ಚೈತ್ರದ ಪ್ರೇಮಾಂಜಲಿ ರಘುವೀರ್ ಮರಳಿ ಗೂಡಿಗೆ
'ಚೈತ್ರದ ಪ್ರೇಮಾಂಜಲಿ' ಖ್ಯಾತಿಯ ರಘುವೀರ್ ವಾಪಸ್ಸಾಗಿದ್ದಾರೆ.ಕಳೆದ ಎಂಟು ವರ್ಷಗಳಿಂದ ಅವರು ಕನ್ನಡ ಚಿತ್ರರಂಗದಿಂದ ಕಾಣೆಯಾಗಿದ್ದರು. ಈಗ 'ಯಾರಿಗೋಸ್ಕರ ಈ ಪ್ರೀತಿ' ಎಂಬ ಚಿತ್ರವನ್ನು ಕೈಗೆತ್ತಿಕೊಂಡು ಅವರೇ ನಾಯಕನಾಗಿ ನಟಿಸುತ್ತಿದ್ದಾರೆ.
ಎಸ್.ರಾಜ ಎನ್ನುವವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮೈಸೂರಿನ ರವಿಕುಮಾರ್ ನಿರ್ಮಾಪಕರು. ರಘುವೀರ್ ನಟಿಸಿದ ಮೊದಲ ಚಿತ್ರ ಚೈತ್ರದ ಪ್ರೇಮಾಂಜಲಿ. ಆ ಚಿತ್ರ ಸೆಟ್ಟೇರಿದ ದಿನದಂದೇ ಅಂದರೆ ಏಪ್ರಿಲ್ ನಾಲ್ಕರಂದು 'ಯಾರಿಗೋಸ್ಕರ ಈ ಪ್ರೀತಿ' ಚಿತ್ರವೂ ಸೆಟ್ಟೇರಲಿದೆ.
ಚಿತ್ರದ ತಾರಾಗಣದಲ್ಲಿ ರಾಮಕೃಷ್ಣ, ವಿಜಯಕಾಶಿ, ಶ್ರೀಲಲಿತಾ ಮುಂತಾದವರು ಇದ್ದಾರೆ. ರಾಮ್ ಕುಮಾರ್ ಎಂಬ ಹೊಸಬರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಪಿಕೆಎಚ್ ದಾಸ್ ಛಾಯಾಗ್ರಹಣ ಚಿತ್ರಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಇದನ್ನೂ ಓದಿ
ಗೆಜ್ಜೆ ಹಾಡಿಗೆ ಹೆಜ್ಜೆ ಹಾಕಿದ ಸುಧಾರಾಣಿ, ಅನು
ಈ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಿಲ್ಲ: ಪ್ರೇಮ್
ಇನ್ನು ವೆಬ್ ಸೈಟ್ ನಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳು
More from Filmibeat
kannada movies ಕನ್ನಡಸಿನಿಮಾ ರಘುವೀರ್ ಚೈತ್ರದ ಪ್ರೇಮಾಂಜಲಿ ಯಾರಿಗಾಗಿ ಈ ಪ್ರೀತಿ raghuveer chaitrada premanjali yarigoskara ee preeti


Click it and Unblock the Notifications











