twitter
    For Quick Alerts
    ALLOW NOTIFICATIONS  
    For Daily Alerts

    ಕಪಾಳಮೋಕ್ಷ ಮಾಡಿಸಿಕೊಂಡ ಪೇದೆಯ ಪೇಚಾಟ

    By Rajendra
    |

    Traffic police Shivkumar
    ನಿಜಕ್ಕೂ ಈ ಪೊಲೀಸ್ ಪೇದೆಯ ಪೇಚಾಟ ಆ ಶತ್ರುವಿಗೂ ಬೇಡ! ನಟಿ ಮೈತ್ರೇಯಿ ಕೈಯಿಂದ ಕಪಾಳಮೋಕ್ಷ ಮಾಡಿಸಿಕೊಂಡ ಟ್ರಾಫಿಕ್ ಕಾನಿಸ್ಟೇಬಲ್ ಶಿವಕುಮಾರ್ ಈಗ ಸಂಕೋಚದ ಮುದ್ದೆಯಾಗಿದ್ದಾರೆ. ಕಂಡಕಂಡವರೆಲ್ಲಾ ಅವರನ್ನು ಹೌದಾ ಸಾರ್ ನಿಮ್ಮನ್ನು ಯಾರೋ ನಟಿ ಹೊಡೆದರಂತೆ ಎಂದು ಕೇಳುತ್ತಿದ್ದಾರಂತೆ.

    ನಟಿ ಮೈತ್ರೇಯಿ ಪ್ರಕರಣವನ್ನು ರಾಜ್ಯದ 24/7 ನ್ಯೂಸ್ ಚಾನಲ್‌ಗಳು ಹಾಕಿ ಚಚ್ಚುದ್ದೇ ತಡ, ದಿನ ಬೆಳಗಾಗುವುದರಲ್ಲಿ ಪೇದೆ ಶಿವಕುಮಾರ್ ಫೇಮಸ್ ಆಗಿಬಿಟ್ಟಿದ್ದರು. ಮನೆಯಲ್ಲೇ ಕೂತು ಲೈವ್‌ನಲ್ಲಿ ನೋಡಿದ ಈತನ ಹೆಂಡತಿ, ಮಕ್ಕಳು, "ನಟಿ ಕೈಲಿ ನೀವು ಹೊಡೆಸಿಕೊಂಡರಂತೆ ಹೌದಾ?" ಎಂದು ಕೇಳುತ್ತಿದ್ದಾರಂತೆ.

    ಒಟ್ಟಿನಲ್ಲಿ ಮಹಿಳೆಯೊಬ್ಬರ ಕೈಲಿ ಏಟು ತಿಂದ ಎಂಬ ಮಾತುಗಳು ಕಿವಿಗೆ ಬೀಳುತ್ತಿವೆಯಂತೆ. ಇದರಿಂದ ಆತ ತೀವ್ರ ಮುಖಭಂಗ ಅನುಭವಿಸುವಂತಾಗಿದ್ದು, ಮಾನಸಿಕ ನೆಮ್ಮದಿಗಾಗಿ ತನಗೆ ಒಂದೆರಡು ದಿನ ರಜೆ ಕೊಡಿ ಎಂದು ಉನ್ನತ ಅಧಿಕಾರಿಗಳಲ್ಲಿ ವಿನಂತಿಸಿಕೊಂಡಿದ್ದಾರಂತೆ. "ನಟಿ ಕೈಲಿ ಹೊಡೆತ ತಿಂದರಂತೆ ಹೌದಾ" ಎಂಬ ಪ್ರಶ್ನೆ ಪದೇ ಪದೇ ಆತನ ಕಿವಿಗೆ ಕಾದಸೀಸ ಸುರಿದಂತಾಗುತ್ತಿದೆಯಂತೆ.

    ಅಂದಹಾಗೆ ಎಂ ಶಿವಕುಮಾರ್ ಮೂಲತಃ ಚನ್ನಪಟ್ಟಣ್ಣ ತಾಲೂಕಿನವರು. ಪ್ರತಿನಿತ್ಯ ಈತನ ಮೊಬೈಲಿಗೆ 300 ಕರೆಗಳು ಬರುತ್ತಿವೆಯಂತೆ. ಎಲ್ಲರದೂ ಒಂದೇ ಪ್ರಶ್ನೆ, "ಸಾರ್ ಆ ಯಮ್ಮಾ ಯಾರೋ ನಿಮ್ಮನ್ನು ಹೊಡೆದರಂತೆ ಹೌದಾ?". ಶಿವಕುಮಾರ್‌ಗೆ ಬರುತ್ತಿರುವ ಕಿರಿಕಿರಿ ಕರೆಗಳು ಅವರನ್ನು ಪರಪರ ಎಂದು ಕೆರೆದುಕೊಳ್ಳುವಂತೆ ಮಾಡಿವೆ. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    The traffic cop who was allegedly assaulted by Kannada television actress Maitreyi, claims to have slipped into depression after the incident and wants to be granted leave. The incident was telecast across television news channels and has caused a flutter among Shivkumar's family members, thereby adding to his embarrassment.
    Thursday, May 26, 2011, 18:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X