ಪ್ರಿಯಾಂಕಳಿಗೆ ಮಾತು ಬೆಳ್ಳಿ ಮೌನ ಬಂಗಾರ!

ಹೊಸ ಹುಡುಗಿ. ಕ್ಯಾಮೆರಾ ಪ್ರಭೆಯಲ್ಲಿ, ಮೈಕ್ ಎದುರಲ್ಲಿ ಮಾತನಾಡುವುದು ಕಷ್ಟ. ಸುದ್ದಿಗೋಷ್ಠಿ ನಂತರವಾದರೂ ಮನಸ್ಸು ಬಿಚ್ಚಲಿ ಎಂದು ಕೆಲವು ಪತ್ರಕರ್ತರು ಪ್ರಿಯಾಂಕಳನ್ನು ಮಾತಿಗೆ ಕರೆದರು. ಟೀವಿ ಬೆಳಕಿಗೆ ತನ್ನನ್ನು ಒಡ್ಡಿಕೊಂಡಿದ್ದ ಪ್ರಿಯಾಂಕ ನಿಧಾನವಾಗಿ ಪತ್ರಕರ್ತರ ಎದುರು ಕೂತಳು.
ಯಜ್ಞ ಚಿತ್ರದಲ್ಲಿ ಮಾಡ್ ಹುಡುಗಿಯ ಪಾತ್ರ. ಗಂಗಾ ಎನ್ನುವ ತೆಲುಗು ಸಿನಿಮಾದಲ್ಲಿ ನಟಿಸಿದ್ದೇನೆ. ತಮಿಳು ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದೇನೆ. ಹೊಸ ಕನ್ನಡ ಅವಕಾಶಗಳು ಬರುತ್ತಿವೆ. ಆದರೆ, ತಮಿಳು ಚಿತ್ರದ ಕಾರಣ ಕನ್ನಡದಲ್ಲಿ ಹೊಸ ಚಿತ್ರವನ್ನು ಒಪ್ಪಿಕೊಳ್ಳಲಾಗುತ್ತಿಲ್ಲ ಎಂದರು ಪ್ರಿಯಾಂಕ. ಮುಂದೆ? ಪ್ರಿಯಾಂಕ ಕಣ್ಣುಗಳು ಕಿಟಕಿಯತ್ತ. ಆಕೆಯ ಬೆರಳುಗಳು ಕೈಚೀಲದಲ್ಲಿ ಏನನ್ನೋ ಹುಡುಕುತ್ತಿದ್ದವು. ಮನಸ್ಸು? ಚೆನ್ನೈನ ಫ್ಲೈಟ್ ಹತ್ತಿತ್ತೇನೋ?
kannada movies ಜಯಂತಿ jayanthi director krishna brahma ಕನ್ನಡಸಿನಿಮಾ ಯಜ್ಞ ಪ್ರಿಯಾಂಕ ನಿರ್ದೇಶಕಕೃಷ್ಣಬ್ರಹ್ಮ ಸಂಗೀತಮುರಳಿಕೃಷ್ಣ yagna kannada actress priyanka director murali krishna


Click it and Unblock the Notifications