Don't Miss!
- News Tulsi Gowda: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಆರೋಗ್ಯದಲ್ಲಿ ಏರುಪೇರು: ಐಸಿಯುಗೆ ದಾಖಲು
- Finance ಎವರೆಸ್ಟ್ ಮಾತ್ರವಲ್ಲ ಎಂಡಿಎಚ್ನ ಉತ್ಪನ್ನದಲ್ಲೂ ಕೀಟನಾಟಕ ಪತ್ತೆ
- Sports ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಕ್ರಮಾಂಕ ನೀಡಿದ ಆರೋನ್ ಫಿಂಚ್
- Lifestyle ರಾಜ್ಯದಲ್ಲಿ ಮುಂದಿನ 1 ವಾರ ಹವಾಮಾನ ಹೇಗಿರಲಿದೆ? ಎಲ್ಲೆಲ್ಲಿ ಮಳೆಯಾಗಲಿದೆ?
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Automobiles ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಮಿಡಿ ಗಣೇಶನ ರೇಟು ಕಾಮಿಡಿ
ಇದು ದಿಟವಾ ? ಅಂಡು ಬಡಿದುಕೊಂಡು ನಗುತ್ತಿದೆ ಗಾಂಧೀನಗರ. ಎರಡು ಕೋಟಿ ಆಕಡೆ ಇರಲಿ, ಅದರ ಅರ್ಧದಷ್ಟೂ ಕೊಡುವುದಕ್ಕೆ ಹೆದರುತ್ತಿದ್ದಾರೆ ನಿರ್ಮಾಪಕರು. ಏಕೆಂದರೆ, ಈ ವರ್ಷ ಬಿಡುಗಡೆ ಆಗಿರುವ ಗಣೇಶನ ನಾಲಕ್ಕು ಚಿತ್ರಗಳ ಪೈಕಿ ಗಾಳಿಪಟ ಒಂದೇ ಗೆದ್ದಿದ್ದು. ಅರಮನೆ ಸುಮಾರಾಗಿ ಓಡಿದರೆ, ಬೊಂಬಾಟ್ ಹಾಗೂ ಸಂಗಮ ಚಿತ್ರ ಅಡ್ಡಡ್ಡ ಉದ್ದುದ್ದ ಮಲಗಿವೆ. ಪ್ರತಿಯೊಂದಕ್ಕೂ ಅಷ್ಟೊಂದು ಲೆಕ್ಕಾಚಾರ ಹಾಕುವ ಗಾಂಧೀನಗರದವರು, ಅಷ್ಟೊಂದು ಕೊಡಲು ಸಾಧ್ಯವಾ? ಎಂದು ಪ್ರಶ್ನಿಸುತ್ತಾರೆ ಗಣೇಶ್ ಚಿತ್ರದ ಒಬ್ಬ ನಿರ್ಮಾಪಕರು.
ಗಣೇಶ್ ರೇಟು ಅಷ್ಟಿದಿಯೋ, ಇಲ್ಲವೋ ಸುದ್ದಿಯಂತೂ ಎಲ್ಲಿಂದಲೋ ಹುಟ್ಟಿಕೊಂಡು ಗಾಂಧೀನಗರವೆಲ್ಲಾ ಸುತ್ತುತ್ತಿದೆ. ಅದನ್ನೇ ದೊಡ್ಡ ಸುದ್ದಿಯೆಂದು ತಿಳಿದು ಪತ್ರಿಕೆಯೊಂದು , ಸುದ್ದಿ ಪ್ರಕಟಿಸುವುದರ ಜತೆಗೆ, ಗಣೇಶ್ ಅಷ್ಟು ಸಂಭಾವನೆ ಹೇರುವುದು ಸರಿಯೋ, ತಪ್ಪೋ ಎಂದು ಡಿಬೇಟು ಪ್ರಾರಂಭಿಸಿದೆ. ಕೆಲಸವಿಲ್ಲದ ಬಡಗಿ ಏನೋ ಮಾಡಿದ್ನಂತೆ ಎನ್ನುವಂತೆ ಆದಿತ್ಯ ಮುಂತಾದ ನಾಯಕರೆಲ್ಲ ಸರಿ, ತಪ್ಪುಗಳ ನಿಷ್ಕರ್ಷೆಯಲ್ಲಿದ್ದಾರೆ. ಗಣೇಶ್ ಮಾತ್ರ ತಮ್ಮ ಪಾಡಿಗೆ ಕೆಲಸ ಮುಂದುವರೆಸಿದ್ದಾರೆ.
( ಸ್ನೇಹಸೇತು : ಹಾಯ್ ಬೆಂಗಳೂರು)