Don't Miss!
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಾರ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರಗಳು
ಪ್ರತಿವಾರದಂತೆ ಈ ವಾರವೂ ಕನ್ನಡದಲ್ಲಿ ಕಮರ್ಷಿಯಲ್ ಸಿನಿಮಾಗಳ ಜೊತೆ ಸಧುಬಿರುಚಿಯ ಚಿತ್ರಗಳು ಸೇರಿದಂತೆ ಒಟ್ಟು 4 ಚಿತ್ರಗಳು ತೆರೆ ಕಾಣುತ್ತಿದೆ.
ಪೂಜಾ ಗಾಂಧಿ ಅಭಿನಯದ 'ದಂಡುಪಾಳ್ಯ-2' ಈ ವಾರ ಬಿಡುಗಡೆಯಾಗುತ್ತಿರುವ ನಿರೀಕ್ಷೆಯ ಸಿನಿಮಾ. ಈಗಾಗಲೇ ದಂಡುಪಾಳ್ಯ ಮೊದಲ ಭಾಗದ ಮೂಲಕ ಇಡೀ ಸ್ಯಾಂಡಲ್ ವುಡ್ ನ್ನೇ ಬೆಚ್ಚಿಬೀಳಿಸಿದ್ದ ನರಹಂತರ ಕಥೆ ಮತ್ತೆ ಬರುತ್ತಿದೆ.
ಹಾಗಿದ್ರೆ, 'ದಂಡುಪಾಳ್ಯ-2' ಚಿತ್ರದ ಜೊತೆ ತೆರೆಕಾಣುತ್ತಿರುವ ಉಳಿದ ಮೂರು ಚಿತ್ರಗಳು ಯಾವುದು? ಆ ಚಿತ್ರಗಳ ಸ್ಪೆಷಾಲಿಟಿಗಳೇನು ಎಂಬುದನ್ನ ತಿಳಿದುಕೊಳ್ಳಲು ಮುಂದೆ ಓದಿ.....
ದಂಡುಪಾಳ್ಯ-2
ಶ್ರೀನಿವಾಸ್ ರಾಜು ನಿರ್ದೇಶಿಸಿ, ವೆಂಕಟ್ ನಿರ್ಮಾಣ ಮಾಡಿರುವ 'ದಂಡುಪಾಳ್ಯ-2' ಈ ವಾರ ತೆರೆ ಕಾಣುತ್ತಿದೆ. ಪೂಜಾಗಾಂಧಿ, ಮಕರಂದ್ ದೇಶಪಾಂಡೆ, ರವಿಕಾಳೆ, ಕರಿಸುಬ್ಬು, ರವಿಶಂಕರ್, ಸಂಜನಾ, ಶ್ರುತಿ, ಸುಚ್ಚೇಂದ್ರ ಪ್ರಸಾದ್, ಮುನಿ, ಡ್ಯಾನಿ, ಜಯದೇವ್, ಪೆಟ್ರೋಲ್ ಪ್ರಸನ್ನ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೆಂಕಟ್ಪ್ರಸಾದ್ ಛಾಯಾಗ್ರಹಣವಿದೆ.
'ದಂಡುಪಾಳ್ಯ' ಗ್ಯಾಂಗ್ ಬರುವ ದಿನಾಂಕ ಪಕ್ಕಾ ಆಯ್ತು.!
ಗ್ಯಾಪಲ್ಲೊಂದು ಸಿನಿಮಾ
ಆರ್ಯ ಆನ್ಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶರವಣ್ ವೈದೇಹಿ ಅವರು ನಿರ್ಮಿಸಿರುವ `ಗ್ಯಾಪಲ್ಲೊಂದು ಸಿನಿಮಾ` ಈ ವಾರ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಮಂಜು ಹೆದ್ದೂರು ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಶ್ರೀಧರ್ ಕಶ್ಯಪ್ ಸಂಗೀತ ನೀಡಿದ್ದಾರೆ. ಶಶಿಕುಮಾರ್, ಮಮತಾ ರಾಹುತ್, ಪೃಥ್ವಿರಾಜ್, ನವೀನ್, ಶರವಣ್, ರವಿಸೂರ್ಯ, ಪ್ರೇಮ್, ತಾರ, ಆವನಿ ಗೌಡ ಅಭಿನಯಿಸಿದ್ದಾರೆ.
ಹಳ್ಳಿ ಪಂಚಾಯಿತಿ
ಶ್ರೀ ವೈಷ್ಣವಿ ಎಂಟರ್ಟೈನ್ ಮೆಂಟ್ ಲಾಂಛನದಲ್ಲಿ ಪ್ರೇಮ ಯುವರಾಜು ಕಥೆ, ಚಿತ್ರಕಥೆ ರಚಿಸಿ ನಿರ್ಮಿಸಿರುವ 'ಹಳ್ಳಿ ಪಂಚಾಯಿತಿ' ಈ ವಾರ ರಾಜ್ಯಾಂದ್ಯಂತ ಬಿಡುಗಡೆಯಾಗುತ್ತಿದೆ. ಜಿ. ಉಮೇಶ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಹರಿಕಾವ್ಯ ಅವರ ಸಂಗೀತವಿದೆ. ಉಳಿದಂತೆ ಗಡ್ಡಪ್ಪ, ಸೆಂಚುರಿಗೌಡ, ಗೀತಾ, ಪ್ರೇಮ ಯುವರಾಜ್, ಅಭಿ, ಮೇಘನಾಗೌಡ, ಬೌಬೌಜಯರಾಂ, ವೈಷ್ಣವಿ, ಮಾ||ಭಾರ್ಗವ ಮುಂತಾದವರು ಅಭಿನಯಿಸಿದ್ದಾರೆ.
ಮಕ್ಕಳ ಚಿತ್ರ 'ಪುಟಾಣಿ ಸಫಾರಿ'
ಸ್ವರ್ಣಗಂಗಾ ಫಿಲಂಸ್ ಲಾಂಛನದಲ್ಲಿ ಬಿ.ಎಸ್.ಚಂದ್ರಶೇಖರ್ (ಕೇಬಲ್ ಚಂದ್ರಶೇಖರ್) ನಿರ್ಮಿಸಿರುವ ಮಕ್ಕಳ ಚಿತ್ರ 'ಪುಟಾಣಿ ಸಫಾರಿ' ಈ ವಾರ ರಾಜ್ಯಾದ್ಯಾಂತ ಬಿಡುಗಡೆಯಾಗುತ್ತಿದೆ. ರವೀಂದ್ರ ವಂಶಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವೀರ್ಸಮರ್ಥ್ ಸಂಗೀತ ಒದಗಿಸಿದ್ದಾರೆ, ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಮನೀಶ್ ಬಲ್ಲಾಳ್, ಸಹನಶ್ರೀ, ಕೈಲಾಶ್, ಟಿ.ಪಿ.ಜಗದೀಶ್, ವಿಜಯ್, ಮಾ||ರಾಕಿನ್, ಮಾ|| ರಾಜೀವ್, ಪ್ರಥಮ್, ಕು.ಬೃಂದ, ಕು.ಮಾನಸ ಮುಂತಾದವರು ಬಣ್ಣ ಹಚ್ಚಿದ್ದಾರೆ.