Don't Miss!
- News 'ಚೊಂಬು' ವಾಗ್ದಾದ: ಕಾವೇರಿ ನೀರು ಹರಿಸಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟಿದ್ದು ನೀವು: ಬಿಜೆಪಿ ತಿರುಗೇಟು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶೃಂಗಾರಕಾವ್ಯ' ನಟ ರಘುವೀರ್ ವೇಶ್ಯಾಗೃಹದಲ್ಲಿ ಸೆರೆ
ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಫೈವ್ ಲೈಟ್ ವೃತ್ತದ ಬಳಿ ಇರುವ ಅಭಿಷೇಕ್ ಲಾಡ್ಜ್ ನಲ್ಲಿ ನಟ ರಘುವೀರ್ ಸೇರಿದಂತೆ ಅವರ ಸ್ನೇಹಿತರು ಉಳಿದುಕೊಂಡಿದ್ದರು. ಮದಿರೆ ನಶೆ, ಮಾನಿನಿಯರ ಸಂಘದಲ್ಲಿ ಮೈಮರೆತ್ತಿದ್ದ ಈ ಗುಂಪು ಒಮ್ಮೆಗೆ ಪೊಲೀಸರನ್ನು ಕಂಡು ಬೆಚ್ಚು ಬಿದ್ದಿದೆ. ರಘುವೀರ್ ಇಂದು ಸಂಜೆವರೆಗೂ ನ್ಯಾಯಾಂಗ ಬಂಧನದಲ್ಲಿರಿಸಲಾಗುವುದು ಎಂದು ಇನ್ಸ್ ಪೆಕ್ಟರ್ ರಾಜಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ವೇಶ್ಯಾವೃತ್ತಿಯಲ್ಲಿ ತೊಡಗಿರುವ ಪೂರ್ಣಿಯಾ, ಗೀತಪ್ರಿಯ ಅವರನ್ನು ಹಣಕೊಟ್ಟು ಮೈಸೂರಿಗೆ ಕರೆಸಿಕೊಳ್ಳಲಾಗಿತ್ತು. ಕಳೆದ ರಾತ್ರಿ ಕುಡಿಯಲು ಶುರು ಮಾಡಿದ ರಘುವೀರ್ ಬೆಳಗ್ಗೆವರೆಗೂ ಕುಡಿತ ಮುಂದುವರೆಸಿದ್ದಾರೆ. ಪೊಲೀಸರು ಬಂದು ಬಂಧಿಸಿದರೂ ಅದರ ಅರಿವು ಅವರಿಗಿರಲ್ಲ. ರಘುವೀರ್ ಅವರ ಸ್ನೇಹಿತ ಶಂಕರ್, ಕಾರು ಡ್ರೈವರ್ ಅನ್ನು ಸೆರೆ ಹಿಡಿಯಲಾಗಿದೆ ಎಂದು ಇನ್ಸ್ ಪೆಕ್ಟರ್ ರಾಜಣ್ಣ ಹೇಳಿದರು.
ಚೈತ್ರದ ಪ್ರೇಮಾಂಜಲಿ, ಶೃಂಗಾರ ಕಾವ್ಯ ಮುಂತಾದ ಚಿತ್ರಗಳ ನಂತರ ಹಲವು ವರ್ಷಗಳ ಕಾಲ ರಘುವೀರ್ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಆದರೆ, ಇತ್ತೀಚೆಗೆ ಮತ್ತೆ ಬಣ್ಣ ಹಚ್ಚಿ, ಉಯ್ಯಾಲೆ ಎಂಬ ಚಿತ್ರದಲ್ಲಿ ನಟಿಸಿದ್ದರು. ಆದರೆ, ಸಾಂಸಾರಿಕ ತೊಂದರೆಯಿಂದಾಗಿ ಕೆಲ ವರ್ಷಗಳಿಂದ ಮದ್ಯ ವ್ಯಸನಿಯಾಗಿದ್ದ ರಘುವೀರ್, ಲೈಂಗಿಕತೆಗಾಗಿ ವೇಶ್ಯಾವೃತ್ತಿಯಲ್ಲಿರುವ ಯುವತಿಯರ ಹಿಂದೆ ಬಿದ್ದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.[ರಘುವೀರ್]