Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಮ್ಮ ಧರ್ಮ ಏನಿದ್ದರೂ ಸಿನಿಮಾಟೊಗ್ರಫಿ:ಆರ್ಎನ್ ಕೆ ಪ್ರಸಾದ್
ಸಂಘದ ಸ್ಥಾಪಕ-ಅಧ್ಯಕ್ಷರಾದ ದಿ. ಡಿ.ವಿ. ರಾಜಾರಾಂ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದಆರ್.ಎನ್.ಕೆ.ಪ್ರಸಾದ್ ಅವರು, ಚಿತ್ರರಂಗದಲ್ಲಿನ ತಮ್ಮ ಆರಂಭದ ದಿನಗಳ ಅನುಭವಗಳನ್ನು ಯುವಪೀಳಿಗೆಯೊಂದಿಗೆ ಮುಕ್ತವಾಗಿ ಹಂಚಿಕೊಂಡರು. ಅಂದು ತಾವು ಅನುಭವಿಸಿದ ಕಷ್ಟನಷ್ಟಗಳನ್ನು ನೆನಪಿಸಿಕೊಳ್ಳುತ್ತಾ, "ಹಣ, ಹೆಸರು, ಕೀರ್ತಿ,ಯಶಸ್ಸು, ಇದಾವುದರೆಡೆಗೂ ಗಮನ ನೀಡದೆ, ಛಾಯಾಗ್ರಾಹಕರಾಗಿ ನಿಮ್ಮ ಕಾರ್ಯವನ್ನು ನಿಷ್ಠೆಯಿಂದ ನೆರವೇರಿಸಿ. ನಿಮ್ಮ ಧರ್ಮ ಏನಿದ್ದರೂ ಸಿನಿಮಾಟೊಗ್ರಫಿ ಮಾತ್ರ" ಎಂದು ಯುವಪೀಳಿಗೆಗೆ ಹಿತವಚನ ನೀಡಿದರು.
DEBRIE, NEWALL, MITCHELL ಮುಂತಾದ ಹಳೆಯ ತಲೆಮಾರಿನ ಕ್ಯಾಮೆರಾ ಯಂತ್ರೋಪಕರಣಗಳ ಹೆಸರುಗಳು ಸಭೆಯಲ್ಲಿ ಸಂಚರಿಸಿ, ಅದೃಶ್ಯ ದೇವದೂತರಂತೆ ಇಡೀ ವಾತಾವರಣವನ್ನು ಉತ್ತೇಜಿಸಿ, ಕನ್ನಡದ ಖ್ಯಾತಛಾಯಾಗ್ರಾಹಕರಾದ 'ಮುಂಗಾರು ಮಳೆ" ಖ್ಯಾತಿಯ ಕೃಷ್ಣ, 'ದುನಿಯಾ" ಖ್ಯಾತಿಯ ಸತ್ಯ ಹೆಗಡೆ, ಪ್ರಸಕ್ತ ಸಾಲಿನ ರಾಜ್ಯಪ್ರಶಸ್ತಿವಿಜೇತ ಛಾಯಾಗ್ರಾಹಕರಾದ ಕೆ.ಎಂ. ವಿಷ್ಣುವರ್ಧನ್ ಆದಿಯಾಗಿ ಅಲ್ಲಿ ನೆರೆದಿದ್ದ ಎಲ್ಲರನ್ನೂ ಹರಸುತ್ತಿರುವಂತೆ ಭಾಸವಾಯಿತು.
ಇಂತಹದೊಂದು ಅತ್ಯಂತ ಆತ್ಮೀಯವಾದ ಸಮಾರಂಭವನ್ನು ರೂಪಿಸಿದ ಹಿರಿಯ ತಲೆಮಾರಿನ ಛಾಯಾಗ್ರಾಹಕ ಬಿ.ಎಸ್. ಬಸವರಾಜ್ ಹಾಗೂ ವಿ. ಆರ್. ಚಂದ್ರಶೇಖರ್ ಅವರು ಆರ್.ಎನ್.ಕೆ.ಪ್ರಸಾದ್ ಅವರ ಸಾಧನೆಯ ಹಿರಿಮೆಯನ್ನು ಸಭೆಗೆ ವಿಸ್ತಾರಗೊಳಿಸಿದರು. (ದಟ್ಸ್ಕನ್ನಡ ಸಿನಿವಾರ್ತೆ)