Just In
Don't Miss!
- Lifestyle
ದಿನ ಭವಿಷ್ಯ: ನಿಮ್ಮ ರಾಶಿಗೆ ಶನಿವಾರ ದಿನ ಹೇಗಿರಲಿದೆ ನೋಡಿ
- News
ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚಿವ ಕೆ. ಸುಧಾಕರ್
- Education
KSCCF Recruitment 2021: 45 ಲೆಕ್ಕಿಗರು, ಎಫ್ಡಿಎ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಮಾರ್ಚ್ ತಿಂಗಳಿನಲ್ಲಿ ಹ್ಯುಂಡೈ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ
- Sports
ಐಎಸ್ಎಲ್: ಸಮಬಲ ಸಾಧಿಸಿದ ಗೋವಾ ಎಫ್ಸಿ, ಮುಂಬೈ ಎಫ್ಸಿ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯಶ್, ಉಪ್ಪಿ, ವಿಷ್ಣು ನಂತರ ಶಕ್ತಿದೇವತೆ ಮೊರೆ ಹೋದ ರಚಿತಾ ರಾಮ್
ಎಂತಹ ಸ್ಟಾರ್ ಗಳೇ ಆದರೂ ಗುರುಗಳು ಹಾಗೂ ದೇವರ ಭಕ್ತರಾಗಿರುತ್ತಾರೆ. ಅದೇ ರೀತಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕಲಾವಿದರು ಶಕ್ತಿದೇವತೆಗಳ ಪೂಜಿಸುತ್ತಾ ಬಂದಿದ್ದಾರೆ. ಹ್ಯಾಟ್ರಿಕ್ ಹೀರೋ ಶಿಂಷಾ ಮಾರಮ್ಮ ದೇವಿಯನ್ನ ಪೂಜೆ ಮಾಡಿದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಚಾಮುಂಡೇಶ್ವರಿಯನ್ನ ಪೂಜಿಸುತ್ತಾರೆ.
ಇನ್ನು ಅನೇಕ ಸ್ಟಾರ್ ಗಳ ಆರಾಧ್ಯ ದೈವ ಆಗಿರುವ ಈ ದೇವತೆಯ ಮೊರೆ ಹೋಗಿದ್ದಾರೆ ಚಂದನವನದ ಡಿಂಪಲ್ ಕ್ವೀನ್ ರಚಿತಾ ರಾಮ್. ತುಮಕೂರಿನ ಬಳಿ ಇರುವ ದಸರಿಘಟ್ಟದಲ್ಲಿರುವ ಚೌಡೇಶ್ವರಿ ದೇವಿಯ ದೇವಾಸ್ಥಾನಕ್ಕೆ ರಚಿತಾ ರಾಮ್ ಇತ್ತಿಚಿಗಷ್ಟೇ ಭೇಟಿ ಕೊಟ್ಟಿದ್ದಾರೆ.
ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ದರಸಿಘಟ್ಟ ಚೌಡೇಶ್ವರಿ ದೇವಿಯ ಮೊರೆ ಹೋಗಿರೋ ರಚಿತಾ ರಾಮ್ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ದೇವಿಯ ಪೂಜೆ ಮಾಡುವ ಅರ್ಚಕರ ಬಳಿ ಮಾತನಾಡಿದ್ದಾರಂತೆ.
ದಚ್ಚು ಚಿತ್ರಕ್ಕೆ ಮತ್ತೆ ರಚ್ಚುನೇ ನಾಯಕಿ
ರಚಿತಾ ರಾಮ್ ಅವರಿಗೂ ಮುಂಚೆ ಸಾಕಷ್ಟು ಸ್ಟಾರ್ ಕಲಾವಿದರು ಈ ದೇವಾಲಯಕ್ಕೆ ಬೇಟಿ ಕೊಟ್ಟಿದ್ದಾರೆ. ಶಕ್ತಿದೇವತೆ ಎಂದೇ ಪ್ರಖ್ಯಾತಿ ಪಡೆದಿರುವ ಧಸರಿಘಟ್ಟದ ದೇವಾಲಯಕ್ಕೆ ಯಶ್ಮ ಉಪೇಂದ್ರ ಹಾಗೂ ಮೈಸೂರಿನ ಮಹಾರಾಜರು, ಪ್ರಧಾನಿ ನರೇಂದ್ರ ಮೋದಿ ಇನ್ನೂ ಅನೇಕರು ಬಂದು ದೇವಿಗೆ ಪೂಜೆ ಸಲ್ಲಿಸಿದ್ದಾರೆ.