Just In
Don't Miss!
- News
ನಮ್ಮನ್ನು ಬಿಟ್ಟು ಓಡುತ್ತಿವೆ 500 ನಕ್ಷತ್ರಗಳು, ವಿಜ್ಞಾನಿಗಳಿಂದ ರಹಸ್ಯ ರಿವೀಲ್..!
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಮ್ಮ ಧರ್ಮ ಏನಿದ್ದರೂ ಸಿನಿಮಾಟೊಗ್ರಫಿ:ಆರ್ಎನ್ ಕೆ ಪ್ರಸಾದ್
ಸಂಘದ ಸ್ಥಾಪಕ-ಅಧ್ಯಕ್ಷರಾದ ದಿ. ಡಿ.ವಿ. ರಾಜಾರಾಂ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದಆರ್.ಎನ್.ಕೆ.ಪ್ರಸಾದ್ ಅವರು, ಚಿತ್ರರಂಗದಲ್ಲಿನ ತಮ್ಮ ಆರಂಭದ ದಿನಗಳ ಅನುಭವಗಳನ್ನು ಯುವಪೀಳಿಗೆಯೊಂದಿಗೆ ಮುಕ್ತವಾಗಿ ಹಂಚಿಕೊಂಡರು. ಅಂದು ತಾವು ಅನುಭವಿಸಿದ ಕಷ್ಟನಷ್ಟಗಳನ್ನು ನೆನಪಿಸಿಕೊಳ್ಳುತ್ತಾ, "ಹಣ, ಹೆಸರು, ಕೀರ್ತಿ,ಯಶಸ್ಸು, ಇದಾವುದರೆಡೆಗೂ ಗಮನ ನೀಡದೆ, ಛಾಯಾಗ್ರಾಹಕರಾಗಿ ನಿಮ್ಮ ಕಾರ್ಯವನ್ನು ನಿಷ್ಠೆಯಿಂದ ನೆರವೇರಿಸಿ. ನಿಮ್ಮ ಧರ್ಮ ಏನಿದ್ದರೂ ಸಿನಿಮಾಟೊಗ್ರಫಿ ಮಾತ್ರ" ಎಂದು ಯುವಪೀಳಿಗೆಗೆ ಹಿತವಚನ ನೀಡಿದರು.
DEBRIE, NEWALL, MITCHELL ಮುಂತಾದ ಹಳೆಯ ತಲೆಮಾರಿನ ಕ್ಯಾಮೆರಾ ಯಂತ್ರೋಪಕರಣಗಳ ಹೆಸರುಗಳು ಸಭೆಯಲ್ಲಿ ಸಂಚರಿಸಿ, ಅದೃಶ್ಯ ದೇವದೂತರಂತೆ ಇಡೀ ವಾತಾವರಣವನ್ನು ಉತ್ತೇಜಿಸಿ, ಕನ್ನಡದ ಖ್ಯಾತಛಾಯಾಗ್ರಾಹಕರಾದ 'ಮುಂಗಾರು ಮಳೆ" ಖ್ಯಾತಿಯ ಕೃಷ್ಣ, 'ದುನಿಯಾ" ಖ್ಯಾತಿಯ ಸತ್ಯ ಹೆಗಡೆ, ಪ್ರಸಕ್ತ ಸಾಲಿನ ರಾಜ್ಯಪ್ರಶಸ್ತಿವಿಜೇತ ಛಾಯಾಗ್ರಾಹಕರಾದ ಕೆ.ಎಂ. ವಿಷ್ಣುವರ್ಧನ್ ಆದಿಯಾಗಿ ಅಲ್ಲಿ ನೆರೆದಿದ್ದ ಎಲ್ಲರನ್ನೂ ಹರಸುತ್ತಿರುವಂತೆ ಭಾಸವಾಯಿತು.
ಇಂತಹದೊಂದು ಅತ್ಯಂತ ಆತ್ಮೀಯವಾದ ಸಮಾರಂಭವನ್ನು ರೂಪಿಸಿದ ಹಿರಿಯ ತಲೆಮಾರಿನ ಛಾಯಾಗ್ರಾಹಕ ಬಿ.ಎಸ್. ಬಸವರಾಜ್ ಹಾಗೂ ವಿ. ಆರ್. ಚಂದ್ರಶೇಖರ್ ಅವರು ಆರ್.ಎನ್.ಕೆ.ಪ್ರಸಾದ್ ಅವರ ಸಾಧನೆಯ ಹಿರಿಮೆಯನ್ನು ಸಭೆಗೆ ವಿಸ್ತಾರಗೊಳಿಸಿದರು. (ದಟ್ಸ್ಕನ್ನಡ ಸಿನಿವಾರ್ತೆ)