Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಪಾಳಮೋಕ್ಷ ಮಾಡಿಸಿಕೊಂಡ ಪೇದೆಯ ಪೇಚಾಟ
ನಟಿ ಮೈತ್ರೇಯಿ ಪ್ರಕರಣವನ್ನು ರಾಜ್ಯದ 24/7 ನ್ಯೂಸ್ ಚಾನಲ್ಗಳು ಹಾಕಿ ಚಚ್ಚುದ್ದೇ ತಡ, ದಿನ ಬೆಳಗಾಗುವುದರಲ್ಲಿ ಪೇದೆ ಶಿವಕುಮಾರ್ ಫೇಮಸ್ ಆಗಿಬಿಟ್ಟಿದ್ದರು. ಮನೆಯಲ್ಲೇ ಕೂತು ಲೈವ್ನಲ್ಲಿ ನೋಡಿದ ಈತನ ಹೆಂಡತಿ, ಮಕ್ಕಳು, "ನಟಿ ಕೈಲಿ ನೀವು ಹೊಡೆಸಿಕೊಂಡರಂತೆ ಹೌದಾ?" ಎಂದು ಕೇಳುತ್ತಿದ್ದಾರಂತೆ.
ಒಟ್ಟಿನಲ್ಲಿ ಮಹಿಳೆಯೊಬ್ಬರ ಕೈಲಿ ಏಟು ತಿಂದ ಎಂಬ ಮಾತುಗಳು ಕಿವಿಗೆ ಬೀಳುತ್ತಿವೆಯಂತೆ. ಇದರಿಂದ ಆತ ತೀವ್ರ ಮುಖಭಂಗ ಅನುಭವಿಸುವಂತಾಗಿದ್ದು, ಮಾನಸಿಕ ನೆಮ್ಮದಿಗಾಗಿ ತನಗೆ ಒಂದೆರಡು ದಿನ ರಜೆ ಕೊಡಿ ಎಂದು ಉನ್ನತ ಅಧಿಕಾರಿಗಳಲ್ಲಿ ವಿನಂತಿಸಿಕೊಂಡಿದ್ದಾರಂತೆ. "ನಟಿ ಕೈಲಿ ಹೊಡೆತ ತಿಂದರಂತೆ ಹೌದಾ" ಎಂಬ ಪ್ರಶ್ನೆ ಪದೇ ಪದೇ ಆತನ ಕಿವಿಗೆ ಕಾದಸೀಸ ಸುರಿದಂತಾಗುತ್ತಿದೆಯಂತೆ.
ಅಂದಹಾಗೆ ಎಂ ಶಿವಕುಮಾರ್ ಮೂಲತಃ ಚನ್ನಪಟ್ಟಣ್ಣ ತಾಲೂಕಿನವರು. ಪ್ರತಿನಿತ್ಯ ಈತನ ಮೊಬೈಲಿಗೆ 300 ಕರೆಗಳು ಬರುತ್ತಿವೆಯಂತೆ. ಎಲ್ಲರದೂ ಒಂದೇ ಪ್ರಶ್ನೆ, "ಸಾರ್ ಆ ಯಮ್ಮಾ ಯಾರೋ ನಿಮ್ಮನ್ನು ಹೊಡೆದರಂತೆ ಹೌದಾ?". ಶಿವಕುಮಾರ್ಗೆ ಬರುತ್ತಿರುವ ಕಿರಿಕಿರಿ ಕರೆಗಳು ಅವರನ್ನು ಪರಪರ ಎಂದು ಕೆರೆದುಕೊಳ್ಳುವಂತೆ ಮಾಡಿವೆ. (ದಟ್ಸ್ಕನ್ನಡ ಸಿನಿವಾರ್ತೆ)