Don't Miss!
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅ.30ರಿಂದ ಸಮುದಾಯ ಚಿತ್ರೋತ್ಸವ
ಸಮುದಾಯ ಚಿತ್ರೋತ್ಸವ 2009 ಸಮಾಜಮುಖಿ ಚಿತ್ರಗಳ ಪ್ರದರ್ಶನ ಅಕ್ಟೋಬರ್ 30ರಿಂದ ನವೆಂಬರ್ 5ರವರೆಗೂ ನಡೆಯಲಿದೆ. ಕಲಾಚಿತ್ರಗಳ ಪ್ರದರ್ಶನಕ್ಕೆ ಬೆಂಗಳೂರಿನ ಕೈಲಾಷ್ ಚಿತ್ರಮಂದಿರ ಸಜ್ಜಾಗಿದೆ. ಈ ಚಲನಚಿತ್ರ ಜಾತ್ರೆಯಲ್ಲಿ ಅಪೂರ್ವ ಕನ್ನಡ ಚಲನಚಿತ್ರಗಳನ್ನು ವೀಕ್ಷಿಸಬಹುದು.
ಈ ನಿಟ್ಟಿನಲ್ಲಿ ಕೆ. ಶಿವರುದ್ರಯ್ಯನವರ 'ದಾಟು', ಅಭಯಸಿಂಹರ 'ಗುಬ್ಬಚ್ಚಿಗಳು', ಉಮಾಶಂಕರ್ ಸ್ವಾಮಿಯವರ 'ಬನದ ನೆರಳು', ಬಿ. ಸುರೇಶ ಅವರ 'ಅರ್ಥ' ಈ ನಾಲ್ಕು ಚಿತ್ರಗಳ ನಿರ್ಮಾಪಕರನ್ನು ಸಪರ್ಕಿಸಿ ಅವರ ಸಹಕಾರದೊಂದಿಗೆ ಪ್ರಥಮ ಬಾರಿಗೆ ನಗರದ ಕೈಲಾಷ್ ಚಿತ್ರಮಂದಿರದಲ್ಲಿ ಅಕ್ಟೋಬರ್ 30ರಿ೦ದ 7 ದಿನಗಳ ಸಮುದಾಯ ಚಿತ್ರೋತ್ಸವ 2009 ಆಯೋಜಿಸಲಾಗಿದೆ.
ಸಮುದಾಯ ಚಲನಚಿತ್ರೋತ್ಸವಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಆಗಮಿಸಲಿದ್ದಾರೆ. 70ರ ದಶಕದಲ್ಲಿ ಸಾಹಿತಿಗಳು, ರಂಗಕಲಾವಿದರು, ಚಿತ್ರಕಲಾವಿದರು ಒಂದೆಡೆ ಸೇರಿ ಹುಟ್ಟಿಕೊಂಡ ಸಂಸ್ಥೆಯೇ ಸಮುದಾಯ.
ಕಳೆದ 34 ವರ್ಷಗಳಿಂದ ನಾಡಿನಾದ್ಯಂತ ಬೀದಿ ನಾಟಕ ಮತ್ತು ರಂಗಚಳುವಳಿಯ ಮೂಲಕ ಮನೆಮಾತಾಗಿದೆ. ಸಮುದಾಯ ಸಮಾಜಮುಖಿ ಚಿತ್ರಗಳನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಚಿತ್ರ ಸಮುದಾಯ ಎಂಬ ಉಪ ಸಮಿತಿ ಹುಟ್ಟಿಕೊಂಡಿತು. ಈ ಮೂಲಕ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಜನರು ಸದಭಿರುಚಿಯ ಚಿತ್ರಗಳನ್ನು ನೋಡುವ ಹವ್ಯಾಸ ಬೆಳೆಸುವ ದಿಕ್ಕಿನಲ್ಲಿ ಸಮುದಾಯ ಪ್ರಯತ್ನ ಸಾಗಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ರವೀಂದ್ರನಾಥ
ಸಿರಿವರ-
98441
09706
ವೆಂಕಟೇಶ್
ಪ್ರಸಾದ್-
99001
82400
ಪ್ರದರ್ಶನಗೊಳ್ಳಲಿರುವ ಚಿತ್ರಗಳ ದಿನಾಂಕ ಮತ್ತು ಸಮಯ
(ದಟ್ಸ್ ಕನ್ನಡ ಚಿತ್ರವಾರ್ತೆ)