Don't Miss!
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ ಪ್ರಚಾರ ಮಾಡಿದ್ದು ಏಕೆ? ಇದಕ್ಕೂ ಸುಮಲತಾಗೂ ಸಂಬಂಧ ಇದೆಯಾ?
- Automobiles ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- Lifestyle ರಸ್ತೆ ಬದಿಯ ಮರಗಳಿಗೆ ಬಣ್ಣ ಏಕೆ ಬಳಿದಿರುತ್ತಾರೆ..? ಕೆವಿನ್ ಪೀಟರ್ಸನ್ಗೆ ಈ ಪ್ರಶ್ನೆ ಕಾಡಿದ್ದೇಕೆ..?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವಣ್ಣನ ಮಾತಿಗೆ ಚಿತ್ರರಂಗದಲ್ಲಿ ಬೆಲೆ ಸಿಕ್ಕುತ್ತಾ?
ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಅವರು ಆರ್ಯನ್ ಶೂಟಿಂಗ್ ಮುಗಿಸಿಕೊಂಡು ಸಿಂಗಪುರದಿಂದ ಬೆಂಗಳೂರಿಗೆ ಬಂದಿದ್ದಾರೆ. ಡಬ್ಬಿಂಗ್ ಬೇಡ ಅನ್ನೋರಿಗೆ ಆನೆ ಬಲ ಬಂದಿದೆ. ಯಾಕಂದ್ರೆ ಕನ್ನಡ ಚಿತ್ರರಂಗದ ಮಟ್ಟಿಗೆ ರಾಜ್ ಕುಟುಂಬ ಅಂದರೆ ಚಿತ್ರರಂಗ, ಚಿತ್ರರಂಗ ಅಂದ್ರೆ ರಾಜ್ ಕುಟುಂಬ. ಚಿತ್ರರಂಗ ಯಾವ ನಿರ್ಧಾರ ತೆಗೆದುಕೊಂಡ್ರು ಅದಕ್ಕೆ ರಾಜ್ ಕುಟುಂಬದ ಅಂಕಿತ ಇದ್ದೇ ಇರುತ್ತೆ.
ಆದರೆ ಈ ಬಾರಿ ಅನ್ನದಾತರು ಅನ್ನಸಿಕೊಂಡಿರೋ ನಿರ್ಮಾಪಕರು ತಿರುಗಿಬಿದ್ದಿರೋದು ನೋಡಿದ್ರೆ ಯಾಕೋ ಒಳಗೊಳಗೇ ಒಂದು ಅನುಮಾನ ಶುರುವಾಗಿದೆ. ಕನ್ನಡ ಚಿತ್ರರಂಗ ಈಗಲೂ ರಾಜ್ ಕುಟುಂಬದ ಮಾತು ಕೇಳುತ್ತಾ ಅನ್ನೋದು. [ಡಬ್ಬಿಂಗ್ ವಿರುದ್ಧ ಮತ್ತೆ ಮೂರನೇ ಕಣ್ಣು ತೆರೆದ ಶಿವಣ್ಣ]
2012ರಲ್ಲಿ ಅಣ್ಣಾವ್ರ ಹುಟ್ಟುಹಬ್ಬದ ದಿನ ಏಪ್ರಿಲ್ 24ರಂದು ಶಿವಣ್ಣ ಶತಾಯಗತಾಯ ಡಬ್ಬಿಂಗ್ ಬರೋದಕ್ಕೆ ಬಿಡೋದಿಲ್ಲ ಅಂತ ಗುಡುಗಿದರು. ಈಗ ಮತ್ತೆ ಅದೇ ರೀತಿ ಡಬ್ಬಿಂಗ್ ವಿವಾದ ಚರ್ಚೆಗೆ ಗ್ರಾಸವಾಗಿದೆ. ['ಭಜರಂಗಿ' ಚಿತ್ರ ವಿಮರ್ಶೆ]
ಶಿವಣ್ಣನನ್ನ ಅಣ್ಣ ಎಂದು ಗೌರವಿಸೋ ಚಿತ್ರರಂಗ ಶಿವಣ್ಣ ಪ್ರತಿಭಟನೆಗೆ ಬರೋಕೆ ಕರೆ ನೀಡಿದರೆ ಒಟ್ಟಾಗಿ ಬಂದು ನಿಲ್ಲುತ್ತಾ. ಶಿವಣ್ಣನ ಮಾತಿಗೆ ಎಷ್ಟರಮಟ್ಟಿಗೆ ಬೆಲೆ ಸಿಕ್ಕುತ್ತೆ ಅನ್ನೋ ಕುತೂಹಲದ ಜೊತೆಗೆ ಸಣ್ಣ ಆತಂಕವೂ ಚಿತ್ರರಂಗದ ಮಂದಿಯ ಮುಖದಲ್ಲಿ ಮನೆಮಾಡಿದೆ.