Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ್ 'ಮುಗುಳುನಗೆ'ಗೆ ಟಿಕೆಟ್ ಪಡೆದ 4 ನಟಿಯರು ಇವರೆ!
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ 'ಮುಗುಳುನಗೆ' ಎಂದು ಶೀರ್ಷಿಕೆ ಇಡಲಾಗಿದೆ. ಭಟ್ಟರ ಈ 'ಮುಗುಳುನಗೆ'ಯಲ್ಲಿ ನಾಲ್ಕು ಜನ ನಾಯಕಿಯರಿದ್ದು, ಹಳಬರ ಜತೆ ಹೊಸಬರು ಇರಲಿದ್ದಾರೆ ಎಂಬ ವಿಷ್ಯವನ್ನ ಚಿತ್ರತಂಡ ಹೇಳಿಕೊಂಡಿತ್ತು.[ಗಣೇಶ್-ಭಟ್ಟರ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ !]
ಇದೀಗ, ಈ ಚಿತ್ರದಲ್ಲಿ ಗಣೇಶ್ ಜತೆ ಡುಯೆಟ್ ಹಾಡಲಿರುವ ನಾಲ್ಕು ಜನ ನಾಯಕಿಯರನ್ನ ಆಯ್ಕೆ ಮಾಡಲಾಗಿದೆ. ಯೋಗರಾಜ್ ಭಟ್ಟರು ಮೊದಲೇ ಹೇಳಿದ್ಹಾಗೆ, ಹಳಬರ ಜೊತೆ ಹೊಸಬರನ್ನ ಗಣೇಶ್ 'ಮುಗುಳುನಗೆ'ಯಲ್ಲಿ ಸೇರಿಸಿಕೊಂಡಿದ್ದಾರೆ.
'ಮುಗುಳುನಗೆ'ಯಲ್ಲಿ 4 ಹೀರೋಯಿನ್ಸ್
ಗಣೇಶ್ ಅಭಿನಯಸಲಿರುವ 'ಮುಗುಳುನಗೆ' ಚಿತ್ರದಲ್ಲಿ 4 ನಾಯಕಿಯರಿದ್ದು, ನಾಲ್ಕು ನಟಿಯರನ್ನ ಚಿತ್ರತಂಡ ಆಯ್ಕೆ ಮಾಡಿದೆ.[ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ನಾಯಕಿಯರು ಬೇಕಾಗಿದ್ದಾರೆ?]
'ಮುಗುಳುನಗೆ'ಯಲ್ಲಿ ಅಮೂಲ್ಯ
ಗಣೇಶ್ 'ಮುಗುಳುನಗೆ' ಚಿತ್ರಕ್ಕೆ ಗೋಲ್ಡನ್ ಕ್ವೀನ್ ಅಮೂಲ್ಯ ಪ್ರಮುಖ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.[ಗೋಲ್ಡನ್ ಸ್ಟಾರ್ ಗಣೇಶ್, ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ಚಿತ್ರ]
ಮತ್ತೆ ಒಂದಾದ ಗಣಿ-ಅಮೂಲ್ಯ
ಈಗಾಗಲೇ ಸ್ಯಾಂಡಲ್ ವುಡ್ ನ ಹಿಟ್ ಜೋಡಿ ಎನಿಸಿಕೊಂಡಿರುವ ಅಮೂಲ್ಯ ಹಾಗೂ ಗಣೇಶ್ ತೆರೆಮೇಲೆ ನಾಲ್ಕನೇ ಬಾರಿ ಒಂದಾಗುತ್ತಿದ್ದಾರೆ. ಈ ಹಿಂದೆ 'ಚೆಲುವಿನ ಚಿತ್ತಾರ', 'ಶ್ರಾವಣಿ ಸುಬ್ರಮಣಿ', 'ಖುಷಿ ಖುಷಿಯಾಗಿ' ಚಿತ್ರಗಳಲ್ಲಿ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ನಿಖಿತಾ ನಾರಯಣ್ ಗೆ ಒಲಿದ ಅದೃಷ್ಟ
ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರಕ್ಕೆ ನಿಖಿತಾ ನಾರಯಣ್ ಮತ್ತೊಬ್ಬ ನಾಯಕಿಯಾಗಿದ್ದಾರೆ. ಈ ಹಿಂದೆ 'ಮಡಮಕ್ಕಿ' ಚಿತ್ರದಲ್ಲಿ ಹೀರೋಯಿನ್ ಆಗಿದ್ದ ನಿಖಿತಾ, ಸದ್ಯ 'ಗೋಲ್ ಮಾಲ್' ಬ್ರದರ್ಸ್ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಮಧ್ಯೆ ಗಣೇಶ್ ಚಿತ್ರದಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಕ್ರೇಜಿ ನಟಿ ಆಶಿತಾ
ಇನ್ನೂ 'ಮುಗುಳುನಗೆ' ಚಿತ್ರಕ್ಕೆ ಆಯ್ಕೆಯಾಗಿರುವ ಮತ್ತೊಬ್ಬ ನಾಯಕಿ ಆಶಿತಾ. ಇತ್ತೀಚೆಗಷ್ಟೇ ತೆರೆಕಂಡ 'ಕ್ರೇಜಿಬಾಯ್' ಚಿತ್ರದಲ್ಲಿ ಆಶಿತಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ವಿಶೇಷ ಪಾತ್ರದಲ್ಲಿ 'ಜಾಕಿ ಭಾವನ'
ಇನ್ನೂ ಮೂರು ಜನ ನಾಯಕಿಯರು ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ರೆ, ವಿಶೇಷ ಪಾತ್ರದಲ್ಲಿ ಜಾಕಿ ಭಾವನ ಬಣ್ಣ ಹಚ್ಚಲಿದ್ದಾರಂತೆ. ಈ ಮೂಲಕ, ಯೋಗರಾಜ್ ಭಟ್ ಹಾಗೂ ಗಣೇಶ್ ಜುಗಲ್ ಬಂದಿಯ 'ಮುಗುಳುನಗೆ' ಚಿತ್ರಕ್ಕೆ ನಟಿಯರ ಆಯ್ಕೆ ಅಂತಿಮವಾಗಿದೆ.
ಯಾವಾಗ ಶುರು?
ಅಂದ್ಹಾಗೆ, 'ಮುಗುಳುನಗೆ' ಚಿತ್ರವನ್ನ ಯೋಗರಾಜ್ ಮೂವೀಸ್ ಮತ್ತು ಗೋಲ್ಡನ್ ಮೂವೀಸ್ ಬ್ಯಾನರ್ನಡಿ, ಯೋಗರಾಜ್ ಭಟ್ ಹಾಗೂ ಗಣೇಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದು, ಜಯಂತ್ ಕಾಯ್ಕಿಣಿ ಹಾಗೂ ಭಟ್ ಅವರು ಸಾಹಿತ್ಯ ಬರೆಯಲಿದ್ದಾರೆ. ಇನ್ನೂ ಇದೇ ತಿಂಗಳಲ್ಲಿ 'ಮುಗುಳುನಗೆ' ಸಿನಿಮಾ ಸೆಟ್ಟೇರಲಿದೆ.