Don't Miss!
- Automobiles Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- News ಮಳೆ.. ಮಳೆ.. ಭರ್ಜರಿ ಮಳೆ.. ಬೇಸಿಗೆಯಲ್ಲೂ ಮಳೆ!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊಡಗಿನ ಕಣ್ಣೀರಿಗೆ ಕರವಸ್ತ್ರ ಆದ ಸಂಚಾರಿ ವಿಜಯ್ ಮತ್ತು ತಂಡ
ದರ್ಶನ್, ಸುದೀಪ್, ಯಶ್, ಗಣೇಶ್, ಶಿವಣ್ಣ, ಸಂಯುಕ್ತಾ ಹೊರನಾಡು, ಜಗ್ಗೇಶ್, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವರು ತಮ್ಮ ಕೈಲಾದ ಸಹಾಯವನ್ನ ಕೊಡಗಿನ ಜನತೆ ಮಾಡಿದ್ದಾರೆ. ಟ್ರಕ್, ಲಾರಿ, ವಾಹನಗಳ ಮೂಲಕ ಅಗತ್ಯ ವಸ್ತುಗಳನ್ನ ತಮ್ಮ ಅಭಿಮಾನಿಗಳ ಮೂಲಕ ಪೂರೈಸಿದ್ದಾರೆ.
ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು, ಕಳೆದ ಮೂರ್ನಾಲ್ಕು ದಿನದಿಂದ ಕೊಡಗಿನಲ್ಲೇ ಉಳಿದುಕೊಂಡು, ಕೊಡಗಿನ ಜನರ ಜೊತೆ ನಿಂತು ನೆರವಾಗುತ್ತಿದ್ದಾರೆ.
ಕೊಡಗಿನವರ ನೆರವಿಗೆ ಧಾವಿಸಿದ ಕನ್ನಡ ಚಿತ್ರರಂಗದ ತಾರೆಯರು
ಸಂಚಾರಿ ವಿಜಯ್, ಪತ್ರಕರ್ತ ಚಂದ್ರಚೂಡ್, ನಟ ಒರಟ ಪ್ರಶಾಂತ್, ಸಹ ನಿರ್ದೇಶಕ ಗೋರವಿ ಆಲ್ದೂರು ಸೇರಿದಂತೆ ಒಂದು ತಂಡವನ್ನ ಕಟ್ಟಿಕೊಂಡು ಕೊಡಗಿಗೆ ಹೋಗಿರುವ ಸಂಚಾರಿ ವಿಜಯ್ ಅವರು, ತಮ್ಮ ಕೈಲಾದ ಅಗತ್ಯ ವಸ್ತುಗಳನ್ನ ಸಂತ್ರಸ್ಥರಿಗೆ ತಲುಪಿಸಿದ್ದಾರೆ. ಅಷ್ಟೇ ಅಲ್ಲದೇ ಫೇಸ್ ಬುಕ್ ಲೈವ್ ನಲ್ಲಿ ಅಭಿಮಾನಿಗಳ ಜೊತೆ ಮಾತನಾಡಿ, ಅವರಿಂದ ಕೂಡ ಕೆಲವು ಔಷಧಿ ಹಾಗೂ ಅಗತ್ಯ ವಸ್ತುಗಳನ್ನ ಪಡೆದು, ನಿರಾಶ್ರಿತರಿಗೆ ತಲುಪಿಸು ಕೆಲಸ ಮಾಡಿದ್ದಾರೆ.
ಸಿ.ಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಿದ ನಟ ಶಿವರಾಜ್ ಕುಮಾರ್
ಸಾಮಾನ್ಯವಾಗಿ, ಸಿನಿಮಾ ನಟ-ನಟಿಯರು ಇಂತಹ ಸಮಯದಲ್ಲಿ ಹಣ ರೂಪದಲ್ಲಿ ಅಥವಾ ಅಗತ್ಯ ವಸ್ತುಗಳನ್ನ ಪೂರೈಸಿ ಸುಮ್ಮನಾಗ್ತಾರೆ. ಆದ್ರೆ, ಸಂಚಾರಿ ವಿಜಯ್ ಅವರು ಸ್ವತಃ ಸ್ಥಳಕ್ಕೆ ಭೇಟಿ ನೀಡಿ, ಯಾರಿಗೆ ಅಗತ್ಯ ವಸ್ತುಗಳು ಸಿಕ್ಕಿಲ್ವೋ ಅಂತವರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಒದ್ದೆಕಣ್ಣಿನಿಂದ ಮನಃಪೂರ್ವಕವಾಗಿ ಕೊಡಗಿನ ಪರವಾಗಿ ಎಲ್ಲರಿಗೂ ವಂದಿಸಿದ ರಶ್ಮಿಕಾ
ಸಾಮಾನ್ಯವಾಗಿ ನಿರಾಶ್ರಿತ ಕೇಂದ್ರ, ಗಂಜಿಕೇಂದ್ರಗಳಿಗೆ ಅಗತ್ಯ ವಸ್ತುಗಳು ಸಾಗುತ್ತಿದೆ. ಆದ್ರೆ, ದಿನಗೂಲಿ ಕಾರ್ಮಿಕರು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಜನರಿಗೆ ಅದು ಸರಿಯಾಗಿ ಸಿಗುತ್ತಿಲ್ಲ. ಇಂತಹ ಪ್ರದೇಶಗಳನ್ನ ಗುರುತಿಸಿ ಅವರಿಗೆ ಸಹಾಯ ಮಾಡುತ್ತಿದೆ ಸಂಚಾರಿ ವಿಜಯ್ ಮತ್ತು ತಂಡ.
ಸಿನಿಮಾ ನಟರು ಅಂದ್ರೆ ಕೇವಲ ತೆರೆಮೇಲೆ ಹೀರೋಯಿಸಂ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡು ಹೋಗುವುದು ಮಾತ್ರವಲ್ಲ, ಇಂತಹ ಕಷ್ಟದ ಸಮಯದಲ್ಲಿ ಜನರ ಜೊತೆ ಬೆರೆತು, ಜನರಲ್ಲಿ ತಾನು ಕೂಡ ಒಬ್ಬ ಆಗುವುದು ಎಲ್ಲದಕ್ಕಿಂತ ಮಿಗಿಲಾದ ಖುಷಿ. ಇಂತಹ ಕೆಲಸಕ್ಕೆ ಕೈಹಾಕಿರುವ ಸಂಚಾರಿ ವಿಜಯ್ ಮತ್ತು ತಂಡಕ್ಕೆ ಹ್ಯಾಟ್ಸಾಪ್.