟ್ಟಸ್ವಾಮಿ ಅವರು ನಿರ್ಮಿಸುತ್ತಿರುವ 'ಯಾರೇ ನೀ ದೇವತೆ' ಚಿತ್ರಕ್ಕೆ ನಗರದ ಅರುಣ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಮುಕ್ತಾಯವಾಗಿದೆ.
ಖ್ಯಾತ
ಸಂಕಲನಕಾರ
ಎಸ್.ಕೆ.ನಾಗೇಂದ್ರ
ಅರಸ್
ಈ
ಚಿತ್ರದ
ನಿರ್ದೇಶಕರು.
ಇವರೇ
ಚಿತ್ರಕ್ಕೆ
ಕಥೆ,
ಚಿತ್ರಕಥೆ
ಬರೆದಿದ್ದು,
ಸಂಕಲನ
ಕಾರ್ಯದ
ನಿರ್ವಹಣೆಯೊಂದಿಗೆ
ನಿರ್ದೇಶನವನ್ನು
ಮಾಡುತ್ತಿದ್ದಾರೆ.
ಬೆಂಗಳೂರು,
ರಾಮನಗರ,
ಕಾಸರಗೋಡು
ಮುಂತಾದಕಡೆ
ಚಿತ್ರಕ್ಕೆ
35ದಿನಗಳ
ಚಿತ್ರೀಕರಣ
ಮುಕ್ತಾಯವಾಗಿದೆ.
ವೆಂಕಟ್
ನಾರಾಯಣ್
ಅವರ
ಸಂಗೀತ
ನಿರ್ದೇಶನದಲ್ಲಿ
ಐದು
ಹಾಡುಗಳು
ಉತ್ತಮವಾಗಿ
ಮೂಡಿಬಂದಿದೆ
ಎಂದು
ನಿರ್ಮಾಪಕರು
ತಿಳಿಸಿದ್ದಾರೆ.
ಕುಮಾರ್ ಈ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. 'ಯಾರೇ ನೀ ದೇವತೆ' ಚಿತ್ರದ ನಾಯಕಿಯಾಗಿ ಸಂಗೀತಾ ನಟಿಸಿದ್ದಾರೆ. ಎಸ್.ಕೆ.ನಾಗೇಂದ್ರ ಅರಸ್, ಗಿರಿದಿನೇಶ್, ಧರ್ಮ, ಮೋಹನ್ ಜುನೇಜಾ, ಮಳವಳ್ಳಿ ಸಾಯಿಕೃಷ್ಣ ಮುಂತಾದ ಕಲಾವಿದರ ತಾರಾಬಳಗ ಈ ಚಿತ್ರಕ್ಕಿದೆ.
ಚಂದ್ರು ಬೆಳವಂಗಲ ಅವರ ಛಾಯಾಗ್ರಹಣವಿರುವ ಚಿತ್ರಕ್ಕೆ ವೆಂಕಟ್-ನಾರಾಯಣ್ ಅವರ ಸಂಗೀತವಿದೆ. ಕೌರವ ವೆಂಕಟೇಶ್ ಸಾಹಸ, ಹರೀಶ್ ಶೃಂಗ-ಗಿರೀಶ್ ಸಂಭಾಷಣೆ, ತಂಗಾಳಿ ನಾಗರಾಜ್, ಸಂತೋಷ್ ಗೀತರಚನೆ ಹಾಗೂ ರಾಜು ಅವರ ನಿರ್ಮಾಣ ನಿರ್ವಹಣೆ 'ಯಾರೇ ನೀ ದೇವತೆ'ಗಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)